Asianet Suvarna News Asianet Suvarna News

ಔರಾದ್‌: ಕಾಮ​ಗಾರಿ ಕಳ​ಪೆ​ಯಾ​ದಲ್ಲಿ ಸಹಿ​ಸ​ಲ್ಲ, ಶಾಸಕ ಪ್ರಭು ಚವ್ಹಾ​ಣ್‌

ಶಾಸಕರು ರಸ್ತೆಯಲ್ಲಿ ಸಂಚರಿಸಿ ಗುಣಮಟ್ಟ ಪರೀ​ಕ್ಷಿಸಿದರಲ್ಲದೆ ಜನತೆಯ ನಿರೀಕ್ಷೆಗೆ ತಕ್ಕಂತೆ ಕೆಲಸವಾಗದಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಕೆಲಸದ ಗುಣಮಟ್ಟದ ಬಗ್ಗೆ ಸ್ಥಳೀಯರಿಂದ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಕೆಲಸ ಸರಿಯಾಗಿ ನಡೆಯದಿರುವುದಕ್ಕೆ ಗುತ್ತಿಗೆದಾರರ ವಿರುದ್ಧ ಆಕ್ರೋಶ ಹೊರ ಹಾಕಿದರು.

If the work is poor it will not be tolerated Says BJP MLA Prabhu Chauhan grg
Author
First Published Jun 10, 2023, 10:00 PM IST

ಔರಾದ್‌(ಜೂ.10):  ತಾಲೂಕಿನ ಮುಂಗನಾಳ-ಬೆಲ್ದಾಳ ರಸ್ತೆ ಕಾಮಗಾರಿ ಸ್ಥಳಕ್ಕೆ ಇತ್ತೀಚೆಗೆ ಶಾಸಕ ಪ್ರಭು ಚವ್ಹಾಣ್‌ ಭೇಟಿ ನೀಡಿ ಪರಿಶೀಲಿಸಿ, ಗುಣಮಟ್ಟದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದಲ್ಲಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇಲಾಖೆ ಅಧಿಕಾರಿಗಳು ಗುತ್ತಿಗೆದಾರರಿಗೆ ಕೆಲಸ ವಹಿಸಿ ಸುಮ್ಮನಿದ್ದರೆ ಸಾಲದು. ಕಾಮಗಾರಿ ಬಳಕೆಗೆ ಬರುವವರೆಗೆ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಹೇಳಿ​ದ​ರು.

ನಂತರ ಶಾಸಕರು ರಸ್ತೆಯಲ್ಲಿ ಸಂಚರಿಸಿ ಗುಣಮಟ್ಟ ಪರೀ​ಕ್ಷಿಸಿದರಲ್ಲದೆ ಜನತೆಯ ನಿರೀಕ್ಷೆಗೆ ತಕ್ಕಂತೆ ಕೆಲಸವಾಗದಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಕೆಲಸದ ಗುಣಮಟ್ಟದ ಬಗ್ಗೆ ಸ್ಥಳೀಯರಿಂದ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಕೆಲಸ ಸರಿಯಾಗಿ ನಡೆಯದಿರುವುದಕ್ಕೆ ಗುತ್ತಿಗೆದಾರರ ವಿರುದ್ಧ ಆಕ್ರೋಶ ಹೊರ ಹಾಕಿದರು.

ಮೋದಿ ಸರ್ಕಾರದಿಂದ ರೈತರಿಗೆ ಬೆಂಬಲ ಬೆಲೆ: ಭಗವಂತ ಖೂಬಾ ಶ್ಲಾಘ​ನೆ

ಈ ರಸ್ತೆಯಿಂದ ಬೆಲ್ದಾಳ, ಬರ್ದಾಪೂರ, ಕೊಳ್ಳೂರ, ಏಕಲಾರ, ತುಳಜಾಪೂರ, ಬೋರಾಳ, ಮುಂಗನಾಳ ಸೇರಿದಂತೆ ಸಾಕಷ್ಟುಹಳ್ಳಿಗಳಿಗೆ ಅನುಕೂಲವಾಗಲಿದೆ. ಕೆಲಸದ ಬಗ್ಗೆ ಸ್ಥಳೀಯರು ದೂರು ನೀಡಿದಾಗ ಅಧಿಕಾರಿಗಳು ಸ್ಪಂದಿಸಬೇಕು. ಜನತೆಗೆ ಉತ್ತಮ ರಸ್ತೆ ನಿರ್ಮಿಸಿಕೊಡಬೇಕು. ದೂರುಗಳಿಗೆ ಆಸ್ಪದ ನೀಡದ ರೀತಿಯಲ್ಲಿ ಕೆಲಸವಾಗಬೇಕು. ಕೆಲಸ ಪೂರ್ಣಗೊಂಡ ನಂತರ ಕಾಮಗಾರಿಯಲ್ಲಿ ಲೋಪ ಕಂಡುಬಂದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇಬ್ಬರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ದೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ಸಚಿನ ರಾಠೋಡ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow Us:
Download App:
  • android
  • ios