* ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಅರಣ್ಯ ಪ್ರದೇಶದಲ್ಲಿ ರಕ್ಷಣೆ* ಪಕ್ಷಿ ಪ್ರೇಮಿ ವಿಜಯ್ ಇಟ್ಟಗಿ ನೇತೃತ್ವದಲ್ಲಿ ಕೃಷ್ಣಮೃಗ ಮರಿ ರಕ್ಷಣೆ* ಬೇಟೆಗಾರನ ಪತ್ತೆ ಹಚ್ಚಲು ಜಾಲ ಬೀಸಿದ ಅರಣ್ಯ ಇಲಾಖೆ
ವಿಜಯನಗರ(ಸೆ.20): ಬೇಟೆಗಾರನ ಕೈಗೆ ಸೇರುತ್ತಿದ್ದ ಕೃಷ್ಣ ಮೃಗ ಮರಿಯನ್ನ ಪಕ್ಷಿ ಪ್ರೇಮಿಯೊಬ್ಬರು ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಅರಣ್ಯ ಪ್ರದೇಶದಲ್ಲಿ ಇಂದು(ಸೋಮವಾರ) ನಡೆದಿದೆ.
Add Asianetnews Kannada as a Preferred Source

ಪಕ್ಷಿ ಪ್ರೇಮಿ ವಿಜಯ್ ಇಟ್ಟಗಿ ನೇತೃತ್ವದಲ್ಲಿ ಕೃಷ್ಣಮೃಗ ಮರಿಯನ್ನ ರಕ್ಷಣೆ ಮಾಡಲಾಗಿದೆ. ರಕ್ಷಿಸಿದ ಕೃಷ್ಣ ಮೃಗ ಮರಿಯನ್ನು ಅರಣ್ಯ ಇಲಾಖೆಯ ಸುರ್ಪದಿಗೆ ನೀಡಲಾಗಿದೆ.

ಅವ್ಯಾಹತವಾಗಿ ನಡೆಯುತ್ತಿದೆ ಕೃಷ್ಣಮೃಗ ಬೇಟೆ :ಹಾಡಹಗಲೇ ಕೃತ್ಯ
ಹಗರಿಬೊಮ್ಮನ ಹಳ್ಳಿ ಭಾಗದಲ್ಲಿ ಕೃಷ್ಣ ಮೃಗಗಳ ಸಂಖ್ಯೆ ಬಹಳಷ್ಟು ಕಡಿಮೆ ಇವೆ. ಇರೋ ಸಂತತಿಯನ್ನು ಬೇಟೆಗಾರರ ಹೊಟ್ಟೆಗೆ ಸೇರಿದ್ರೆ ಇರೋ ಸಂತತಿ ಕೂಡ ನಾಶವಾಗುತ್ತದೆ. ಬೇಟೆಗಾರನ ಪತ್ತೆ ಹಚ್ಚಲು ಅರಣ್ಯ ಇಲಾಖೆ ಜಾಲ ಬೀಸಿದ್ದಾರೆ.
