Asianet Suvarna News Asianet Suvarna News

ತಾಳಿಕೋಟೆ: ಮಹಿಳೆಗೆ ವಂಚಿಸಿ 4 ಲಕ್ಷ ಮೌಲ್ಯದ ಚಿನ್ನಾ​ಭ​ರಣ ಕದ್ದೊಯ್ದ ಖದೀಮರು!

4 ಲಕ್ಷ ಮೌಲ್ಯದ ಚಿನ್ನಾ​ಭ​ರಣ ಪಂಗ​ನಾಮ| ಚಿನ್ನಾ​ಭ​ರಣ ತೊಳೆದು ಸ್ವಚ್ಛ ಮಾಡು​ತ್ತೇ​ವೆಂದು ಮಹಿ​ಳೆ​ಯ​ರನ್ನು ನಂಬಿಸಿ ವಂಚನೆ ಮಾಡಿದ ಖದೀಮರು| ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದ ಘಟನೆ| ಅನ್ನಪೂರ್ಣಾ ವಂಚನೆಗೊಳಗಾದ ಮಹಿಳೆ| 

Jewelry Theft in Talikoti in Vijayapura District
Author
Bengaluru, First Published Jan 2, 2020, 2:49 PM IST

ತಾಳಿಕೋಟೆ(ಜ.02): ಚಿನ್ನಾಭರಣವನ್ನು ಹೊಳೆ​ಯು​ವಂತೆ ಸ್ವಚ್ಛ ಮಾಡಿಕೊಡುತ್ತೇವೆ ಎಂದು ಮಹಿ​ಳೆ​ಯ​ರನ್ನು ನಂಬಿಸಿ 4.07 ಲಕ್ಷ ಮೌಲ್ಯದ ಸುಮಾರು 11 ತೊಲೆ ಚಿನ್ನಾ​ಭ​ರಣ ದೋಚಿ ಕುಟುಂಬ​ವೊಂದಕ್ಕೆ ಪಂಗ​ನಾಮ ಹಾಕಿದ ಘಟನೆ ಪಟ್ಟ​ಣ​ದಲ್ಲಿ ಮಂಗ​ಳ​ವಾರ ನಡೆ​ದಿದ್ದು, ಪಟ್ಟ​ಣದ ಜನರು ಭೀತಿ​ಗೊಂಡಿ​ದ್ದಾರೆ.

ಪಟ್ಟಣದ ನಾಗರಕಲ್ಲ ಬಡಾವಣೆಯ ಅನ್ನಪೂರ್ಣಾ ಲೋಕರೆ ಎಂಬಾತರ ಮನೆಯಲ್ಲಿ ಈ ಘಟನೆ ನಡೆ​ದಿದೆ. 2.50 ಲಕ್ಷ ಕಿಮ್ಮತ್ತಿನ 7 ತೊಲೆಯ ಎರಡು ಪಾಟ್ಲಿ ಬಳೆಗಳು, 1.48 ಲಕ್ಷ ಮೌಲ್ಯದ 4 ತೊಲೆಯ ಬಂಗಾರದ ತಾಳಿಸರ ಸೇರಿ ಒಟ್ಟು 4.07 ಲಕ್ಷ ಮೌಲ್ಯದ 11 ತೊಲೆ ಚಿನ್ನಾಭರಣವನ್ನು ಯಾಮಾರಿಸಿದ್ದಾರೆ.

ವಂಚನೆ ಮಾಡಿದ್ದು ಹೇಗೆ?:

ಪಟ್ಟಣದ ನಾಗರಕಲ್ಲ ಬಡಾವಣೆಯ ಅನ್ನಪೂರ್ಣಾ ಲೋಕರೆ ಎಂಬಾತರ ಮನೆಗೆ ಆಗಮಿಸಿದ ಕನ್ನಡ ಮಾತ​ನಾ​ಡುವ ಇಬ್ಬರು ಆರೋ​ಪಿ​ಗಳು, ತಾವು ಕಂಪನಿಯೊಂದರಿಂದ ಜಾಹೀ​ರಾ​ತಿ​ಗಾಗಿ ಬಂದಿದ್ದೇವೆ. ಚಿನ್ನಾಭರಣ ಸ್ವಚ್ಛ ಮಾಡಿಕೊಡುತ್ತೇವೆ ಎಂದು ನಂಬಿ​ಸಿ​ದ್ದಾರೆ. ಚಿನ್ನಾ​ಭ​ರ​ಣ​ವನ್ನು ಮನೆಯಲ್ಲಿ ಕುಕ್ಕರನಲ್ಲಿ ಹಾಕಿಸಿ ಅದನ್ನು ಗ್ಯಾಸಿನ ಮೇಲೆ ಕಾಯಿಸಿಕೊಂಡು ಬರಲು ಹೇಳಿದ್ದಾರೆ. ಅದ​ರಂತೆ ಅನ್ನಪೂರ್ಣಾ ಹಾಗೂ ಅವರ ಸೊಸೆ ಅನಿತಾ ಗ್ಯಾಸಿನ ಮೇಲೆ ಕಾಯಿಸಲಿಕ್ಕೆ ಇಟ್ಟಿದ್ದಾರೆ.

ಅನ್ನಪೂರ್ಣಾ ಅಡುಗೆ ಮನೆಯಿಂದ ಹೊರಬಂದು ನೋಡುವಷ್ಟರಲ್ಲಿ ಆರೋ​ಪಿ​ಗಳು ಅಲ್ಲಿಂದ ಕಾಲ್ಕಿ​ತ್ತಿ​ದ್ದಾರೆ. ಗಾಬರಿ​ಗೊಂಡ ಅನ್ನಪೂರ್ಣಾ ಅಡುಗೆ ಮನೆಗೆ ಹೋಗಿ ಗ್ಯಾಸಿನ ಮೇಲಿನ ಕುಕ್ಕರ ತೆಗೆದು ನೋಡಿದರೆ ಚಿನ್ನಾಭರಣವೇ ಇಲ್ಲ. ಇದರಿಂದ ಚೀರಾಟ ನಡೆ​ಸಿ​ದ್ದಾರೆ. ಮಗ ಶ್ರೀನಿವಾಸನನ್ನು ಮನೆಗೆ ಕರೆಸಿ ಬೈಕ್‌ ಮೇಲೆ ಊರೆಲ್ಲ ಸುತ್ತಿ​ದರೂ ಆರೋ​ಪಿ​ಗಳ ಸುಳಿವೇ ಸಿಕ್ಕಿಲ್ಲ. ಈ ಕುರಿತು ತಾಳಿಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕ​ರಣ ದಾಖ​ಲಾ​ಗಿದೆ.
ಪಿಎಸೈ ವಸಂತ ಬಂಡಗಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿ​ಶೀಲಿಸಿ ಹೆಚ್ಚಿನ ಮಾಹಿತಿ ಪಡೆದು ತನಿಖೆ ಕೈಗೊಂಡಿದ್ದಾರೆ. 

ಈ ಬಗ್ಗೆ ಮಾತನಾಡಿದ ತಾಳಿಕೋಟೆ ಪಿಎಸೈ ವಸಂತ ಬಂಡಗಾರ ಅವರು, ಅಪರಾಧ ತಡೆಯಲು ಸಾಕಷ್ಟು ತಿಳಿವಳಿಕೆ ನೀಡು​ತ್ತಿ​ದ್ದರೂ ಮೋಸಕ್ಕೆ ಒಳಗಾಗುತ್ತಿರುವುದು ವಿಷಾದಕರ. ಈ ವಂಚನೆ ಪ್ರಕರಣಕ್ಕೆ ಸಂಬಂಧಿ​ಸಿದ ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios