ಡ್ರಾಪ್ ನೆಪದಲ್ಲಿ ಸುಲಿಗೆ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ಅಮಾಯಕರನ್ನು ಗ್ಯಾಂಗ್ ಸುಲಿಗೆ ಮಾಡುತಿದ್ದು, ಈ ನಿಟ್ಟಿನಲ್ಲಿ ಅರೆಸ್ಟ್ ಮಾಡಲಾಗಿದೆ.
ರಾಮನಗರ [ಅ.06]: ಡ್ರಾಪ್ ಮಾಡುವ ನೆಪದಲ್ಲಿ ಅಮಾಯಕರ ಸುಲಿಗೆ ಮಾಡುತ್ತಿದ್ದ ಮೂವರು ಖದೀಮರ ಗ್ಯಾಂಗ್ ಅನ್ನು ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬೆಂಗಳೂರಿನ ಚಂದ್ರಲೇಔಟ್ ನಿವಾಸಿ ಸಲೀಂ ಪಾಷ, ಓಕಳಿಪುರಂ ನಿವಾಸಿ ಅಬ್ದುಲ್ ಸುಲೆಮಾನ್, ಪಶ್ಚಿಮ ಬಂಗಾಳ ಮೂಲದ ರಾಜೇಶ್ ರಾಯ್ ಬಂಧಿತರು.
ಬೆಂಗಳೂರಿನ ಸಿದ್ದಾಪುರ, ಜಯನಗರ, ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ಮಾಡಿದ್ದ ದರೋಡೆ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟಿದ್ದ ಇವರು ಜಾಮೀನಿನ ಮೇಲೆ ಹೊರ ಬಂದ ನಂತರವೂ ದರೋಡೆ, ಸುಲಿಗೆ ಮಾಡುತ್ತಿದ್ದರು. ಬಿಡದಿ ಮತ್ತು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿಯೂ ಇವರ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಆರೋಪಿಗಳು ಶನಿವಾರ ಬೆಳಗಿನ ಜಾವ ನಾಗರಾಜ್ ಎಂಬುವರನ್ನು ಕೆ.ಆರ್.ಪುರಂನಿಂದ ಅಪಹರಿಸಿ ಕಾರಿನಲ್ಲಿ ಹೊರಟಿದ್ದಾಗ ಬಿಡದಿಯ ಬೈರಮಂಗಲ ಕ್ರಾಸ್ ಚೆಕ್ಪೋಸ್ಟ್ನಲ್ಲಿ ಬಳಿ ಬಿಡದಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
