Asianet Suvarna News Asianet Suvarna News

ಡೆತ್ ನೋಟ್ ಬರೆದಿಟ್ಟು ಸಾವು : ಎಚ್‌ಡಿಕೆ, ನಿಖಿಲ್ ಭೇಟಿ

ಡೆತ್ ನೋಟ್ ಬರೆದಿಟ್ಟು ಸಾವಿಗೀಡಾದ ವ್ಯಕ್ತಿಯ ಅಂತಿಮ ದರ್ಶನಕ್ಕೆ ಎಚ್ ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ  ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

Fan Last ritual  HD Kumaraswamy Visits Ramanagara  snr
Author
Bengaluru, First Published Jan 18, 2021, 9:06 AM IST

ರಾಮ​ನ​ಗರ (ಜ.18):  ತನ್ನ ಸಾವಿನ ಅಂತಿಮ ದರ್ಶನಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ ಬರಬೇಕು ಎಂದು ಡೆತ್‌ ನೋಟ್‌ ಬರೆ​ದಿಟ್ಟು ಸಾವ​ನ್ನ​ಪ್ಪಿದ್ದ ರಾಮನಗರ ಜಿಲ್ಲೆಯ ಬೊಮ್ಮಚ್ಚಹಳ್ಳಿಯ ನಿವಾಸಿ, ಆಟೋ ಚಾಲಕ ಆರ್‌.ಜಯ​ರಾಮ್‌ ಅವರ ಪಾರ್ಥಿವ ಶರೀ​ರದ ಅಂತಿ​ಮ ದರ್ಶ​ನ​ವನ್ನು ಎಚ್‌ಡಿಕೆ ಮತ್ತು ನಿಖಿಲ್‌ ಕುಮಾರಸ್ವಾಮಿ ಅವರು ಪಡೆ​ದರು. ಗ್ರಾಮ​ಕ್ಕೆ ಆಗ​ಮಿ​ಸಿದ ಕುಮಾ​ರ​ಸ್ವಾಮಿ ಹಾಗೂ ನಿಖಿಲ್‌ ಅವರು ಜಯರಾಮ್‌ ಅವರ ಕುಟುಂಬ​ದ​ವ​ರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿ​ದರು. ಅಲ್ಲದೇ, ಆರ್ಥಿಕ ಸಹಾ​ಯ​ ಮಾಡಿ​ದರು. ಆಟೋ ಚಾಲಕ ಜಯ​ರಾಮ್‌ ಅವರ ಎಡ​ಗಾ​ಲಿಗೆ ಗ್ಯಾಂಗ್ರಿನ್‌ ಆಗಿ​ದ್ದ​ರಿಂದ ಅನಾ​ರೋ​ಗ್ಯ​ದಿಂದ ಬಳ​ಲು​ತ್ತಿ​ದ್ದರು. ಕೊನೆ ಉಸಿ​ರೆ​ಳೆ​ಯು​ವು​ದಕ್ಕೂ ಮುನ್ನ ಪತ್ರ​ವೊಂದನ್ನು ಬರೆ​ದಿ​ದ್ದರು.

ಇದು ನನ್ನ ಕೊನೆಯ ಹೋರಾಟವೆಂದು ಘೋಷಿಸಿದ ಕುಮಾರಸ್ವಾಮಿ...! ...

ನಾನು ಕುಮಾ​ರ​ಸ್ವಾ​ಮಿ​ ಅವರ ಅಭಿ​ಯಾ​ನಿ​ಯಾ​ಗಿದ್ದು, ಬುದ್ಧಿ ಬಂದಾ​ಗಿ​ನಿಂದಲೂ ಜೆಡಿ​ಎಸ್‌ ಅನ್ನು ಬೆಂಬ​ಲಿ​ಸುತ್ತಾ ಬಂದಿದ್ದೇನೆ. ನನ್ನ ಮರ​ಣಾ​ನಂತರ ಅಂತ್ಯ​ಸಂಸ್ಕಾ​ರ​ದಲ್ಲಿ ಕುಮಾ​ರ​ಸ್ವಾ​ಮಿ​ರ​ವರು ಭಾಗ​ವ​ಹಿ​ಸ​ಬೇಕು. ನನ್ನ ಮಗ ಬುದ್ಧಿಮಾಂದ್ಯನಾಗಿದ್ದು, ಆತ​ನಿಗೆ ಆರ್ಥಿಕ ಸಹಾಯ ಮಾಡ​ಬೇಕು. ಬದು​ಕ​ಲು ಅವ​ರಿ​ಗೊಂದು ದಾರಿ ಮಾಡಿ​ಕೊ​ಡ​ಬೇಕು. ಕುಮಾ​ರ​ಸ್ವಾ​ಮಿ​ರ​ವರ ಋುಣ​ವನ್ನು ಮುಂದಿನ ಜನ್ಮ​ದಲ್ಲಿ ತೀರಿ​ಸು​ವು​ದಾಗಿ ಪತ್ರ​ದ​ಲ್ಲಿ ಉಲ್ಲೇಖಿ​ಸಿ​ದ್ದರು.

ವಿಚಾ​ರ ಮಾಧ್ಯ​ಮ​ಗ​ಳಲ್ಲಿ ಪ್ರಕ​ಟ​ವಾ​ಯಿ​ತ​ಲ್ಲದೇ, ಜೆಡಿ​ಎಸ್‌ ಮುಖಂಡರು ಕುಮಾ​ರ​ಸ್ವಾ​ಮಿ​ರ​ವರ ಗಮ​ನಕ್ಕೆ ತಂದಿ​ದ್ದಾರೆ. ಭಾನು​ವಾರ ಮಧ್ಯಾ​ಹ್ನ​ದ​ವ​ರೆಗೆ ಪೂರ್ವ ನಿಯೋ​ಜಿತವಾಗಿದ್ದ ಕಾರ್ಯ​ಕ್ರ​ಮ​ಗ​ಳನ್ನು ರದ್ದು ಪಡಿ​ಸಿದ ಕುಮಾ​ರ​ಸ್ವಾ​ಮಿ ಪುತ್ರ ನಿಖಿಲ್‌ ಅವ​ರೊಂದಿಗೆ ಬೊಮ್ಮ​ಚ್ಚ​ನ​ಹಳ್ಳಿ ಗ್ರಾಮಕ್ಕೆ ಆಗ​ಮಿಸಿದರು.

Follow Us:
Download App:
  • android
  • ios