ರಾಜ್ಯ ಬಿಜೆಪಿಯಲ್ಲಿ ಮೈಸೂರಿನ ಐವರು ಮುಖಂಡರು ಮಹತ್ವದ ಸ್ಥಾನ ಪಡೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ನಡೆದ ನೇಮಕಾತಿ ಪ್ರಕ್ರಿಯೆ ನಡೆದಿದೆ.

ಮೈಸೂರು (ಆ.27):  ರಾಜ್ಯ ಎಸ್ಟಿಮೋರ್ಚಾ ಕೋಶಾಧ್ಯಕ್ಷರಾಗಿ ನಗರಪಾಲಿಕೆ ಸದಸ್ಯ ಶಿವಕುಮಾರ್‌ ಅವರನ್ನು ನೇಮಿಸಲಾಗಿದೆ. ಶಿವಕುಮಾರ್‌ ಅವರು ಈ ಹಿಂದೆ 2ನೇ ವಾರ್ಡ್‌ನಿಂದ (ಸುಣ್ಣದಕೇರಿ) ಸತತ ಎರಡು ಬಾರಿ, ಪ್ರಸ್ತುತ 47ನೇ ವಾರ್ಡ್‌ನಿಂದ (ಕುವೆಂಪುನಗರ) ಮೈಸೂರು ನಗರ ಪಾಲಿಕೆಗೆ ಆಯ್ಕೆಯಾಗಿದ್ದಾರೆ. 

Add Asianetnews Kannada as a Preferred SourcegooglePreferred

‘ಹ್ಯಾಟ್ರಿಕ್‌ ಸದಸ್ಯ‘ ಎನಿಸಿಕೊಂಡಿರುವ ಶಿವಕುಮಾರ್‌ ಮಿತಭಾಷಿ, ಕ್ರಿಯಾಶೀಲರು ಹಾಗೂ ಅತ್ಯುತ್ತಮ ಸಂಘಟಕರು. ಯಾವುದೇ ಪ್ರಚಾರ ಬಯಸದೇ ತಮ್ಮ ವಾರ್ಡ್‌ನ ಕೆಲಸ ಕಾರ್ಯ ಮಾಡಿಕೊಂಡು, ಪಕ್ಷದ ಸಂಘಟನೆಗೆ ಶ್ರಮಿಸುತ್ತಾ ಬಂದಿದ್ದಾರೆ. 2010-11ನೇ ಸಾಲಿನಲ್ಲಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪಾಲಿಕೆಯಲ್ಲಿ ಅತ್ಯುತ್ತಮ ಬಜೆಟ್‌ ಮಂಡಿಸಿದ್ದರು. ಅಲ್ಲದೇ, ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಅಣ್ಣಾಮಲೈ ಬಿಜೆಪಿಗೆ; ಆಯ್ಕೆ ಹಿಂದಿದೆ ಈ ಕಾರಣಗಳು..!.

ಬಿಜೆಪಿ ಕಿಸಾನ್‌ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ಪ್ರಸನ್ನಗೌಡ ಅವರನ್ನು ನೇಮಿಸಲಾಗಿದೆ. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಅವರು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾಗಿದ್ದರು. ಅಲ್ಲದೇ, ಜನಚೇತನ ಟ್ರಸ್ಟ್‌ ರಚಿಸಿಕೊಂಡು ಕೆರೆಕಟ್ಟೆಉಳಿಸುವ ಹೋರಾಟ ನಡೆಸಿದ್ದಾರೆ.

ನನ್ನ ಮೈಂಡ್‌ ಸೆಟ್‌ಗೆ ಬೇರೆ ಪಾರ್ಟಿ ಆಗಲ್ಲ: ಸುವರ್ಣ ನ್ಯೂಸ್ ಜತೆ ಅಣ್ಣಾಮಲೈ ಖಡಕ್ ಮಾತು...

ಅಲ್ಪಸಂಖ್ಯಾತರ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಅನಿಲ್‌ ಥಾಮಸ್‌, ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್‌ ಬಾಬು, ಯುವ ಮೋರ್ಚಾ ಉಪಾಧ್ಯಕ್ಷರಾಗಿ ಎಚ್‌.ಎಸ್‌. ಜಯಶಂಕರ್‌ ಅವರನ್ನು ನೇಮಿಸಲಾಗಿದೆ.