Asianet Suvarna News Asianet Suvarna News

ಸಿಹಿ ಸುದ್ದಿ ನೀಡಿದ್ರು ಬಿಜೆಪಿ ಸಂಸದ ಬಚ್ಚೇಗೌಡ

ಬಿಜೆಪಿ ಸಂಸದ ಬಿ ಎನ್ ಬಚ್ಚೇಗೌಡ ಅವರು ತಮ್ಮ ಕ್ಷೇತ್ರದ ಜನತೆಗೆ ಗುಡ್ ನ್ಯೂಸ್ ನೀಡಿದ್ದಾರೆ. ಏನದು ಗುಡ್ ನ್ಯೂಸ್ ..?

Passenger Train Will Run Between Hindupura to yeshwantpur snr
Author
Bengaluru, First Published Dec 8, 2020, 2:22 PM IST

ಚಿಕ್ಕಬಳ್ಳಾಪುರ (ಡಿ.08) :  ಜಿಲ್ಲೆಯ ಗೌರಿಬಿದನೂರು, ದೊಡ್ಡಬಳ್ಳಾಪುರ ತಾಲೂಕುಗಳ ಜನರಿಗೆ ಅನುಕೂಲವಾಗುವಂತೆ ಹಿಂದೂಪುರದಿಂದ ಯಶವಂತಪುರದವರೆಗೆ ಮತ್ತೆ ಪ್ಯಾಸೆಂಜರ್‌ ರೈಲು ಸಂಚಾರವನ್ನು ಆರಂಭಿಸಲಾಗಿದ್ದು, ಈ ರೈಲು ಪರೀಕ್ಷಾರ್ಥವಾಗಿ 10 ದಿನಗಳ ಕಾಲ ಸಂಚರಿಸಲಿದೆ.

 ಸಾರ್ವಜನಿಕರು ಈ ರೈಲು ಸೇವೆಯನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಿ.ಎನ್‌.ಬಚ್ಚೇಗೌಡ ತಿಳಿಸಿದ್ದಾರೆ.

ಮಂಗಳೂರು - ಬೆಂಗಳೂರು ಮಧ್ಯೆ ವಿಶೇಷ ರೈಲು : ಇಲ್ಲಿದೆ ಟೈಮ್ ಟೇಬಲ್ .

ಹಿಂದೂಪುರ-ಯಶವಂತಪುರ ರೈಲು ಸಂಚಾರದ ಕುರಿತು ಸೋಮವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ರೈಲು ಸಂಚಾರ ಸೇವೆಗೆ ರೈಲ್ವೆ ಇಲಾಖೆ ಮತ್ತೆ ಹಂತ ಹಂತವಾಗಿ ಚಾಲನೆ ನೀಡುತ್ತಿದೆ.

ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗೌರಿಬಿದನೂರು, ತೊಂಡೇಬಾವಿ ಮತ್ತು ದೊಡ್ಡಬಳ್ಳಾಪುರದ ಮೂಲಕ 10 ದಿನಗಳ ಕಾಲ ಪರೀಕ್ಷಾರ್ಥವಾಗಿ ಹಿಂದೂಪುರ-ಯಶವಂತಪುರ ಪ್ಯಾಸೆಂಜರ್‌ ರೈಲು ಸಂಚರಿಸಲಿದೆ.

Follow Us:
Download App:
  • android
  • ios