ಅನ್ಯಕೋಮಿನ ಯುವತಿಯೊಂದಿಗಿನ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೋರ್ವನಿಗೆ ಮನ ಬಂದಂತೆ ಥಳಿಸಿದ ಘಟನೆ ನಡೆದಿದೆ. 

ಹಾಸನ [ಡಿ.24]: ಅನ್ಯಕೋಮಿನ ಯುವತಿಯನ್ನು ಪ್ರೀತಿ ಮಾಡುತ್ತಿದ್ದ ಕಾರಣಕ್ಕೆ ಹಿಂದೂ ಯುವಕನಿಗೆ ಥಳಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. 

Add Asianetnews Kannada as a Preferred SourcegooglePreferred

ಹಾಸನದ ಸಕಲೇಶಪುರ ತಾಲೂಕಿನ ಮಲ್ಲಗದ್ದೆ ಗ್ರಾಮದ ನಂದಿಶ್ ಎಂಬ ಯುವಕನಿಗೆ ಮನಬಂದಂತೆ ಥಳಿಸಲಾಗಿದೆ. 

ಸಕಲೇಶಪುರದ ಮುಸಲಿಂ ಯುವತಿಯೊಂದಿಗೆ ಆಟೋದಲ್ಲಿ ತೆರಳುತ್ತಿದ್ದ ವೇಳೆ ಬಂಧ ಯುವಕರ ಗುಂಪೊಂದು ನಂದೀಶ್ ಮೇಲೆ ಹಲ್ಲೆ ಮಾಡಿದೆ. 

BJP ಸಂಸದರೋರ್ವರ ಕಾರು ಚಾಲಕನಿಂದ ಕಿರುಕುಳ : ಮಹಿಳೆ ಆತ್ಮಹತ್ಯೆ...

ಈ ವೇಳೆ ಹಲ್ಲೆ ಮಾಡದಂತೆ ಕೇಳಕೊಂಡರೂ ಗುಂಪು ಆತನಿಗೆ ಥಳಿಸಿದ್ದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. 

ಬಳಿಕ ಪೊಲೀಸರು ಆಟೋ ಚಾಲಕ ಹಾಗೂ ಯುವಕ ಯುವತಿಯನ್ನು ವಿಚಾರಣೆ ನಡೆಸಿದ್ದು, ಇಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಹಲ್ಲೆ ನಡೆಸಿದ್ದಾಗಿ ಹೇಳಿದ್ದಾರೆ.