Asianet Suvarna News Asianet Suvarna News

.‘ಕನ್ನಡಿಗರು ಆಡಳಿತ ಸೇವೆಗೆ ಬರಬೇಕು’

ಕನ್ನಡ ಸೇವೆ ಎಂದರೆ ಕೇವಲ ಕವಿತೆ, ಕವನ, ಕಾದಂಬರಿ ರಚಿಸುವುದಷ್ಟೇ ಅಲ್ಲ, ಸಮಾಜಮುಖಿ ಕೆಲಸಗಳಾಗಬೇಕಾದರೆ ಅಧಿಕಾರ ಮುಖ್ಯ. ಕನ್ನಡಿಗರು ಹೆಚ್ಚಾಗಿ ಆಡಳಿತ ಸೇವೆಗೆ ಬರಬೇಕು. ಅನುಕೂಲ, ಅಧಿಕಾರ ಹಾಗೂ ಸೇವೆಯ ದೃಷ್ಟಿಯಿಂದ ಯುಪಿಎಸ್‌ಸಿ ಅವಶ್ಯಕ. ಇಲ್ಲಿ ಪ್ರತಿಭೆಗಿಂತ ಹೆಚ್ಚಾಗಿ ಪರಿಶ್ರಮ ಮುಖ್ಯ ಎಂದು ಕನ್ನಡ ಸಾಹಿತ್ಯ ವಿಮರ್ಶಕ ಮತ್ತು ಸಂಸ್ಕೃತಿ ಚಿಂತಕ ಪ್ರೊ. ನರಹಳ್ಳಿ ಬಾಲಸುಬ್ರಮಣ್ಯ ತಿಳಿಸಿದರು.

 Kannadigas should come to administrative service  snr
Author
First Published Jan 18, 2023, 6:45 AM IST

 ತುಮಕೂರು :  ಕನ್ನಡ ಸೇವೆ ಎಂದರೆ ಕೇವಲ ಕವಿತೆ, ಕವನ, ಕಾದಂಬರಿ ರಚಿಸುವುದಷ್ಟೇ ಅಲ್ಲ, ಸಮಾಜಮುಖಿ ಕೆಲಸಗಳಾಗಬೇಕಾದರೆ ಅಧಿಕಾರ ಮುಖ್ಯ. ಕನ್ನಡಿಗರು ಹೆಚ್ಚಾಗಿ ಆಡಳಿತ ಸೇವೆಗೆ ಬರಬೇಕು. ಅನುಕೂಲ, ಅಧಿಕಾರ ಹಾಗೂ ಸೇವೆಯ ದೃಷ್ಟಿಯಿಂದ ಯುಪಿಎಸ್‌ಸಿ ಅವಶ್ಯಕ. ಇಲ್ಲಿ ಪ್ರತಿಭೆಗಿಂತ ಹೆಚ್ಚಾಗಿ ಪರಿಶ್ರಮ ಮುಖ್ಯ ಎಂದು ಕನ್ನಡ ಸಾಹಿತ್ಯ ವಿಮರ್ಶಕ ಮತ್ತು ಸಂಸ್ಕೃತಿ ಚಿಂತಕ ಪ್ರೊ. ನರಹಳ್ಳಿ ಬಾಲಸುಬ್ರಮಣ್ಯ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯ ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಮಂಗಳವಾರ ಆಯೋಜಿಸಿದ್ದ ಬದುಕು ಕಟ್ಟುವ ದಾರಿ -ಯುಪಿಎಸ್‌ಸಿ ಪರೀಕ್ಷಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸೇವೆಗಳಲ್ಲಿ ಕನ್ನಡಿಗರ ಸಂಖ್ಯೆ ಕ್ಷೀಣಿಸುತ್ತಿದೆ. ಯುಪಿಎಸ್‌ಸಿಯಂಥ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಾಮುಖ್ಯತೆಯನ್ನು ಅರಿಯುವಲ್ಲಿ ಯುವ ಸಮೂಹ ಹಿಂದೆ ಬಿದ್ದಿರುವುದು ನಮ್ಮ ರಾಜ್ಯಕ್ಕೆ ಆಗುವ ನಷ್ಟ. ಕೇಂದ್ರ ಸೇವೆಯ ಅಧಿಕಾರದಲ್ಲಿ ಕನ್ನಡಿಗರಿದ್ದರೆ ರಾಜ್ಯದ ಬೊಕ್ಕಸಕ್ಕೆ ಹಣ ಬರುವುದರಲ್ಲಿ ಅನುಮಾನವಿಲ್ಲ. ಅದರಿಂದ ಅಭಿವೃದ್ಧಿಯ ಕೆಲಸಗಳಾಗಲಿವೆ ಎಂದು ಹೇಳಿದರು.

ಸಾಮಾಜಿಕ ಜವಾಬ್ದಾರಿ ಪ್ರತಿಯೊಬ್ಬರಲ್ಲೂ ಬಂದಾಗಲೇ ಆಡಳಿತ, ಅಧಿಕಾರ ಸ್ಥಾನಮಾನದ ಬೆಲೆ ಅರಿತು ಸುಖಾಪೇಕ್ಷೆಗಳನ್ನು ತ್ಯಾಗ ಮಾಡಿ, ಸ್ಪರ್ಧಾತ್ಮಕ ಗುಣ ಬೆಳೆದು, ಸೇವಾಮನೋಭಾವದ ಪ್ರೇರಣೆಯಾಗಿ ಯುಪಿಎಸ್‌ಸಿ ಅಂಥ ಸವಾಲನ್ನು ಎದುರಿಸಿ ಗೆಲುವು ಪಡೆಯಲು ಸಾಧ್ಯ ಎಂದು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.

ಪ್ರತೀ ಯಶಸ್ಸಿಗೂ ಪ್ರೇರಣೆ ಮುಖ್ಯ. ನಮ್ಮ ಎದುರಲ್ಲೇ ಸಾಕಷ್ಟುಉದಾಹರಣೆಗಳಿವೆ. ಮೆಡಿಕಲ್‌, ಎಂಜಿನಿಯರಿಂಗ್‌ ವಿದ್ಯಾರ್ಥಿಗಳೇ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಳ್ಳೆಯ ರಾರ‍ಯಂಕ್‌ ಪಡೆದು ಯಶಸ್ಸು ಸಾಧಿಸುತ್ತಿದ್ದಾರೆ. ಗ್ರಾಮೀಣ ಭಾಗದ, ಕನ್ನಡ ಹಿನ್ನಲೆ ಇರುವ ವಿದ್ಯಾರ್ಥಿಗಳೂ ಯುಪಿಎಸ್‌ಸಿ ಪಾಸ್‌ ಮಾಡಬಹುದು. ಮೂರು ಹಂತಗಳ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಹಂತ ಪ್ರಿಲಿಮ್ಸ್‌ ಕ್ಲಿಯರ್‌ ಆಗಬೇಕಾದರೆ ಕನ್ನಡ, ಇಂಗ್ಲಿಷ್‌ ದಿನಪತ್ರಿಕೆ ಓದುವುದು ಅಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪ್ರೊ.ಅಣ್ಣಮ್ಮ, ಕನ್ನಡ ವಿಭಾಗದ ಪ್ರಾಧ್ಯಾಪಕ ಪೊ›.ನಿತ್ಯಾನಂದ ಬಿ.ಶೆಟ್ಟಿ, ಪೊ›.ಡಿ. ವಿ. ಪರಮಶಿವಮೂರ್ತಿ, ಡಾ. ಪಿ. ಎಂ.ಗಂಗಾಧರಯ್ಯ, ನಾಗಭೂಷಣ್‌ ಇದ್ದರು.

marks Card  ವೈರಲ್

 

ದೇಶದ ಅತ್ಯುನ್ನತ ಸ್ಪರ್ಧಾತ್ಮಕ ಪರೀಕ್ಷೆ ಯುಪಿಎಸ್ಸಿ (UPSC) ಬರೆಯಬೇಕೆಂದು ಸಾವಿರಾರು ಮಂದಿ ಕನಸು ಕಾಣುತ್ತಾರೆ. ಆದ್ರೆ ಕೆಲವರ ಕನಸು ಮಾತ್ರ ನನಸಾಗುತ್ತದೆ. ಪ್ರತಿ ವರ್ಷ ಅದೆಷ್ಟೋ ಮಂದಿ ಪರೀಕ್ಷೆಗೆ ತಯಾರಿ ನಡೆಸ್ತಾರೆ. ಕೆಲವರಷ್ಟೇ ಅದರಲ್ಲಿ ಸಕ್ಸಸ್ ಕಾಣುತ್ತಾರೆ. ಇನ್ನು ಐಎಎಸ್ (IAS) ಆಗಬೇಕೆಂದು ಕನಸು ಕಾಣುವ ಯುವಜನತೆ, ಈಗಾಗಲೇ ಸಾಧನೆಯ ಶಿಖರವೇರಿದ ಹಾದಿ, ಅವರ ಅಂಕಪಟ್ಟಿ ನಿಜಕ್ಕೂ ಸ್ಪೂರ್ತಿದಾಯಕ. ಐಎಎಸ್ ಪಾಸ್ ಮಾಡಿದವರ ವ್ಯಾಸಂಗ, ಜೀವನ ಶೈಲಿ, ನಡೆ-ನುಡಿ ಎಲ್ಲವೂ ಇತರೆ ಆಕಾಂಕ್ಷಿಗಳಿಗೆ ಮಾರ್ಗದರ್ಶಿ. ಅದೇ ರೀತಿ ಶಾಲಾ ಹಂತದಲ್ಲಿ ಅವರು ಎಷ್ಟು ಅಂಕಗಳನ್ನ ಪಡೆದಿದ್ರು ಅನ್ನೋದು ಅನೇಕರಲ್ಲಿ ಕುತೂಹಲ ಇದ್ದೇ ಇರುತ್ತೆ.  ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಐಎಎಸ್ ಟಾಪರ್ ಸೃಷ್ಟಿ ದೇಶಮುಖ್ (Srushti Jayant Deshmukh ) ಅವರ 12 ನೇ ತರಗತಿಯ ಅಂಕಪಟ್ಟಿ ವೈರಲ್ ಆಗಿದೆ. ಇತ್ತೀಚೆಗೆ, ಐಎಎಸ್ ಟೀನಾ ದಾಬಿ ಅವರ ಅಂಕಪಟ್ಟಿ ಸುದ್ದಿ ಮಾಡಿತ್ತು. ಐಎಎಸ್ ಟಾಪರ್ ಸೃಷ್ಟಿ  ದೇಶಮುಖ್ ಅವರ, CBSE 12ನೇ ತರಗತಿ ಪರೀಕ್ಷೆಯಲ್ಲಿ 93% ಪಡೆದಿದ್ದಾರೆ. 10ನೇ ತರಗತಿಯಲ್ಲಿ 10 ಸಿಜಿಪಿಎ ಗ್ರೇಡ್ ಪಡೆದಿದ್ದಾರೆ. ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಡಾ.ನಾಗಾರ್ಜನಗೌಡ ಅವರನ್ನು ಸೃಷ್ಟಿ ದೇಶಮುಖ್ ಅವರು ವಿವಾಹವಾಗಿದ್ದಾರೆ.

ಧಾರವಾಡ: ರಾಷ್ಟ್ರಪತಿಯಿಂದ ಐಐಐಟಿ ಹೊಸ ಕ್ಯಾಂಪಸ್‌ ಲೋಕಾರ್ಪಣೆ! 

 IAS ಸೃಷ್ಟಿ ಜಯಂತ್ ದೇಶಮುಖ್ ಅವರು 2018 ರಲ್ಲಿ UPSC ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಖಿಲ ಭಾರತ 5 ನೇ ರ್ಯಾಂಕ್ ಗಳಿಸಿದರು. ಅವರು ತಮ್ಮ ಮೊದಲ ಪ್ರಯತ್ನದಲ್ಲಿ ದೇಶದ ಅತ್ಯಂತ ಕಷ್ಟಕರ ಪರೀಕ್ಷೆಯನ್ನ ಭೇದಿಸಿ 5ನೇ ಱಂಕರ್ ಆದ್ರು. 2018 ರಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಪರೀಕ್ಷೆಯಲ್ಲಿ ಮಹಿಳಾ ಟಾಪರ್ ಆಗಿ ಹೊರಹೊಮ್ಮಿದ್ರು.  

ಮೂಲತಃ ಮಧ್ಯಪ್ರದೇಶದ ಭೋಪಾಲ್ನವರಾದ ಸೃಷ್ಟಿ,  2018 ರಲ್ಲಿ ರಾಜೀವ್ ಗಾಂಧಿ ಪ್ರೊಡಿಯೋಗಿಕಿ ವಿಶ್ವವಿದ್ಯಾಲಯದಿಂದ ರಾಸಾಯನಿಕ ಇಂಜಿನಿಯರ್ ಆಗಿ ಪದವಿ ಪಡೆದಿದ್ದಾರೆ. ಸೃಷ್ಟಿಯ ತಂದೆ ಇಂಜಿನಿಯರ್ ಮತ್ತು ತಾಯಿ ಶಿಕ್ಷಕಿ. ಈಗ, ಐಎಎಸ್ ಸೃಷ್ಟಿ ದೇಶಮುಖ್ ಗೌಡ ಅವರು ದೇಶದ ಅತ್ಯಂತ ಜನಪ್ರಿಯ ಐಎಎಸ್'ಗಳಲ್ಲಿ ಒಬ್ಬರು. ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿ, ಬರೋಬ್ಬರಿ 1.9 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ರೆ, ಟ್ವಿಟರ್‌ನಲ್ಲಿ 144K ಅನುಯಾಯಿಗಳನ್ನು ಹೊಂದಿದ್ದಾರೆ.

Follow Us:
Download App:
  • android
  • ios