Asianet Suvarna News Asianet Suvarna News

ಉಡುಪಿ: ಜಿಲ್ಲಾಸ್ಪತ್ರೆ ಸಿಬ್ಬಂದಿ ಯಡವಟ್ಟು, ಮೃತ ವ್ಯಕ್ತಿಯ ಶವ ಅದಲು ಬದಲು..!

ಉಡುಪಿ ಜಿಲ್ಲಾಸ್ಪತ್ರೆಯ ಯಡವಟ್ಟು| ಶವ ಅದಲು ಬದಲು| ಗೊಂದಲದಲ್ಲಿ ಮೃತರ ಕುಟುಂಬಸ್ಥರು| ಅಂತ್ಯ ಸಂಸ್ಕಾರಕ್ಕೆಂದು ತೆರಳಿದ್ದ ವೇಳೆ ಮಾಹಿತಿ ಬಹಿರಂಗ| 

Family of a Deceased Person Faces Problems for Hospital Staff Mistake
Author
Bengaluru, First Published Aug 23, 2020, 2:36 PM IST

ಉಡುಪಿ(ಆ.23): ಶವ ಅದಲು ಬದಲಾಗಿದ್ದರಿಂದ ಕುಟುಂಬಸ್ಥರು ಕೆಲ ಕಾಲ ಆತಂಕಕ್ಕೊಳಗಾದ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಇಂದು(ಭಾನುವಾರ) ನಡೆದಿದೆ. 

"

ಕೋಟೇಶ್ವರ ಮೂಲದ ನೇರಂಬಳ್ಳಿಯ ಗಂಗಾಧರ ಆಚಾರ್ಯ ಎಂಬುವರು ನ್ಯುಮೋನಿಯಾದಿಂದ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಆಸ್ಪತ್ರೆಯ ಸಿಬ್ಬಂದಿ ಗಂಗಾಧರ ಆಚಾರ್ಯ ಅವರ ಮೃತದೇಹ ಹಸ್ತಾಂತರಿಸದೆ ಬೇರೊಬ್ಬರ ಶವವನ್ನ ನೀಡಿದ್ದರು. ಕಾರ್ಕಳ ಮೂಲದ ವ್ಯಕ್ತಿಯ ಶವವನ್ನ ಮೃತ ಗಂಗಾಧರ ಆಚಾರ್ಯ ಅವರ ಕುಟುಂಬಸ್ಥರಿಗೆ ನೀಡಲಾಗಿತ್ತು. 

ಉಡುಪಿ: ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಿದ ಹಿಂದೂ ಜಾಗರಣ ವೇದಿಕೆ ತಂಡ

ಆಸ್ಪತ್ರೆಯಿಂದ ಶವ ಪಡೆದು ಅಂತ್ಯ ಸಂಸ್ಕಾರಕ್ಕೆಂದು ಕುಂದಾಪುರ ರುದ್ರ ಭೂಮಿಯಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಈ ವೇಳೆ ಗಂಗಾಧರ ಆಚಾರ್ಯ ಅವರ ಶವ ನೀಡುವ ಬದಲು ಬೇರೆಯರ ಶವ ನೀಡಿದ್ದರ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಈ ಸಂದರ್ಭದಲ್ಲಿ ಮೃತ ಗಂಗಾಧರ ಆಚಾರ್ಯ ಕುಟುಂಬಸ್ಥರಲ್ಲಿ  ಕೆಲ ಕಾಲ ಗೊಂದಲದಲ್ಲಿದ್ದರು.
 

Follow Us:
Download App:
  • android
  • ios