*    ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಅರಣ್ಯ ಪ್ರದೇಶದಲ್ಲಿ ರಕ್ಷಣೆ*    ಪಕ್ಷಿ ಪ್ರೇಮಿ ವಿಜಯ್ ಇಟ್ಟಗಿ ನೇತೃತ್ವದಲ್ಲಿ ಕೃಷ್ಣಮೃಗ ಮರಿ ರಕ್ಷಣೆ*    ಬೇಟೆಗಾರನ ಪತ್ತೆ ಹಚ್ಚಲು ಜಾಲ ಬೀಸಿದ ಅರಣ್ಯ ಇಲಾಖೆ  

ವಿಜಯನಗರ(ಸೆ.20): ಬೇಟೆಗಾರನ ಕೈಗೆ ಸೇರುತ್ತಿದ್ದ ಕೃಷ್ಣ ಮೃಗ ಮರಿಯನ್ನ ಪಕ್ಷಿ ಪ್ರೇಮಿಯೊಬ್ಬರು ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಅರಣ್ಯ ಪ್ರದೇಶದಲ್ಲಿ ಇಂದು(ಸೋಮವಾರ) ನಡೆದಿದೆ.

Add Asianetnews Kannada as a Preferred SourcegooglePreferred

ಪಕ್ಷಿ ಪ್ರೇಮಿ ವಿಜಯ್ ಇಟ್ಟಗಿ ನೇತೃತ್ವದಲ್ಲಿ ಕೃಷ್ಣಮೃಗ ಮರಿಯನ್ನ ರಕ್ಷಣೆ ಮಾಡಲಾಗಿದೆ. ರಕ್ಷಿಸಿದ ಕೃಷ್ಣ ಮೃಗ ಮರಿಯನ್ನು ಅರಣ್ಯ ಇಲಾಖೆಯ ಸುರ್ಪದಿಗೆ ನೀಡಲಾಗಿದೆ. 

ಅವ್ಯಾಹತವಾಗಿ ನಡೆಯುತ್ತಿದೆ ಕೃಷ್ಣಮೃಗ ಬೇಟೆ :ಹಾಡಹಗಲೇ ಕೃತ್ಯ

ಹಗರಿಬೊಮ್ಮನ ಹಳ್ಳಿ ಭಾಗದಲ್ಲಿ ಕೃಷ್ಣ ಮೃಗಗಳ ಸಂಖ್ಯೆ ಬಹಳಷ್ಟು ಕಡಿಮೆ ಇವೆ. ಇರೋ ಸಂತತಿಯನ್ನು ಬೇಟೆಗಾರರ ಹೊಟ್ಟೆಗೆ ಸೇರಿದ್ರೆ ಇರೋ ಸಂತತಿ ಕೂಡ ನಾಶವಾಗುತ್ತದೆ. ಬೇಟೆಗಾರನ ಪತ್ತೆ ಹಚ್ಚಲು ಅರಣ್ಯ ಇಲಾಖೆ ಜಾಲ ಬೀಸಿದ್ದಾರೆ.