Asianet Suvarna News Asianet Suvarna News

ಇಲ್ಲಿ ಸಲ್ಲದವರು ಅಲ್ಲಿ ಸಲ್ಲಿಯಾರೆ?: ಸೋತ ಅಭ್ಯರ್ಥಿಗಳಿಗೆ ಕೈ ಮಣೆ!

ಸೋತ ಅಭ್ಯರ್ಥಿಗಳಿಗೆ ಮಣೆ ಹಾಕಿದ ಕಾಂಗ್ರೆಸ್! ಲೋಕಸಭೆ ಚುನಾವಣೆ ಪಟ್ಟಿ ನೋಡಿ ದಂಗಾದ ರಾಹುಲ್! ವಿಧಾನಸಭೆ ಚುನಾವಣೆಯಲ್ಲಿ ಸೋತರವರಿಗೆ ಕೈ ಟಿಕೆಟ್

ಬೆಂಗಳೂರು(ಆ.14): ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಮಣೆ ಹಾಕಿದೆ. ಈ ಮೂಲಕ ಯುದ್ಧಕ್ಕೂ ಮೊದಲೇ ಕಾಂಗ್ರೆಸ್ ಪಕ್ಷ ತನ್ನ ಸೋಲಿನ ಕಾರಣವನ್ನು ಹುಡುಕಿಟ್ಟಿದೆ.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪಟ್ಟಿ ನೋಡಿ ಖುದ್ದು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ದಂಗಾಗಿದ್ದಾರೆ ಎನ್ನಲಾಗಿದೆ. ವಿಧಾನಸಭೆ ಚುನಾವಣೆಯಲ್ಲೇ ಸೋತ ಅಭ್ಯರ್ಥಿಗಳು ಇನ್ನು ಲೋಕಸಭೆ ಚುನಾವಣೆ ಹೇಗೆ ತಾನೆ ಗೆಲ್ಲ ಬಲ್ಲರು ಎಂಬುದು ರಾಹುಲ್ ಪ್ರಶ್ನೆಯಾಗಿದೆ.

ಪ್ರಮುಖವಾಗಿ ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಎ. ಮಂಜು, ರಮಾನಾಥ್ ರೈ ಮತ್ತು ವಿನಯ್ ಕುಲಕರ್ಣಿ ಅವರಿಗೆ ಲೋಕಸಭೆ ಟಿಕೆಟ್ ನೀಡಲು ಮುಂದಾಗಿರುವುದು ಪಕ್ಷದೊಳಗೆ ಭಿನ್ನಮತ ಸ್ಫೋಟಗೊಳ್ಳಲು ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.. 

Video Top Stories