Asianet Suvarna News Asianet Suvarna News

ಯೋಗೀಶ್‌ ಗೌಡ ಹತ್ಯೆ ಪ್ರಕರಣ: ಸಿಬಿಐನಿಂದ ಇಬ್ಬರು ಕುಲಕರ್ಣಿ ಆಪ್ತರ ವಿಚಾರಣೆ

ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ ಸಿಬಿಐ| ಯೋಗೀಶಗೌಡ ಗೌಡರ ಕೊಲೆ ಕೇಸ್‌| ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಅನೇಕರ ವಿಚಾರಣೆ ನಡೆಸಿದ ರಾಕೇಶ್‌ ರಂಜನ್‌ ನೇತೃತ್ವದ ಸಿಬಿಐ ತಂಡ| 

Investigation of Two Vinay Kulkarni Confidants from CBI grg
Author
Bengaluru, First Published Nov 11, 2020, 9:35 AM IST

ಧಾರವಾಡ(ನ.11): ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರನ್ನು ಹಿಂಡಲಗಾ ಜೈಲು ಸೇರಿಸಿರುವ ಸಿಬಿಐ ಅಧಿಕಾರಿಗಳು, ಇದೀಗ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ರಾಕೇಶ್‌ ರಂಜನ್‌ ನೇತೃತ್ವದ ಸಿಬಿಐ ತಂಡ ಮಂಗಳವಾರ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಅನೇಕರ ವಿಚಾರಣೆ ನಡೆಸಿತು. ಪ್ರಮುಖ ಆರೋಪಿ ಬಸವರಾಜ ಮುತ್ತಗಿಯನ್ನು ಠಾಣೆಗೆ ಕರೆಸಿ ಮೊದಲು 1 ತಾಸು, ಮತ್ತೊಮ್ಮೆ 2 ತಾಸು ಪ್ರಶ್ನೆಗಳ ಸುರಿಮಳೆಗೈದಿದೆ.

ಯೋಗೇಶ್‌ ಗೌಡ ಕೇಸ್‌ನ ಸ್ಫೋಟಕ ಸತ್ಯಗಳಿಗೆ ಬೆಚ್ಚಿಬಿದ್ದ ಸಿಬಿಐ!

ವಿಚಾರಣೆ ವೇಳೆ ಮುತ್ತಗಿ ಹಾದಿತಪ್ಪಿಸಲು ಯತ್ನಿಸಿದಾಗ ಸಿಬಿಐ ಅಧಿಕಾರಿಗಳು ಏರುದನಿಯಲ್ಲಿ ತರಾಟೆಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ. ಈ ಮಧ್ಯೆ, ವಿನಯ ಕುಲಕರ್ಣಿ ಸಚಿವರಾಗಿದ್ದಾಗ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮಲಿಂಗ ನ್ಯಾಮಗೌಡನ ಆಪ್ತ ದಿಲೀಪ್‌ನನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿದೆ.
 

Follow Us:
Download App:
  • android
  • ios