Asianet Suvarna News Asianet Suvarna News

ಕೊರೋನಾ ಸಂದರ್ಭ ಬಿಜೆಪಿ ಶಾಸಕರ ಡಿನ್ನರ್‌ ಪಾಲಿಟಿಕ್ಸ್‌: ಕಾಂಗ್ರೆಸ್ ಗರಂ

ಇಂತಹ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಸಚಿವರು ಶಾಸಕರೆಲ್ಲರೂ ಸರ್ಕಾರಕ್ಕೆ ಬೆಂಬಲ ಸೂಚಿಸಬೇಕು, ಮುಖ್ಯಮಂತ್ರಿಗಳಿಗೆ ಶಕ್ತಿ ನೀಡಬೇಕು, ಅದನ್ನು ಬಿಟ್ಟು ರಾತ್ರಿ ಡಿನ್ನರ್‌ ಪಾಲಿಟಿಕ್ಸ್‌ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

Congress slams bjp for playing politics during corona critical situation
Author
Bangalore, First Published May 30, 2020, 11:09 AM IST

ಉಡುಪಿ(ಮೇ 30): ಇಂತಹ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಸಚಿವರು ಶಾಸಕರೆಲ್ಲರೂ ಸರ್ಕಾರಕ್ಕೆ ಬೆಂಬಲ ಸೂಚಿಸಬೇಕು, ಮುಖ್ಯಮಂತ್ರಿಗಳಿಗೆ ಶಕ್ತಿ ನೀಡಬೇಕು, ಅದನ್ನು ಬಿಟ್ಟು ರಾತ್ರಿ ಡಿನ್ನರ್‌ ಪಾಲಿಟಿಕ್ಸ್‌ ಮಾಡುತ್ತಿದ್ದಾರೆ. ಸರ್ಕಾರಕ್ಕೆ ತೊಂದರೆ ನೀಡುತ್ತಿದ್ದಾರೆ. ಇದು ರಾಜ್ಯದ ದುರಂತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ಆರೋಪಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ಶಾಸಕರು ಈ ಸಂದರ್ಭದಲ್ಲಿ ಜನ ಸಾಮಾನ್ಯರಿಗೆ ಸ್ಪಂದಿಸಬೇಕೋ ಅವರೇ ರಾಜಕೀಯ ಮಾಡುತ್ತಿದ್ದಾರೆ, ತಮ್ಮನ್ನು ಮಂತ್ರಿ ಮಾಡಬೇಕು, ತಮ್ಮನ್ನು ನಿಗಮಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಮಾಡಬೇಕು ಅಂತಾ ಒತ್ತಾಯ ಮಾಡುತ್ತಿದ್ದಾರೆ ಎಂದ ಅವರು, ಇದು ಬಿಜೆಪಿ ಸರ್ಕಾರದ ಒಳಜಗಳ, ಅದನ್ನು ಅವರ ನಾಯಕರು, ಮುಖ್ಯಮಂತ್ರಿ ನೋಡಿಕೋಳ್ಳುತ್ತಾರೆ ಎಂದರು.

OLXನಲ್ಲಿ ಬೈಕ್ ಮಾರೋಕೆ ಹೋಗಿ ಹಣ ಕಳೆದುಕೊಂಡ ಎಂಜಿನಿಯರಿಂಗ್ ವಿದ್ಯಾರ್ಥಿ

ರಮೇಶ್‌ ಜಾರಕಿಹೊಳಿ ಅವರು ಕಾಂಗ್ರೆಸ್‌ ಪಕ್ಷದ ಐದು ಜನ ಶಾಸಕರು ಬಿಜೆಪಿಗೆ ಬರ್ತಾರೆ ಎಂಂದಿರುವುದಕ್ಕೆ ಸಲೀಂ ಅಹಮ್ಮದ್‌, ಜಾರಕಿಹೊಳಿ ಅವರ ಮಾತಿಗೆ ನಗಬೇಕೊ ಅಳಬೇಕೋ ಅಂತಾ ಅರ್ಥವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

Follow Us:
Download App:
  • android
  • ios