ಈ ಬಾರಿ ದಸರಾ ಚಾಲನೆ ಮಾಡೋರು ಇವರೇ !
ಈ ಬಾರಿ ಕೊರೋನಾ ಹಿನ್ನೆಲೆ ಸರಣ ದಸರಾ ಆಚರಣೆಗೆ ನಿರ್ಧರಿಸಲಾಗಿದ್ದು, ಉದ್ಘಾಟನೆಯನ್ನು ವಿಶೇಷ ವ್ಯಕ್ತಿಗಳಿಗೆ ನೀಡಲಾಗುತ್ತಿದೆ.
ಮಂಡ್ಯ (ಸೆ.20): ಮೈಸೂರು ದಸರಾವನ್ನು ಈ ಬಾರಿ ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದು, ಕೊರೋನಾ ವಾರಿಯರ್ಸ್ನಿಂದ ಚಾಲನೆ ಕೊಡಿಸಲು ನಿರ್ಧರಿಸಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ವಾರಿಯರ್ಸ್ಗಳಾದ ವೈದ್ಯರು, ದಾದಿ, ಆಶಾ, ಅಂಗನವಾಡಿ ಕಾರ್ಯಕರ್ತೆ ಮತ್ತು ಪೊಲೀಸ್ ಇಲಾಖೆಯ ಒಬ್ಬರು ಸೇರಿದಂತೆ ಐದು ಮಂದಿ ಕೊರೋನಾ ವಾರಿಯರ್ಸ್ರಿಂದ ಮೈಸೂರು ದಸರಾಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ.
ದುಂದು ವೆಚ್ಚದ ದಸರಾ ಇಲ್ಲ, ಸರಳ ಆಚರಣೆಗೆ ಸಿಎಂ ಸೂಚನೆ : ಎಸ್.ಟಿ.ಸೋಮಶೇಖರ್ ...
ಈಗಾಗಲೇ ಆರೋಗ್ಯ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪತ್ರ ಬರೆದು ನಿಮ್ಮ ಇಲಾಖೆಗಳಿಂದ ಒಬ್ಬೊಬ್ಬರ ಹೆಸರನ್ನು ಸೂಚಿಸುವಂತೆ ಕೋರಲಾಗಿದೆ. ಅವರಿಂದ ಆಯ್ಕೆಯಾಗಿ ಬಂದ ನಂತರ ವೈದ್ಯರೊಬ್ಬರಿಂದ ದಸರಾಗೆ ಚಾಲನೆ ನೀಡಲಾಗುವುದು. ಉಳಿದವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ವಿವರಿಸಿದರು.