Asianet Suvarna News Asianet Suvarna News

'ಕಮಲ ಅರಳುವುದು ನಿಶ್ಚಿತ : ಜೆಡಿಎಸ್‌ ವಿರುದ್ಧ ಅಸಮಾಧಾನ'

ಜೆಡಿಎಸ್‌ನಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಾಗಲಿಲ್ಲ. ಈ ನಿಟ್ಟಿನಲ್ಲಿ ಕಮಲ ಅರಳುವುದು ನಿಶ್ಚಿತ ಎಂದು ಭವಿಷ್ಯ ನುಡಿಯಲಾಗಿದೆ

Narayanagowda slams JDS Leaders snr
Author
Bengaluru, First Published Dec 20, 2020, 3:56 PM IST

ಮಂಡ್ಯ (ಡಿ.20):  ಹಾಸನ ಮತ್ತು ಮಂಡ್ಯ ಜಿಲ್ಲೆ​ಗ​ಳ​ನ್ನು ತನ್ನೆ​ರಡು ಕಣ್ಣು​ಗಳು ಎಂದು ಹೇಳಿ​ಕೊಂಡು ಬಂದಿದ್ದ ಜೆಡಿ​ಎಸ್‌ ಹಾಸ​ನಕ್ಕೆ ಬೆಣ್ಣೆ ಹಚ್ಚಿ, ಮಂಡ್ಯದ ಕಣ್ಣಿಗೆ ಸುಣ್ಣ ಹಚ್ಚುವ ಮೂಲಕ ಜಿಲ್ಲೆ​ಯ ಅಭಿ​ವೃ​ದ್ಧಿ​ಯನ್ನು ಶೂನ್ಯ​ವಾ​ಗಿಸಿದೆ ಎಂದು ಜಿಲ್ಲಾ ಉಸ್ತು​ವಾರಿ ಸಚಿವ ಕೆ.ಸಿ. ನಾರಾ​ಯ​ಣ​ಗೌಡ ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಮತ್ತು ಜೆಡಿ​ಎಸ್‌ ಮುಖಂಡ​ರಿಗೆ ತಿರು​ಗೇಟು ನೀಡಿ​ದರು.

ನಗ​ರದ ಎ.ಸಿ.ಮಾದೇ​ಗೌಡ ಕಲ್ಯಾಣ ಮಂಟ​ಪ​ದಲ್ಲಿ ನಡೆದ ಬಿಜೆಪಿ ಕಾರ‍್ಯ​ಕರ್ತರ ಸಭೆ​ಯಲ್ಲಿ ಭಾಗ​ವ​ಹಿಸಿ ಮಾತ​ನಾ​ಡಿ, ಮಂಡ್ಯ ಜಿಲ್ಲೆ ಬಗ್ಗೆ ನಮಗೆ ವಿಶೇ​ಷ​ವಾದ ಪ್ರೀತಿ ಇದೆ ಎಂದು ಹೇಳು​ತ್ತಲೇ ಮಂಡ್ಯ ಜನ​ರನ್ನು ದಿಕ್ಕು ತಪ್ಪಿ​ಸುವ ಕೆಲಸ ಮಾಡಿ​ದರು. ರೈತರ ಜೀವ​ನಾ​ಡಿ​ಯಾ​ಗಿ​ರುವ ಎರಡು ಸಕ್ಕರೆ ಕಾರ್ಖಾನೆ​ಗಳ ಪ್ರಾರಂಭಕ್ಕೆ ಯಾವುದೇ ಯೋಜನೆ ರೂಪಿ​ಸ​ಲಿಲ್ಲ ಎಂದು ಟೀಕಿ​ಸಿ​ದ​ರು.

ಪಾಂಡ​ವ​ಪುರ ಮತ್ತು ಮೈಷು​ಗರ್‌ ಸಕ್ಕರೆ ಕಾರ್ಖಾನೆ​ಗಳ ಪ್ರಾರಂಭಕ್ಕೆ ಮತ್ತೆ ಈ ಜಿಲ್ಲೆಯ ವರ​ಪುತ್ರ ಬಿ.ಎಸ್‌. ಯಡಿ​ಯೂ​ರಪ್ಪ ಅವರೇ ಮುಖ್ಯ​ಮಂತ್ರಿ​ಯಾಗಿ ಬರ​ಬೇ​ಕಾ​ಯಿತು. ಈ ಹಿಂದೆ ಮುಖ್ಯ​ಮಂತ್ರಿ​ಯಾ​ಗಿದ್ದ ಅವ​ಧಿ​ಯಲ್ಲಿ ಎರಡೂ ಕಾರ್ಖಾನೆ​ಗ​ಳನ್ನು ಚಾಲನೆ ಮಾಡಿ​ದ್ದರು. ಈಗ ಪಿಎಸ್‌ಎಸ್‌ಕೆ ಗುತ್ತಿಗೆ ಆಧಾ​ರ​ದಲ್ಲಿ ಪ್ರಾರಂಭ​ವಾ​ಗಿದೆ. ಒಂದೆ​ರಡು ತಿಂಗ​ಳಲ್ಲಿ ಮೈಷು​ಗರ್‌ ಸಹ ಪ್ರಾರಂಭ​ವಾ​ಗ​ಲಿದೆ ಎಂದು ಭರ​ವಸೆ ನೀಡಿ​ದರು.

BJP ಜೊತೆಗೆ ಜೆಡಿಎಸ್ ವಿಲೀನವಾಗುತ್ತಾ? ಬಿಜೆಪಿ ಉಪಾಧ್ಯಕ್ಷ ಸ್ಫೋಟಕ ಸುಳಿವು .

ದೊಡ್ಡ ಸಮಾ​ವೇಶ:  ನಾನು ಆಯ್ಕೆಯಾದ ಸ್ವಲ್ಪ ದಿನ​ಗ​ಳಲ್ಲೇ ಮುಖ್ಯ​ಮಂತ್ರಿ​ಗಳು, ಸಚಿ​ವರು, ಕೇಂದ್ರ ಸಚಿ​ವ​ರನ್ನು ಮಂಡ್ಯಕ್ಕೆ ಕರೆಯಿಸಿ ದೊಡ್ಡ ಮಟ್ಟದ ಸಮಾ​ವೇಶ ಮಾಡ​ಬೇ​ಕು. ಆ ಮೂಲಕ ಜಿಲ್ಲೆಯ ಜನ​ರಿಗೆ ಕೃತ​ಜ್ಞತೆ ಸಲ್ಲಿ​ಸ​ಬೇಕು ಎಂದು ಬಿಜೆಪಿ ಅಧ್ಯ​ಕ್ಷರು ಮತ್ತು ನಾನು ತೀರ್ಮಾನ ಮಾಡಿ​ದ್ದೆವು. ಆದರೆ, ಅಷ್ಟ​ರಲ್ಲಿ ಕೋವಿಡ್‌-19 ಮಹಾ​ಮಾರಿ ವಕ್ಕ​ರಿ​ಸಿದ ಕಾರಣ ಕಾರ‍್ಯ​ಕ್ರಮ ಮಾಡ​ಲಾ​ಗ​ಲಿಲ್ಲ. ಮುಂದಿನ ದಿನ​ಗ​ಳಲ್ಲಿ ದೊಡ್ಡ ಮಟ್ಟದ ಸಮಾ​ವೇಶ ಮಾಡಿಸಿ ಯಡಿ​ಯೂ​ರಪ್ಪ ಅವರ ಬಾಯಿ​ಯಿಂದಲೇ ಜಿಲ್ಲೆಯ ಅಭಿ​ವೃ​ದ್ಧಿಗೆ ಯೋಜನೆ ರೂಪಿ​ಸಿ​ರು​ವು​ದನ್ನು ಹೇಳಿ​ಸು​ತ್ತೇನೆ ಎಂದರು.

ಈ ಹಿಂದೆ ಮುಖ್ಯ​ಮಂತ್ರಿ​ಯಾ​ಗಿದ್ದ ಯಡಿ​ಯೂ​ರಪ್ಪ ಅವರು ಕೆ.ಆರ್‌.ಪೇಟೆ ತಾಲೂ​ಕಿಗೆ 650 ಕೋಟಿ ರು. ಅನು​ದಾನ ನೀಡಿ ಅಭಿ​ವೃದ್ಧಿ ಕಾರ‍್ಯ​ಗ​ಳಿಗೆ ಒತ್ತು ನೀಡಿ​ದ್ದರು. ಅದೇ ರೀತಿ ಈಗಲೂ ಸಹ ಜಿಲ್ಲೆಯ ಅಭಿ​ವೃ​ದ್ಧಿಗೆ ಕಂಕಣ ತೊಟ್ಟಿ​ದ್ದಾರೆ ಎಂ​ದರು.

ಜಿಲ್ಲೆ​ಯಲ್ಲಿ ಕಮಲ ಅರ​ಳು​ವುದು ನಿಶ್ಚಿತ:  .ಆರ್‌. ಪೇಟೆ​ಯಿಂದ ಕಮಲ ಅರ​ಳು​ವುದು ಪ್ರಾರಂಭ​ವಾ​ಗಿದೆ. ಇದೀಗ ಜಿಲ್ಲಾ​ದ್ಯಂತ ಪಸ​ರಿ​ಸು​ತ್ತಿದೆ. ಇದಕ್ಕೆ ಗ್ರಾಪಂ ಚುನಾ​ವ​ಣೆಯೇ ಸಾಕ್ಷಿ. ಗ್ರಾಪಂ ಚುನಾ​ವ​ಣೆ​ಯಲ್ಲಿ ಹೆಚ್ಚಿನ ಮಟ್ಟ​ದಲ್ಲಿ ಬಿಜೆಪಿ ಬೆಂಬ​ಲಿ​ತರು ಆಯ್ಕೆ​ಯಾ​ಗು​ತ್ತಾ​ರೆ. ನನ್ನ ಕಾಲಿಗೆ ಪೆಟ್ಟಾ​ಗಿ​ರು​ವು​ದ​ರಿಂದ ಎಲ್ಲಡೆ ಓಡಾ​ಡಲು ಸಾಧ್ಯ​ವಾ​ಗು​ತ್ತಿಲ್ಲ. ಇಲ್ಲ​ದಿದ್ದರೆ ಜಿಲ್ಲಾ​ದ್ಯಂತ ಸಂಚ​ರಿಸಿ ಶಕ್ತಿ ತುಂಬುವ ಕೆಲಸ ಮಾಡು​ತ್ತಿದ್ದೆ. ಮುಂದಿನ ತಾಪಂ, ಜಿಪಂ ಚುನಾ​ವ​ಣೆ​ಯಲ್ಲಿ ಬಿಜೆಪಿ ಕಮಲ ಹಿಡಿ​ಯು​ವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತ​ಪ​ಡಿ​ಸಿ​ದರು.

ಬಿಜೆಪಿ ರಾಜ್ಯ ಪ್ರಧಾನ ಕಾರ‍್ಯ​ದರ್ಶಿ ರವಿ​ಕು​ಮಾರ್‌, ಬಿಜೆಪಿ ಜಿಲ್ಲಾ​ಧ್ಯಕ್ಷ ಕೆ.ಜೆ. ವಿಜ​ಯ​ಕು​ಮಾರ್‌, ರಾಜ್ಯ ಕಾರ‍್ಯ​ಕಾ​ರಿಣಿ ಸಮಿತಿ ಸದಸ್ಯ ಡಾ. ಸಿದ್ದ​ರಾ​ಮಯ್ಯ, ವಿಭಾ​ಗೀಯ ಪ್ರಭಾರಿ ಮೈ.ವಿ. ರವಿ​ಶಂಕರ್‌, ಮಾಜಿ ಜಿಲ್ಲಾ​ಧ್ಯ​ಕ್ಷ​ರಾದ ಎಚ್‌.ಪಿ. ಮಹೇಶ್‌, ನಾಗ​ಣ್ಣ​ಗೌಡ, ಮೈಷು​ಗರ್‌ ಅಧ್ಯಕ್ಷ ಶಿವ​ಲಿಂಗೇ​ಗೌಡ, ಮುಖಂಡ​ರಾದ ಎನ್‌. ಶಿವಣ್ಣ, ಎಸ್‌.ಪಿ.​ಸ್ವಾಮಿ ಇತ​ರರು ಸಮಾ​ರಂಭ​ದ​ಲ್ಲಿ ಭಾಗ​ವ​ಹಿ​ಸಿ​ದ್ದರು.

Follow Us:
Download App:
  • android
  • ios