Asianet Suvarna News Asianet Suvarna News

ಬಿಜೆಪಿ ನಿಲುವಿಗೆ ಜೈಕಾರ ಹಾಕಿದ ಕುಮಾರಸ್ವಾಮಿ : ಜೆಡಿಎಸ್ ನಿಲುವು ಮೀರಿದ ಶಾಸಕ

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ನಿಲುವಿಗೆ ಜೈಕಾರ ಹಾಕಿದ್ದು ಆದರೆ ಪಕ್ಷದ ಶಾಸಕರೋರ್ವರು ಪಕ್ಷದ ನಿಲುವಿಗೆ ವಿರೊಧವಾಗಿ ನಡೆದುಕೊಂಡಿದ್ದಾರೆನ್ನಲಾಗಿದೆ

JDS MLA DC Thammanna Supports Farmers Protest snr
Author
Bengaluru, First Published Sep 28, 2020, 11:23 AM IST

ಮಂಡ್ಯ (ಸೆ.28):  ರಾಜ್ಯ ಸರ್ಕಾರ ಭೂಸು​ಧಾ​ರಣೆ ಮತ್ತು ಎಪಿ​ಎಂಸಿ ಕಾಯಿ​ದೆಗಳಿಗೆ ತಿದ್ದು​ಪಡಿ ತಂದಿ​ರು​ವು​ದನ್ನು ವಿರೋ​ಧಿಸಿ ಕರೆ ನೀಡ​ಲಾ​ಗಿ​ರುವ ಕರ್ನಾಟಕ ಬಂದ್‌ಗೆ ಮಂಡ್ಯ ಜಿಲ್ಲೆ​ಯಲ್ಲಿ ರಾಜ​ಕೀಯ ಪಕ್ಷ​ಗಳು ಮತ್ತು ಕೆಲ ಸಂಘ​ಟ​ನೆ​ಗಳ ತಟಸ್ಥ ಧೋರ​ಣೆಯ ನಡು​ವೆಯೂ ಹಲವು ಸಂಘ​ಟ​ನೆ​ಗಳು ಬಂದ್‌ ಯಶ​ಸ್ವಿ​ಗೊ​ಳಿ​ಸಲು ಮುಂದಾ​ಗಿವೆ.

 ಜೆಡಿಎಸ್‌ ಮುಖಂಡರು ದೂರ

ರೈತ ಪರ ಹೋರಾ​ಟ​ದ ಮೂಲ​ಕವೇ ರಾಜ​ಕೀಯ ಅಸ್ತಿ​ತ್ವ​ವನ್ನು ಕಂಡು​ಕೊಂಡಿ​ರುವ ಜೆಡಿ​ಎಸ್‌ ಸದ​ನದ ಒಳಗೆ ಎಪಿ​ಎಂಸಿ ಮತ್ತು ಭೂಸು​ಧಾ​ರಣಾ ಕಾಯ್ದೆ ತಿದ್ದು​ಪ​ಡಿ​ಗ​ಳನ್ನು ಸ್ವಾಗ​ತಿ​ಸಿ​ದರೆ, ಹೊರಗೆ ವಿರೋ​​​ಧಿಸು​ತ್ತಿ​ರು​ವುದು ರಾಜ​ಕೀಯ ಡ್ರಾಮಕ್ಕೆ ಸಾಕ್ಷಿ​ಯಾ​ಗಿದೆ.

ಸ್ಥಳೀಯ ಶಾಸ​ಕ​ರು ವಿವಿಧ ಕಾರ‍್ಯ​ಕ್ರ​ಮ​ಗ​ಳಲ್ಲಿ ಭೂ ಸುಧಾ​ರಣಾ ಕಾಯ್ದೆ​ಯನ್ನು ಅಧಿವೇ​ಶ​ನ​ದಲ್ಲಿ ವಿರೋ​ಧಿ​ಸು​ವು​ದಾಗಿ ಹೇಳಿ​ದ್ದರು. ಆದರೆ, ಜೆಡಿ​ಎಸ್‌ನ ಪಕ್ಷದ ಶಾಸ​ಕಾಂಗ ನಾಯ​ಕ ಕುಮಾ​ರ​ಸ್ವಾ​ಮಿ​ಯ​ವರೇ ಬಿಜೆ​ಪಿಯ ನಿಲು​ವಿಗೆ ಜೈಕಾರ ಹಾಕಿ​ರು​ವುದು ಪಕ್ಷದ ಶಾಸ​ಕ​ರಿಗೆ ಇರಿಸು ಮುರಿಸು ಉಂಟು​ಮಾ​ಡಿದೆ.

ಬಿಜೆಪಿಯೊಂದಿಗೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ ಎಂದ ಜೆಡಿಎಸ್‌ ನಾಯಕ ...

ಸ್ಥಳೀ​ಯ​ವಾಗಿ ಮದ್ದೂರು ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ ರೈತ​ರ ಪರ​ವಾಗಿ ನಡೆ​ಸು​ತ್ತಿ​ರುವ ಬಂದ್‌ಗೆ ತಮ್ಮ ಬೆಂಬ​ಲ​ವ​ನ್ನು ವ್ಯಕ್ತ​ಪ​ಡಿ​ಸು​ವು​ದರ ಮೂಲಕ ಪಕ್ಷದ ನಿಲು​ವನ್ನು ಮೀರಿ ರೈತರ ಪರ ನಿಂತಿ​ದ್ದಾ​ರೆಂಬ ಅಭಿ​ಪ್ರಾ​ಯ​ಗಳು ಕೇಳಿ​ಬ​ರು​ತ್ತಿದ್ದು, ಇತರೆ ಶಾಸ​ಕರ ನಿಲು​ವು​ಗಳು ಇಂದಿಗೂ ಸ್ಪಷ್ಟ​ವಾ​ಗಿಲ್ಲ. ವಿಶೇ​ಷ​ವಾಗಿ ಸಾಮಾ​ಜಿಕ ಜಾಲ​ತಾ​ಣ​ದಲ್ಲಿ ಪಕ್ಷದ ಎರಡು ಮತ್ತು ಮೂರನೇ ಹಂತದ ಮುಖಂಡರು ಬಿಜೆಪಿ ಸರ್ಕಾರದ ಕಾಯ್ದೆ ತಿದ್ದು​ಪ​ಡಿ​ ನಿಲು​ವನ್ನು ಖಂಡಿ​ಸು​ವುದರ ಮೂಲಕ ಪಕ್ಷ​ವನ್ನು ಮೀರಿ ತಮ್ಮ ಅಭಿ​ವ್ಯಕ್ತಿ ಸ್ವಾತಂತ್ರ್ಯ​ವನ್ನು ವ್ಯಕ್ತ​ಪ​ಡಿ​ಸು​ತ್ತಿ​ದ್ದಾರೆ.

Follow Us:
Download App:
  • android
  • ios