* ವೈವಿಧ್ಯತೆಯಲ್ಲಿ ಏಕತೆ ಎನ್ನುವುದಕ್ಕೆ ಭಾರತ ನಿದರ್ಶನ* ಐವತ್ತು ವರ್ಷಗಳ ಹಿಂದೆ ಗಂಡ ಕಟ್ಟಿಸಿದ್ದ ದೇವಾಲಯದ ಪೂಜೆಗೆ ಬಂದ ಮುಸ್ಲಿಂ ಮಹಿಳೆ* ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿರುವ ದೇವಾಲಯ 

ಶಿವಮೊಗ್ಗ(ಅ. 12) ವೈವಿಧ್ಯತೆಯಲ್ಲಿ ಏಕತೆ ನಮ್ಮ ದೇಶದ ಹೆಮ್ಮೆ.. ಅದೆಷ್ಟೋ ಸಮುದಾಯಗಳು. ಪಂಥಗಳು ಇದ್ದರೂ ಒಂದಾಗಿ ಸಾಗುತ್ತಾರೆ. ಈಗ ಹೇಳುತ್ತಿರುವ ಸುದ್ದಿಯೂ ಅಂಥದ್ದೇ ಒಂದು ನಿದರ್ಶನ. ಸಮುದಾಯಗಳ ನಡುವಿನ ಬಂಧವನ್ನು ಇವು ಹೇಳುತ್ತವೆ.

Add Asianetnews Kannada as a Preferred SourcegooglePreferred

ತನ್ನ ಪತಿ ನಿರ್ಮಾಣ ಮಾಡಿದ್ದ ದೇವಾಲಯಲಕ್ಕೆ ಪೂಜೆ ಸಲ್ಲಿಸಲು ಮುಸ್ಲಿಂ (Muslim) ಮಹಿಳೆಯೊಬ್ಬರು ಬಂದಿದ್ದಾರೆ. ನವರಾತ್ರಿ (Navratri ) ಪೂಜೆಯಲ್ಲಿ ಭಾಗವಹಿಸಿದ್ದಾರೆ.

ನಿಮ್ಮ ರಾಶಿಗೆ ದುರ್ಗಾದೇವಿ ಕೃಪೆ ಇದೇಯಾ? 

ಶಿವಮೊಗ್ಗ(Shivamogga) ಜಿಲ್ಲೆ ಸಾಗರದ (Sagar) ದೇವಾಲಯಕ್ಕೆ ಗಂಡನ ನೆನಪಿನ ದೇವಾಲಯಕ್ಕೆ ಪೂಜೆ ಸಲ್ಲಿಸಲು ಬಂದಿದ್ದಾರೆ. ಕಳದೆ ಐವತ್ತು ವರ್ಷಗಳ ಹಿಂದೆ ನನ್ನ ಪರಿ ಭಗವತಿ ಅಮ್ಮನವರ ದೇವಾಲಯ ನಿರ್ಮಾಣಕ್ಕೆ ಕೈಜೋಡಿಸಿದ್ದರು. ಹಿಂದು ಸಮುದಾಯಕ್ಕೆ ನಂತರ ಹಸ್ತಾಂತರ ಮಾಡಿದ್ದರು ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು. 

ರಾಜಕಾರಣ ಮತ್ತು ನಾಯಕರ ಆರೋಪಗಳು ಏನೇ ಇದ್ದರೂ ಜನರ ನಡುವಿನ ಬಾಂಧವ್ಯ ಹಾಗೆ ಉಳಿದುಕೊಂಡಿದೆ ಎನ್ನುವುದಕ್ಕೆ ಈ ಘಟನೆಯೇ ಒಂದು ನಿದರ್ಶನ.