ಕಲಬುರಗಿ ಜಿಲ್ಲೆಗೆ ಆಡಳಿತ ಪಕ್ಷದ ಡಬಲ್ ಎಂಜಿನ್ ಆಡಳತಕ್ಕಿಂತ ವಿರೋಧ ಪಕ್ಷದಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ಇದ್ದಾಗಲೇ ಅತೀ ಹೆಚ್ಚಿನ ಲಾಭವಾಗಿರುವುದು ಕಟುವಾಸ್ತವ: ಪ್ರಿಯಾಂಕ್ ಖರ್ಗೆ
ಕಲಬುರಗಿ(ಜ.21): ಕಲಬುರಗಿ ಪ್ರತ್ಯೇಕ ರೈಲ್ವೆ ಕಚೇರಿ ಸ್ಥಾಪನೆ ಮಾಡೋದು ಮಾತು ಒತ್ತಟ್ಟಿಗಿರಲಿ, ಕಲಬುರಗಿ ನಿಲ್ದಾಣದಲ್ಲಿ ಓಡಾಡುವ ರೈಲುಗಳನ್ನು ನಿಲ್ಲಿಸಲು ಈ ಬಿಜೆಪಿ ಜನಪ್ರತಿನಿಧಿಗಳಿಗೆ ಆಗುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯಮಾಡಿದ್ದಾರೆ.
ಕಲಬುರಗಿಯಲ್ಲಿ ನಿಲ್ಲದೆ ಹೋಗುತ್ತಿರುವ ವರದಿಯನ್ನು ಕನ್ನಡಪ್ರಭ ಪತ್ರಿಕೆ ನಿನ್ನೆ(ಬುಧವಾರ) ಪ್ರಕಟಿಸಿತ್ತು.
ಕಲಬುರಗಿಯಲ್ಲಿ ನಿಲ್ಲದೆ ಓಡುತ್ತಿವೆ ರೈಲುಗಳು: ಇಲಾಖೆಯ ಅಲಕ್ಷತನಕ್ಕೆ ಜನ ಹೈರಾಣ
ಈ ವರದಿಯನ್ನ ಪ್ರಸ್ತಾಪಿಸಿರುವ ಪ್ರಿಯಾಂಕ್ ಖರ್ಗೆ, ಕಲಬುರಗಿ ಜಿಲ್ಲೆಗೆ ಆಡಳಿತ ಪಕ್ಷದ ಡಬಲ್ ಎಂಜಿನ್ ಆಡಳತಕ್ಕಿಂತ ವಿರೋಧ ಪಕ್ಷದಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ಇದ್ದಾಗಲೇ ಅತೀ ಹೆಚ್ಚಿನ ಲಾಭವಾಗಿರುವುದು ಕಟುವಾಸ್ತವ ಎಂದು ಬಿಜೆಪಿ ಸಂಸದರು ಮತ್ತು ಶಾಸಕರತ್ತ ಮಾತಿನ ಚಾಟಿ ಬೀಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 21, 2021, 2:15 PM IST