Asianet Suvarna News Asianet Suvarna News

ಹುಬ್ಬಳ್ಳಿ : ಕೇಂದ್ರ ಸಚಿವೆಗೆ ಪ್ರತಿಭಟನೆ ಮೂಲಕ ಸ್ವಾಗತ

ಹುಬ್ಬಳ್ಳಿಗೆ ಆಗಮಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರತಿಭಟನೆ ಮೂಲಕ ಸ್ವಾಗತಿಸಲಾಗಿದೆ. 

Congress Workers Protest Against Union Minister Nirmala Sitharaman
Author
Bengaluru, First Published Oct 5, 2019, 12:47 PM IST

ಹುಬ್ಬಳ್ಳಿ (ಅ.05): ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ‌‌ ಸೀತಾರಾಮನ್ ಅವರಿಗೆ ಪ್ರತಿಭಟನೆ ಮೂಲಕ ಸ್ವಾಗತಿಸಲಾಗಿದೆ. 

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಗಿದೆ. ನೆರೆ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ವಿಮಾನ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವೇಳೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದಿದ್ದಾರೆ.  

ಧಾರವಾಡದಲ್ಲಿ ನಡೆಯುತ್ತಿರುವ  ತೆರಿಗೆ ಸಲಹೆಗಾರರ ಸಮ್ಮೇಳನದ ಸಲುವಾಗಿ ಆಗಮಿಸಿದ್ದ ವೇಳೆ ಈ ಪ್ರತಿಭಟನೆ ನಡೆಸಲಾಗಿದೆ. 

Follow Us:
Download App:
  • android
  • ios