Asianet Suvarna News Asianet Suvarna News

ಸುಮಲತಾಗೆ ಒಲಿದಿದ್ದ ಅದೃಷ್ಟ : ಹೆಚ್ಚಾದ ಡಿಮ್ಯಾಂಡ್

ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣಾ ರಂಗು ಏರಿದೆ.  ರಾಜಕೀಯ ಮುಖಂಡರು ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಸುಮಲತಾ ಆಯ್ಕೆಗೆ ಮತ್ತೊಮ್ಮೆ ಅದೃಷ್ಟ ಒಲಿಯುವ ನಿರೀಕ್ಷೆಯಲ್ಲಿದ್ದಾರೆ. 

Grama Panchayat Election Candidates Busy with Selecting symbol in Ramanagar snr
Author
Bengaluru, First Published Dec 11, 2020, 3:37 PM IST

ವರದಿ : ಎಂ.ಅ​ಫ್ರೋಜ್ ಖಾನ್‌

ರಾಮ​ನ​ಗರ (ಡಿ.11):  ಗ್ರಾಮ ಪಂಚಾ​ಯಿತಿ ಚುನಾ​ವ​ಣೆ​ಯಲ್ಲಿ ನಾಮ​ಪತ್ರ ಸಲ್ಲಿ​ಸಲು ಒಂದು ದಿನ​ವಷ್ಟೇ ಬಾಕಿ ಉಳಿ​ದಿದೆ. ನಾಮ​ಪತ್ರ ಸಲ್ಲಿ​ಸಿ​ರುವ ಹಾಗೂ ಸಲ್ಲಿ​ಸಲು ಸಿದ್ಧ​ವಾ​ಗಿ​ರುವ ಆಕಾಂಕ್ಷಿ​ಗಳು ಅದೃ​ಷ್ಟದ ಚಿಹ್ನೆ​ಗ​ಳನ್ನು ಪಡೆ​ಯಲು ಕಾತ​ರ​ರಾ​ಗಿ​ದ್ದಾ​ರೆ.

ಈ ಚುನಾ​ವಣೆ ಮೂಲಕ ರಾಜ​ಕೀಯ ಪ್ರವೇ​ಶಿ​ಸಲು ಇಚ್ಛಿ​ಸು​ತ್ತಿ​ರುವ ಆಕಾಂಕ್ಷಿ​ಗಳು ಸ್ಪರ್ಧೆಗೆ ಬಿರು​ಸಿನ ಸಿದ್ಧತೆ ನಡೆ​ಸು​ತ್ತಿ​ದ್ದಾರೆ. ಚುನಾ​ವ​ಣೆ​ಯಲ್ಲಿ ಅಭ್ಯ​ರ್ಥಿ​ಗ​ಳಾ​ಗು​ವ​ವರು ಅದೃ​ಷ್ಟದ ಚಿಹ್ನೆ​ಗ​ಳನ್ನು ಆಯ್ಕೆ ಮಾಡು​ತ್ತಿ​ದ್ದಾರೆ. ಮತ​ದಾ​ರರು ಸುಲ​ಭ​ವಾಗಿ ನೆನ​ಪಿ​ನಲ್ಲಿ ಇಟ್ಟು​ಕೊ​ಳ್ಳಲು ಅನು​ಕೂ​ಲ​ವಾ​ಗು​ವಂತೆ ಹೆಚ್ಚು ಪ್ರಸಿ​ದ್ಧಿ ಪಡೆ​ದಿ​ರುವ ಚಿಹ್ನೆ​ಗ​ಳನ್ನೇ ಈಗಾ​ಗಲೇ ನಾಮ​ಪತ್ರ ಸಲ್ಲಿ​ಸಿ​ರುವ ಅಭ್ಯ​ರ್ಥಿ​ಗಳು ಗುರು​ತಿ​ಸಿ​ದ್ದಾರೆ. ಕಡೆ ದಿನ​ವಾದ ನಾಳೆ ಉಮೇ​ದು​ವಾ​ರಿಕೆ ಸಲ್ಲಿ​ಸ​ಲಿ​ರುವ ಆಕಾಂಕ್ಷಿ​ಗಳು ಚಿಹ್ನೆ​ಗ​ಳನ್ನು ಆರಿ​ಸಿ​ಕೊ​ಳ್ಳುವ ಪ್ರಕ್ರಿ​ಯೆ​ಯಲ್ಲಿ ನಿರ​ತ​ರಾ​ಗಿ​ದ್ದಾ​ರೆ.

ರಾಜ್ಯ ಚುನಾ​ವಣಾ ಆಯೋಗ 194 ಮುಕ್ತ ಚಿಹ್ನೆ​ಗಳ ಪಟ್ಟಿಪ್ರಕ​ಟಿ​ಸಿದೆ. ಇದ​ರಲ್ಲಿ ಕಹಳೆ ಊದು​ತ್ತಿ​ರುವ ಮನುಷ್ಯ ಚಿಹ್ನೆ, ಟ್ರ್ಯಾಕ್ಟರ್‌ ಓಡಿ​ಸು​ತ್ತಿ​ರುವ ರೈತ , ಆಟೋ, ಟೀವಿ, ವಜ್ರ, ಕ್ಯಾಮೆರಾ, ಗ್ಯಾಸ್‌ ಒಲೆ, ಕರಣಿ, ಕುಕ್ಕರ್‌, ತೆಂಗಿನ ತೋಟ, ಬ್ಯಾಟರಿ, ಟೆಲಿ​ಫೋನ್‌, ಉಂಗುರ ಸೇರಿ​ದಂತೆ ಇನ್ನು ಕೆಲವು ಗುರು​ತು​ಗಳು ಹೆಚ್ಚು ಪ್ರಚ​ಲಿ​ತ​ದ​ಲ್ಲಿವೆ. ಗ್ರಾಮ ಪಂಚಾ​ಯಿತಿ ಚುನಾ​ವಣೆ ರಾಜ​ಕೀ​ಯ ಪಕ್ಷದ ಬೆಂಬ​ಲದ ಜೊತೆಗೆ ಸ್ಥಳೀ​ಯ​ವಾ​ಗಿ​ರುವ ಸಂಬಂಧ, ನೆಂಟ​ಸ್ಥಿಕೆ, ಜನ​ಪ​ರತೆ ಆಧಾ​ರದ ಮೇಲೆ ಸೋಲು ಗೆಲುವನ್ನು ನಿರ್ಧ​ರಿ​ಸು​ತ್ತದೆ. ಇದ​ರೊಂದಿಗೆ ಚಿಹ್ನೆಯ ಪಾತ್ರವೂ ಅಷ್ಟೇ ಪ್ರಮು​ಖ​ವಾ​ಗಿದೆ.

ಗರಿಗೆದರಿದ ರಾಜಕೀಯ : ಸುಮಲತಾ ಆಯ್ಕೆಗೆ ಹೆಚ್ಚಿದ ಡಿಮ್ಯಾಂಡ್ ...

ಅಭ್ಯ​ರ್ಥಿ​ಗಳು ಆರಿ​ಸಿ​ಕೊ​ಳ್ಳುವ ಚಿಹ್ನೆ ಜನ​ಪ್ರಿ​ಯತೆ ಮತ್ತು ಆಕ​ರ್ಷಕವಾಗಿ​ದ್ದರೆ ಗೆಲುವು ಇನ್ನಷ್ಟುಸುಲ​ಭ​ವಾ​ಗ​ಲಿದೆ ಎಂಬು​ದರ ಮೇಲೂ ಹಲ​ವ​ರಿಗೆ ನಂಬಿ​ಕೆ​ಯಿದೆ. ಹೀಗಾಗಿ ಮುಕ್ತ ಚಿಹ್ನೆ​ಗ​ಳೊ​ಳಗೆ ಸೇರಿ​ಕೊಂಡಿ​ರುವ ಟ್ರ್ಯಾಕ್ಟರ್‌ ಓಡಿ​ಸು​ತ್ತಿ​ರುವ ರೈತ, ಕಹಳೆ ಊದು​ತ್ತಿ​ರುವ ಮನುಷ್ಯ ಚಿಹ್ನೆ ಹೆಚ್ಚಿನ ಮಹತ್ವ ಪಡೆ​ದು​ಕೊಂಡಿದೆ ಎಂದು ಹೇಳ​ಲಾ​ಗು​ತ್ತಿದೆ.

ಜೆಡಿ​ಎಸ್‌ ಬೆಂಬ​ಲಿ​ತ​ರಿಂದ ಟ್ರ್ಯಾಕ್ಟರ್‌ ಗೆ ಬೇಡಿಕೆ:

ಗ್ರಾಮ ಪಂಚಾ​ಯಿತಿ ಚುನಾ​ವ​ಣೆ​ಯಲ್ಲಿ ಜೆಡಿ​ಎಸ್‌ ಬೆಂಬ​ಲ​ದೊಂದಿಗೆ ಸ್ಪರ್ಧೆ ಮಾಡು​ತ್ತಿ​ರುವ ಬಹು​ತೇಕ ಸ್ಪರ್ಧಿ​ಗಳು ಟ್ರ್ಯಾಕ್ಟರ್‌ ಓಡಿ​ಸು​ತ್ತಿ​ರುವ ರೈತನ ಚಿಹ್ನೆ​ಗಾಗಿ ಬೇಡಿಕೆ ಇಡು​ತ್ತಿ​ದ್ದಾರೆ. ​ಜೆ​ಡಿ​ಎಸ್‌ ತೆನೆ ಹೊತ್ತ ಮಹಿಳೆ ಚಿಹ್ನೆ ಹೊಂದಿ​ರು​ವು​ರಿಂದ ಟ್ರ್ಯಾಕ್ಟರ್‌ ಓಡಿ​ಸು​ತ್ತಿ​ರುವ ರೈತನ ಸಿಂಬಲ್‌ ದೊರೆ​ತರೆ ಮತ​ದಾ​ರ​ರಿಗೆ ತಾನು ಜೆಡಿ​ಎಸ್‌ ಬೆಂಬಲಿತ ಅಭ್ಯರ್ಥಿ ಎಂಬು​ದನ್ನು ಸು​ಲ​ಭ​ವಾಗಿ ಮನ​ವ​ರಿಕೆ ಮಾಡಿ​ಕೊ​ಡ​ಬ​ಹುದು ಎಂದು ಭಾವಿ​ಸಿ​ದ್ದಾರೆ.

ಕಹಳೆ ಗುರು​ತಿಗೆ ಹೆಚ್ಚಿದ ಮಹ​ತ್ವ:

ಮುಕ್ತ ಚಿಹ್ನೆ​ಗಳ ಪಟ್ಟಿ​ಯಲ್ಲಿರುವ ಕಹಳೆ ಊದು​ತ್ತಿ​ರುವ ಮನು​ಷ್ಯನ ಚಿಹ್ನೆಯತ್ತಲೂ ಹೆಚ್ಚಿ​ನ​ವರು ಆಸಕ್ತಿ ತೋರು​ತ್ತಿ​ದ್ದಾರೆ. ಕಳೆದ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ಮಂಡ್ಯ ಕ್ಷೇತ್ರ​ದಲ್ಲಿ ಚಿತ್ರ​ನಟಿ ಸುಮ​ಲತಾ ಅವರು ಇದೇ ಚಿಹ್ನೆ ಇಟ್ಟು​ಕೊಂಡು ಸ್ಪರ್ಧಿ​ಸಿ​ದ್ದರು. ರೋಚ​ಕತೆ ಸೃಷ್ಟಿಸಿ ಎಲ್ಲರ ಗಮನ ಸೆಳೆ​ದಿದ್ದ ಆ ಚುನಾ​ವ​ಣೆ​ಯಲ್ಲಿ ಸುಮ​ಲತಾ ಅವ​ರಿಗೆ ಕಹಳೆ ಊದು​ತ್ತಿ​ರುವ ಮನು​ಷ್ಯನ ಚಿಹ್ನೆ ಗೆಲು​ವಿನ ಅದೃಷ್ಟತಂದು​ಕೊ​ಟ್ಟಿತು. ಅದೇ ಗೆಲು​ವಿನ ಅದೃ​ಷ್ಟ​ವನ್ನು ತಮಗೂ ತಂದು​ಕೊ​ಡ​ಬ​ಹು​ದೆಂಬ ನಂಬಿಕೆ ಅನೇಕ ಅಭ್ಯ​ರ್ಥಿ​ಗ​ಳ​ಲ್ಲಿದೆ. ಹಾಗಾಗಿ ಈ ಚಿಹ್ನೆ​ಯಡಿ ಸ್ಪರ್ಧಿ​ಸಲು ಹೆಚ್ಚಿ​ನ​ವರು ಆಸಕ್ತಿ ತೋರು​ತ್ತಿ​ದ್ದಾರೆ.

ಅಭ್ಯ​ರ್ಥಿ​ಗ​ಳಿಗೆ ನಿರಾಸೆ:

ಅನ್ಯ ರಾಜ್ಯ​ಗ​ಳ್ಲಲಿ ನೋಂದಾ​ಯಿತ ಮಾನ್ಯತೆ ಪಡೆದ ಪಕ್ಷ​ಗಳು ಕಾರು, ಬೈಸಿ​ಕಲ್‌, ಸೀಲಿಂಗ್‌ ಫ್ಯಾನ್‌, ಆನೆ, ತೆಂಗಿನ ಕಾಯಿ, ನೇಗಿಲು, ಬಿಲ್ಲು -ಬಾಣ, ಬಾಣ, ಕಿರೀಟ, ಏಣಿ, ತಕ್ಕಡಿ, ಉದ​ಯಿ​ಸು​ತ್ತಿ​ರುವ ಸೂರ್ಯ, ಕೊಡೆ, ಎರಡು ಎಲೆ​ಗಳು, ಕಾರು​ಸೇ​ರಿ​ದಂತೆ ಹಲವು ಗುರು​ತು​ಗ​ಳನ್ನು ಹೊಂದಿವೆ.

ಇವು ಆಕ​ರ್ಷ​ಣೀಯ ಚಿಹ್ನೆ​ಗ​ಳಾ​ಗಿ​ದ್ದರೂ ಗ್ರಾಪಂ ಚುನಾ​ವ​ಣೆ​ಗ​ಳಲ್ಲಿ ಅಭ್ಯ​ರ್ಥಿ​ಗ​ಳಾ​ಗು​ವ​ವ​ರಿಗೆ ನೀಡ​ಲಾ​ಗು​ವು​ದಿಲ್ಲ. ಇದು ಹಲ​ವ​ರಲ್ಲಿ ನಿರಾ​ಸೆ​ಯನ್ನೂ ಉಂಟು ಮಾಡಿದೆ. ಅಭ್ಯ​ರ್ಥಿ​ಗಳು ಮುಕ್ತ ಚಿಹ್ನೆ​ಗ​ಳ​ಲ್ಲಿ​ರುವ ಗುರು​ತು​ಗ​ಳನ್ನು ಮಾತ್ರ ಆಯ್ಕೆ ಮಾಡಿ​ಕೊ​ಳ್ಳಲು ಅವ​ಕಾ​ಶ​ವಿದೆ. ಕರ್ನಾ​ಟಕ ಸೇರಿ​ದಂತೆ ಬೇರೆ ರಾಜ್ಯ​ಗ​ಳಲ್ಲಿ ಮಾನ್ಯತೆ ಪಡೆದ ಪಕ್ಷ​ಗ​ಳಿಗೆ ನೀಡ​ಲಾ​ಗಿ​ರುವ ಚಿಹ್ನೆ​ಗ​ಳನ್ನು ಆಯ್ಕೆ ಮಾಡಿ​ಕೊ​ಳ್ಳು​ವು​ದಕ್ಕೆ ಅವ​ಕಾ​ಶ​ವಿಲ್ಲ ಎಂದು ಚುನಾ​ವ​ಣಾ​ಧಿ​ಕಾ​ರಿ​ಗಳು ‘ಕನ್ನ​ಡ​ಪ್ರ​ಭ‘ಕ್ಕೆ ಪ್ರತಿ​ಕ್ರಿ​ಯೆ ನೀಡಿ​ದ​ರು.

Follow Us:
Download App:
  • android
  • ios