Asianet Suvarna News Asianet Suvarna News

ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೆರವಿಗೆ ಸುದೀಪ ಸಹಾಯವಾಣಿ

ಉತ್ತರ ಕರ್ನಾಟಕದಲ್ಲಿ ಜಲಪ್ರವಾಹ/ ನೆರವಿಗೆ ಧಾವಿಸಿದ   ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ/ ನೆರವು ನೀಡಲು ಸಹಾಯವಾಣಿ/ ಹುಬ್ಬಳ್ಳಿ, ಯಾದಗಿರಿ, ಕಲ್ಬುರ್ಗಿ ಜನರಿಗಾಗಿ ಸಹಾಯವಾಣಿ 

kiccha sudeep charitable trust helpline for North Karnataka Flood victims mah
Author
Bengaluru, First Published Oct 15, 2020, 10:14 PM IST

ಬೆಂಗಳೂರು(ಅ. 15)  ಮಹಾ ಮಳೆಗೆ ಸಿಲುಕಿರೋ ಜನರ ಸೇವೆಗೆ  ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ  ಮುಂದಾಗಿದೆ.  ಉತ್ತರ ಕರ್ನಾಟಕದ ಜನರಿಗೆ ಸಹಾಯ ಮಳೆಗೆ ಸಿಲುಕಿ ಜೀವನ ನೆಡೆಸಲು ಕಷ್ಟ ಪಡುತ್ತಿರುವವರಿಗಾಗಿ ಸಹಾಯವಾಣಿ ಆರಂಭ  ಮಾಡಿದೆ.

6360334455 ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಲು ಮನವಿ ಮಾಡಿಕೊಳ್ಳಲಾಗಿದ್ದು ಮುಖ್ಯವಾಗಿ ರಾಯಚೂರು, ಹುಬ್ಬಳ್ಳಿ, ಯಾದಗಿರಿ, ಕಲ್ಬುರ್ಗಿ ಜನರಿಗಾಗಿ ಸಹಾಯವಾಣಿ ತೆರೆಯಲಾಗಿದೆ. 
ಬದುಕು ನಡೆಸಲು ಕಷ್ಟ ಪಡುತ್ತಿರುವವರ ನೆರವಿಗೆ ಧಾವಿಸಿದ ಕಿಚ್ಚನ ಟ್ರಸ್ಟ್  ಈಗಾಗಲೇ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನ ಮಾಡಿದೆ.

ಹೃದಯ ಚಕ್ರವರ್ತಿ; ಆಟೋ ಚಾಲಕನ ತಂಗಿಗೆ ಅಣ್ಣನಾದ ಸುದೀಪ್

ಶುಲ್ಕ ಕಟ್ಟಲಾಗದ ವಿದ್ಯಾರ್ಥಿನಿಗೂ ನೆರವು ನೀಡಿತ್ತು. ಮದುವೆಗೆ ಸಮಸ್ಯೆ ಎದುರಿಸುತ್ತಿದ್ದ ಕುಟುಂಬಕ್ಕೂ ಟ್ರಸ್ಟ್ ಹಣಕಾಸಿನ ನೆರವು ನೀಡಿತ್ತು. 

kiccha sudeep charitable trust helpline for North Karnataka Flood victims mah

 

Follow Us:
Download App:
  • android
  • ios