Asianet Suvarna News Asianet Suvarna News

ಬಿಎ​ಸ್‌ವೈ ಬದ​ಲಾ​ವಣೆ ಮಾಡಿದ್ದೇ ಆದ್ರೆ ಬಿಜೆಪಿ ಹೆಸರಿಲ್ಲದಂತೆ ಹೋಗ್ತದೆ: ಜೆಡಿಎಸ್‌ ನಾಯಕ

* ಜೆಡಿಎಸ್‌ ಮುಖಂಡ, ವೀರ​ಶೈವ ಮಹಾ​ಸ​ಭಾದ ಜಿಲ್ಲಾ​ಧ್ಯಕ್ಷ ಹುಣ​ಸೀ​ಮ​ರ​ದ ಆಕ್ಷೇಪ
* ಉತ್ತಮ ನಾಯಕನಿಗೆ ಅನ್ಯಾಯ ಮಾಡಬಾರದು 
* ಮುಖ್ಯಮಂತ್ರಿ ಬದಲಾವಣೆಗೆ ಮುಂದಾಗಿರುವ ಕೇಂದ್ರದ ಬಿಜೆಪಿ ನಾಯಕರು 

JDS Leader Gururaj Hunasimarad Talks Over CM Change in Karnataka grg
Author
Bengaluru, First Published Jul 22, 2021, 7:52 AM IST

ಧಾರವಾಡ(ಜು.22): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವುದು ವೀರಶೈವ ಲಿಂಗಾಯತ ಸಮುದಾಯಕ್ಕೆ ಮಾಡುವ ಅವಮಾನ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ, ಜೆಡಿಎಸ್‌ ಮುಖಂಡ ಗುರುರಾಜ ಹುಣಸಿಮರದ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬುಧ​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಚಿಂತ​ನೆ ಮಾಡ​ಬಾ​ರ​ದಿತ್ತು. ಒಂದು ವೇಳೆ ಬದ​ಲಾವಣೆ ಮಾಡಿ​ದರೆ ಬರುವ ದಿನ​ಗ​ಳಲ್ಲಿ ಸಮಾ​ಜ​ದಿಂದ ಬಿಜೆ​ಪಿಗೆ ಬೆಂಬಲ ಸಿಗದೇ ಇರ​ಬ​ಹದು. ಬಿಜೆಪಿ ಬರುವ ದಿನ​ಗ​ಳಲ್ಲಿ ಕೆಟ್ಟ ಪರಿ​ಣಾಮ ಎದು​ರಿ​ಸ​ಬೇ​ಕಾ​ಗು​ತ್ತದೆ. ಉದ್ದೇಶಪೂರ್ವಕವಾಗಿ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿದರೆ ವೀರಶೈವ ಲಿಂಗಾಯತ ಸಮಾಜ ಬಿಜೆಪಿಯನ್ನು ಕ್ಷಮಿಸುವುದಿಲ್ಲ. ಅವರ ಅವ​ಧಿ ಪೂರ್ಣಗೊಳ್ಳುವವೆರೆಗೂ ಅವರಿಗೆ ತೊಂದರೆ ಮಾಡದೆ ಮುಂದುವರೆಸಬೇಕು ಎಂದು ಆಗ್ರ​ಹಿ​ಸಿ​ದ್ದಾರೆ. 

ಸಿಎಂ ಸ್ಥಾನಕ್ಕೆ ರಾಜೀನಾಮೆ ಫಿಕ್ಸ್? ಮಹತ್ವದ ಸುಳಿವು ಕೊಟ್ಟ ಯಡಿಯೂರಪ್ಪ

ವೀರ​ಶೈ​ವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ, ಪದಾ​ಧಿ​ಕಾರಿಗಳು ಹಾಗೂ ಮಠಾ​ಧೀಶರು ಈಗಾಗಲೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಕೇಂದ್ರದ ಬಿಜೆಪಿ ನಾಯಕರು ಮುಖ್ಯಮಂತ್ರಿ ಬದಲಾವಣೆಗೆ ಮುಂದಾಗಿದ್ದಾರೆ. ರಾಜ್ಯ​ದಲ್ಲಿ ಸಮಾಜ ಒಡೆ​ಯುವ ಕೆಲಸ ನಡೆ​ಯು​ತ್ತಿದ್ದು ಸಮಾ​ಜದ ನಾಯ​ಕರು ಷಡ್ಯಂತ್ರಕ್ಕೆ ಬಲಿ​ಯಾ​ಗ​ಬಾ​ರದು ಎಂದರು.

ಒಂದು ವೇಳೆ ಕೇಂದ್ರದಲ್ಲಿ ಕುಳಿತು ಇಲ್ಲಿಯ ನಾಯಕನನ್ನು ಬದಲಾವಣೆ ಮಾಡಿದರೆ ರಾಜ್ಯದಲ್ಲಿ ಬಿಜೆಪಿಗೆ ನಷ್ಟವಾಗಲಿದೆ. ರಾಜ್ಯದಲ್ಲಿ ಬಿಜೆಪಿ ಹೆಸರಿಲ್ಲದಂತೆ ಹೋಗುತ್ತದೆ. ಉತ್ತಮ ನಾಯಕನಿಗೆ ಅನ್ಯಾಯ ಮಾಡಬಾರದು ಎಂದು ಹೇಳಿದರು.

ಸುದ್ದಿ​ಗೋ​ಷ್ಠಿ​ಯಲ್ಲಿ ಮಹಾ​ಸಭಾ ಪದಾ​ಧಿ​ಕಾ​ರಿ​ಗ​ಳಾದ ಶಿವಶರಣ ಕಲಬಶೆಟ್ಟರ್‌, ಎಂ.ಎಂ. ಹಿರೇಮಠ, ಮೈಲಾರ ಉಪ್ಪಿನ, ಎಸ್‌.ಎಚ್‌. ಪಾಟೀಲ, ರಾಜೇಂದ್ರ ಕಪಲಿ, ಬಿ.ಎಸ್‌. ಗೋಲ​ಪ್ಪ​ನ​ವರ, ಎನ್‌.​ಎಸ್‌. ಬಿರಾ​ದಾರ, ಜಯಶ್ರೀ ಪಾಟೀಲ ಇದ್ದರು.
 

Follow Us:
Download App:
  • android
  • ios