Asianet Suvarna News Asianet Suvarna News

ಅರ್ಹರಿಗೆ ಅನ್ಯಾ​ಯ​ವಾ​ಗಲು ಬಿಡೆವು: ಮಂಜುನಾಥ್‌

ಜನ​ಪ್ರ​ತಿ​ನಿ​ಧಿ​ಯಾಗಿ ತಮ್ಮನ್ನು ಆಯ್ಕೆ ಮಾಡಿದ ಜನರ ವಿಶ್ವಾ​ಸಕ್ಕೆ ಚ್ಯುತಿ ಬರ​ದಂತೆ ​ಹಕ್ಕು ಪತ್ರ, ಸಾಗು​ವಳಿ ಚೀಟಿ ವಿತ​ರಣೆ ಜೊತೆಗೆ ಕ್ಷೇತ್ರದ ಅಭಿ​ವೃದ್ಧಿಗೆ ಪ್ರಾಮಾ​ಣಿ​ಕ​ವಾಗಿ ಶ್ರಮಿ​ಸಿ​ರು​ವು​ದಾ​ಗಿ ಮಾಗಡಿ ಕ್ಷೇತ್ರ ಶಾಸಕ ಎ.ಮಂಜು​ನಾಥ್‌ ಹೇಳಿ​ದ​ರು.

 Land ownership Authority letter to more than 300 people who applied under 94C snr
Author
First Published Jan 22, 2023, 5:52 AM IST

  ರಾಮ​ನ​ಗರ :  ಜನ​ಪ್ರ​ತಿ​ನಿ​ಧಿ​ಯಾಗಿ ತಮ್ಮನ್ನು ಆಯ್ಕೆ ಮಾಡಿದ ಜನರ ವಿಶ್ವಾ​ಸಕ್ಕೆ ಚ್ಯುತಿ ಬರ​ದಂತೆ ​ಹಕ್ಕು ಪತ್ರ, ಸಾಗು​ವಳಿ ಚೀಟಿ ವಿತ​ರಣೆ ಜೊತೆಗೆ ಕ್ಷೇತ್ರದ ಅಭಿ​ವೃದ್ಧಿಗೆ ಪ್ರಾಮಾ​ಣಿ​ಕ​ವಾಗಿ ಶ್ರಮಿ​ಸಿ​ರು​ವು​ದಾ​ಗಿ ಮಾಗಡಿ ಕ್ಷೇತ್ರ ಶಾಸಕ ಎ.ಮಂಜು​ನಾಥ್‌ ಹೇಳಿ​ದ​ರು.

ತಾಲೂ​ಕಿನ ಕೈಲಾಂಚ ಹೋಬಳಿ ಹುಚ್ಚ​ಮ್ಮ​ನ​ದೊಡ್ಡಿಯಲ್ಲಿ ನಡೆದ ಜಿಲ್ಲಾ​ಧಿ​ಕಾ​ರಿ​ಗಳ ನಡೆ ಹಳ್ಳಿ ಕಡೆ ಕಾರ್ಯ​ಕ್ರ​ಮ​ದಲ್ಲಿ ಮಾಗಡಿ ವಿಧಾ​ನ​ಸಭಾ ಕ್ಷೇತ್ರದ ಬಿಡದಿ ಹೋಬಳಿ ಗೋಪ​ಹಳ್ಳಿ ಗ್ರಾಮ ಪಂಚಾ​ಯಿತಿ ವ್ಯಾಪ್ತಿಯ ಬಿಲ್ಲೆ​ದೊಡ್ಡಿ, ಎಂ.ಗೋ​ಪಳ್ಳಿ, ಮಾರು​ತಿ​ಪುರ (ವ​ಡ್ಡ​ರ​ದೊ​ಡ್ಡಿ) ಗ್ರಾಮದ 55 ಫಲಾ​ನು​ಭ​ವಿ​ಗ​ಳಿಗೆ ಸಾಗು​ವಳಿ ಚೀಟಿ ವಿತ​ರಿಸಿ ಮಾತ​ನಾ​ಡಿ​ದ ಅವರು, ಕ್ಷೇತ್ರ​ದಲ್ಲಿ ಅಭಿ​ವೃದ್ಧಿ ಕಾರ್ಯ​ಗ​ಳಿಗೆ ಮಾತ್ರ ಆದ್ಯತೆ ನೀಡದೆ ಬಗರ್‌ ಹುಕುಂ ಸಾಗು​ವ​ಳಿ​ದಾ​ರ​ರಿಗೆ ಸಾಗು​ವಳಿ ಚೀಟಿ ಹಾಗೂ ಹಕ್ಕು ಪತ್ರ ನೀಡಲು ಕ್ರಮ ವಹಿ​ಸ​ಲಾ​ಗಿದೆ. ಜಿಲ್ಲಾ​ಧಿ​ಕಾ​ರಿ​ಗಳ ನಡೆ ಹಳ್ಳಿ ಕಡೆ ಕಾರ್ಯ​ಕ್ರ​ಮ​ದ​ಲ್ಲಿಯೇ 94ಸಿ ಅಡಿ​ಯಲ್ಲಿ ಅರ್ಜಿ ಹಾಕಿದ 300ಕ್ಕೂ ಹೆಚ್ಚು ಜನ​ರಿಗೆ ಹಕ್ಕು ಪತ್ರ ಕೊಡಿ​ಸ​ಲಾ​ಗಿದೆ ಎಂದ​ರು.

1991ರಿಂದಲೂ ಅರ್ಜಿ ಹಾಕಿ​ದ​ವ​ರಿಗೆ ಸಾಗು​ವಳಿ ಚೀಟಿ ನೀಡಿ​ರ​ಲಿಲ್ಲ. ಸಾಗು​ವ​ಳಿ​ದಾ​ರ​ರಿಗೆ ಹಕ್ಕು ಕೊಡಿ​ಸ​ಲೇ​ಬೇ​ಕೆಂಬ ಉದ್ದೇ​ಶ​ದಿಂದ ಇದ್ದಂತಹ ತಾಂತ್ರಿಕ ಸಮ​ಸ್ಯೆ​ಗ​ಳನ್ನು ಬಗೆ​ಹ​ರಿ​ಸಿದ್ದೇವೆ. ಸದ್ಯಕ್ಕೆ ಬಿಬಿ​ಎಂಪಿ ವ್ಯಾಪ್ತಿ​ಯ​ಲ್ಲಿ​ರುವ ಗ್ರಾಮ​ಗಳ ಜನ​ರಿಗೆ ಸಾಗು​ವಳಿ ಚೀಟಿ ನೀಡ​ಲು ಆಗು​ವು​ದಿಲ್ಲ. ಬಿಲ್ಲೆ​ದೊಡ್ಡಿ, ಎಂ.ಗೋ​ಪಳ್ಳಿ, ಮಾರು​ತಿ​ಪುರ ಹಾಗೂ ರಾಮ​ನ​ಹಳ್ಳಿ ಭಾಗ​ದ​ವ​ರಿಗೆ ಸಾಗು​ವಳಿ ಚೀಟಿ ನೀಡ​ಲಾ​ಗು​ತ್ತಿದೆ. ಉಳಿ​ದ​ವ​ರಿಗೆ ಶೀಘ್ರ​ದ​ಲ್ಲಿಯೇ ವಿತ​ರಿ​ಸಲು ಕ್ರಮ ವಹಿ​ಸ​ಲಾ​ಗು​ವುದು. ಭೂಮಿ ಉಳುಮೆ ಮಾಡು​ತ್ತಿ​ರುವ ಅರ್ಹ ರೈತ​ರಿಗೆ ಅನ್ಯಾ​ಯ​ವಾ​ಗಲು ನಾವು ಅವ​ಕಾಶ ನೀಡು​ವು​ದಿಲ್ಲ ಎಂದು ಹೇಳಿ​ದರು.

ಸರ್ಕಾರಿ ಭೂಮಿ​ಯನ್ನು ನಂಬಿ ಅನೇ​ಕರು ಜೀವನ ಕಟ್ಟಿ​ಕೊಂಡಿ​ದ್ದಾರೆ. ಕೋಟ್ಯಂತರ ರುಪಾಯಿ ಬೆಲೆ ಬಾಳುವ ಆ ಭೂಮಿಗೆ ಮಧ್ಯ​ವ​ರ್ಧಿ​ಗಳ ಹಾವಳಿ ಇಲ್ಲದೆ ಪಾರ​ದ​ರ್ಶ​ಕ​ವಾಗಿ ಸಾಗು​ವಳಿ ಚೀಟಿ ಹಾಗೂ ಹಕ್ಕು ಪತ್ರ ಕೊಡಿ​ಸಿ​ದ್ದೇವೆ. ಹಕ್ಕು​ಪತ್ರ ಪಡೆದ ಸಮಾ​ಧಾನ ನಿಮ​ಗಾ​ದರೆ, ಹಕ್ಕು ಕೊಡಿ​ಸಿದ ತೃಪ್ತಿ ನಮ​ಗಿದೆ. ಇದೊಂದು ಪುಣ್ಯದ ಕೆಲಸ ಎಂದು ಮಂಜು​ನಾಥ್‌ ತಿಳಿ​ಸಿ​ದ​ರು.

ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಮಾತ​ನಾಡಿ, ನಾನು ಶಾಸ​ಕಿ​ಯಾದ ಮೇಲೆ ಈ ಭಾಗ​ದಲ್ಲಿ ಹೆಚ್ಚಿನ ಅಭಿ​ವೃದ್ಧಿ ಕೆಲ​ಸ​ಗಳು ಆಗಿವೆ. ಜನರ ಭಾವ​ನೆ​ಗ​ಳಿಗೆ ಧಕ್ಕೆ ಆಗ​ದಂತೆ ಪ್ರಾಮಾ​ಣಿ​ಕ​ವಾಗಿ ಕೆಲಸ ಮಾಡಿದ ತೃಪ್ತಿ ನನ​ಗಿದೆ. ನಾನು ಮಾಜಿ ಮುಖ್ಯ​ಮಂತ್ರಿ ಪತ್ನಿ ಎಂದು ಯಾರೂ ಕ್ಷೇತ್ರಕ್ಕೆ ಅನು​ದಾನ ನೀಡ​ಲಿಲ್ಲ. ಸರ್ಕಾ​ರದ ಮಟ್ಟ​ದಲ್ಲಿ ಹೋರಾಟ ನಡೆ​ಸಿಯೇ ಅನು​ದಾನ ತಂದಿ​ದ್ದೇನೆ. ಹುಚ್ಚ​ಮ್ಮ​ನ​ದೊ​ಡ್ಡಿ​ಯಲ್ಲಿ ಏತ ನೀರಾ​ವರಿ ಯೋಜನೆ, ಶುದ್ಧ ಕುಡಿ​ಯುವ ನೀರಿನ ಘಠಕ, ಸಮು​ದಾಯ ಭವನ ನಿರ್ಮಾ​ಣಕ್ಕೆ ಹೆಚ್ಚಿನ ಶ್ರಮ ವಹಿ​ಸಿದೆ. ಒಬ್ಬ ಮಹಿಳೆ ಇಷ್ಟೆಲ್ಲ ಕೆಲಸ ಮಾಡಿ​ದ್ದಾ​ಳಲ್ಲ ಎಂದು ನೀವು ನನ್ನ ಬೆನ್ನು ತಟ್ಟ​ಬೇಕು ಎಂದ​ರು.

ನೀವು ಮನೆ ಮಗ ಕುಮಾ​ರ​ಸ್ವಾಮಿ ಅವ​ರನ್ನು ಬೆಳೆ​ಸಿ​ದ​ವರು. ನನಗೂ ಆಶೀ​ರ್ವಾದ ಮಾಡಿ​ದ್ದೀರಿ. ನಾವೆಂದೂ ನಿಮ್ಮ​ಗಳ ಭಾವ​ನೆ​ಗ​ಳಿಗೆ ಧಕ್ಕೆಯಾಗು​ವಂತಹ ಕೆಲಸ ಮಾಡಿಲ್ಲ. ಅದ್ದ​ರಿಂದ ನನ್ನ ಮಗ ನಿಖಿಲ್‌ ಕುಮಾ​ರ​ಸ್ವಾಮಿ ಹಾಗೂ ಶಾಸಕ ಎ.ಮಂಜು​ನಾಥ್‌ ಮೇಲೂ ನಿಮ್ಮ ಆಶೀ​ರ್ವಾದ ಇರಲಿ ಎಂದು ಅನಿತಾ ಮನವಿ ಮಾಡಿ​ದರು.

ಕಾರ‍್ಯಕ್ರಮದಲ್ಲಿ ತಹ​ಸೀ​ಲ್ದಾರ್‌ ವಿಜಯ…ಕುಮಾರ್‌, ಉಪ ತಹಸೀಲ್ದಾರ್‌ಗಳಾದ ರುದ್ರಮ್ಮ, ಭಾಸ್ಕರ್‌, ರಾಜಶ್ವ ನಿರೀಕ್ಷಕರಾದ ಪುಟ್ಟರಾಜು, ರಾಜಶೇಖರ್‌, ಜೆಡಿಎಸ್‌ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಎಚ್‌.ಕೆ.ಲೋಕೇಶ್‌, ಮುಖಂಡರಾದ ಎಚ್‌.ಬಿ.ಸಿದ್ದರಾಜು, ಎಚ್‌.ಜಿ.ಲೋಕೇಶ್‌, ಧನಂಜಯ, ಎಚ್‌.ಪಿ.​ಕು​ಮಾರ್‌, ಉಮೇಶ್‌, ಶಿವ​ರಾಜು, ಅಂಗಡಿ ಜಯ​ರಾ​ಮ​ಯ್ಯ, ಸುರೇಶ್‌, ಪಿಡಿಒ ಗೋಪಳ್ಳಿ ಲೋಕೇಶ್‌,ಕಾರ್ಯ​ದರ್ಶಿ ಚಂದ್ರ​ಶೇ​ಖರ್‌, ಗ್ರಾಪಂ ಅಧ್ಯಕ್ಷ ರಾಮಚಂದ್ರಯ್ಯ, ಸದಸ್ಯರಾದ ನವೀನ್‌ ಕುಮಾರ್‌, ಅನಸೂಯ, ನಾಗರಾಜು, ಟಿಎಚ್‌ಒ ಶಶಿಕಲಾ ಇತ​ರರು ಹಾಜ​ರಿ​ದ್ದರು.

Follow Us:
Download App:
  • android
  • ios