ಬಲೆ ತೆಲಿಪಾಲೆ: ಮಸ್ಕಿರಿ ಕುಡ್ಲ ತಂಡಕ್ಕೆ ಪ್ರಶಸ್ತಿ
ಬಲೆ ತೆಲಿಪಾಲೆ ಕಾರ್ಯಕ್ರಮದಲ್ಲಿ ಮಸ್ಕಿರಿ ಕುಡ್ಲ ತಂಡಕ್ಕೆ ಪ್ರಶಸ್ತಿ ಬಂದಿದೆ. 2 ಲಕ್ಷ ರು. ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಲಾಗಿದೆ. ದ್ವಿತೀಯ ಸ್ಥಾನವನ್ನು ಸಮರ ಸಾರಥಿ ಪಡೆದಿದ್ದು, 1 ಲಕ್ಷ ರು. ನಗದು ಬಹುಮಾನ ಪಡೆದಿದೆ.
ಮಂಗಳೂರು(ಫೆ.28) : ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನ ಹಾಗೂ ನಮ್ಮ ಟಿವಿ ವಾಹಿನಿ ಜಂಟಿ ಆಶ್ರಯದಲ್ಲಿ ಮೂಡಿ ಬಂದಿರುವ ಬಲೆ ತೆಲಿಪಾಲೆ-7 ಅಂತಿಮ ಸುತ್ತು ಮಂಗಳೂರಿನ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಂತಿಮ ಸುತ್ತಿನಲ್ಲಿ 9 ತಂಡಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನವನ್ನು ಮಸ್ಕಿರಿ ಕುಡ್ಲ ಪಡೆದಿದ್ದು, 2 ಲಕ್ಷ ರು. ನಗದು ಬಹುಮಾನ ಹಾಗೂ ಸ್ಮರಣಿಕೆ ಪಡೆಯಿತು. ದ್ವಿತೀಯ ಸ್ಥಾನವನ್ನು ಸಮರ ಸಾರಥಿ ಪಡೆದಿದ್ದು, 1 ಲಕ್ಷ ರು. ನಗದು ಬಹುಮಾನ, ತೃತೀಯ ಸ್ಥಾನವನ್ನು ರಾಜಶ್ರೀ ಕುಡ್ಲ 50 ಸಾವಿರ ರು. ನಗದು ಬಹುಮಾನ, ನಾಲ್ಕನೇ ಸ್ಥಾನವನ್ನು ಕಲಾಶ್ರೀ ಕುಡ್ಲ 30 ಸಾವಿರ ರು. ನಗದು ಬಹುಮಾನ ಪಡೆದುಕೊಂಡಿತು.
ಮಂಗಳೂರು-ಬೆಂಗಳೂರು ರಾತ್ರಿ ರೈಲು ಬುಕ್ಕಿಂಗ್ ರದ್ದು
ತೀರ್ಪುಗಾರರಾಗಿ ಸಂಗೀತ ನಿರ್ದೇಶಕ ಗುರುಕಿರಣ್, ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿಹಾಗೂ ನಮ್ಮ ಟಿವಿಯ ನಿರ್ದೇಶಕ ಶಿವಶರಣ್ ಶೆಟ್ಟಿಪಾಲ್ಗೊಂಡಿದ್ದರು.