Asianet Suvarna News Asianet Suvarna News

Karnataka Politics : ಕಾಂಗ್ರೆಸ್‌ - ಜೆಡಿ​ಎಸ್‌ ಪೈಪೋ​ಟಿ​ಯಲ್ಲಿ ಬಿಜೆಪಿ ಈಗ ಲೆಕ್ಕ​ಕ್ಕಿಲ್ಲ

  • ಹಾಲಿ, ಮಾಜಿ ಶಾಸ​ಕ​ರಿಗೆ ಪ್ರತಿ​ಷ್ಠೆಯ ಕಣ
  • ಅಸೆಂಬ್ಲಿ ಚುನಾ​ವಣೆ ಗೆಲ್ಲಲು ಪುರ​ಸಭೆ ಗೆಲುವು ಅನಿ​ವಾರ್ಯ
  • ಕಾಂಗ್ರೆಸ್‌ - ಜೆಡಿ​ಎಸ್‌ ಪೈಪೋ​ಟಿ​ಯಲ್ಲಿ ಬಿಜೆಪಿ ಲೆಕ್ಕ​ಕ್ಕಿಲ್ಲ
Competition Between Congress JDS in bidadi Municipality Election snr
Author
Bengaluru, First Published Dec 19, 2021, 1:29 PM IST

ವರದಿ  :  ಎಂ.ಅ​ಫ್ರೋಜ್‌ ಖಾನ್‌

 ರಾಮ​ನ​ಗರ (ಡಿ.19):  ಮುಂಬ​ರುವ ಮಾಗಡಿ ವಿಧಾ​ನ​ಸಭಾ ಕ್ಷೇತ್ರ  ಚುನಾ​ವ​ಣೆ (Assembly Election )​ ದೃಷ್ಟಿ​ಯಿಂದ ಹಾಲಿ ಮತ್ತು ಮಾಜಿ ಶಾಸ​ಕ​ರಿಗೆ ಬಿಡದಿ ಪುರ​ಸಭೆ (Bidadi)  ಚುನಾ​ವಣೆ (Election) ಪ್ರತಿ​ಷ್ಠೆಯ ಕಣ​ವಾಗಿ ರೂಪು​ಗೊಂಡಿದೆ. ಸ್ಥಳೀಯ ಸಂಸ್ಥೆಗಳ ಆಡಳಿತ ತಮ್ಮ ಹಿಡಿತದಲ್ಲಿದ್ದರೆ ಅಸೆಂಬ್ಲಿ ಚುನಾವಣೆ ಗೆಲ್ಲಲು ಅನುಕೂಲವಾಗುತ್ತದೆ ಎಂಬುದು ಜೆಡಿ​ಎಸ್‌ (JDS) ಶಾಸಕ ಎ.ಮಂಜು​ನಾಥ್‌ ಹಾಗೂ ಕಾಂಗ್ರೆಸ್‌ (Congress) ನಾಯ​ಕ​ರಾದ ಮಾಜಿ ಶಾಸಕ ಎಚ್‌.ಸಿ.​ಬಾ​ಲ​ಕೃ​ಷ್ಣ​ರ​ವರ ರಾಜ​ಕೀಯ (Politics) ಲೆಕ್ಕಾ​ಚಾರ. ಈ ಕಾರ​ಣ​ದಿಂದಾಗಿ ಹಾಲಿ ಮತ್ತು ಮಾಜಿ ಶಾಸ​ಕರು ಸದ್ಯ ನಡೆದಿರುವ ಪುರಸಭೆ ಚುನಾವಣೆಯಲ್ಲಿ (Election) ತಮ್ಮ ಪಕ್ಷ ಅದಕ್ಕಿಂತ ಮೇಲಾಗಿ ತಮ್ಮ ಬೆಂಬಲಿತರನ್ನು ಆಯ್ಕೆಗೊಳಿಸಲು ಕಸರತ್ತು ನಡೆಸಿದ್ದಾರೆ. ಅದಕ್ಕಾಗಿ ನಾಮಪತ್ರ ಸಲ್ಲಿಕೆ ಮುಕ್ತಾಯವಾಗು​ತ್ತಿ​ದ್ದಂತೆ ಅಖಾಡಕ್ಕಿಳಿದಿದ್ದಾರೆ.

ಬಿಜೆಪಿ (BJP) ಆಟ​ಕ್ಕುಂಟು ಲೆಕ್ಕ​ಕ್ಕಿಲ್ಲ:  ಶಾಸಕ ಎ.ಮಂಜು​ನಾಥ್‌ ರವರು ಬೆಳ​ಗಾವಿ (Belagavi) ಅಧಿ​ವೇ​ಶ​ನ​ದಲ್ಲಿ ಪಾಲ್ಗೊಂಡಿ​ದ್ದರೆ, ಮಾಜಿ ಶಾಸಕ ಎಚ್‌.ಸಿ.​ಬಾ​ಲ​ಕೃಷ್ಣ ಪಕ್ಷದ ಕಾರ್ಯ​ಕ​ರ್ತ​ರೊಂದಿಗೆ ಮತ​ಬೇಟೆ ಆರಂಭಿ​ಸಿ​ದ್ದಾರೆ. ಇನ್ನು ನಾಯ​ಕ​ತ್ವದ ಕೊರ​ತೆ​ಯಿಂದ ಸೊರ​ಗಿ​ರುವ ಬಿಜೆಪಿ (BJP) ಸ್ಥಿತಿ ಆಟ​ಕ್ಕುಂಟು ಲೆಕ್ಕ​ಕ್ಕಿಲ್ಲ ಎನ್ನು​ವಂತಾ​ಗಿದೆ. ಮಾಗಡಿ ಕ್ಷೇತ್ರದಲ್ಲಿ ಯಾವುದೇ ಚುನಾ​ವ​ಣೆ​ಗಳು (Election) ನಡ​ಯಲಿ ಅಲ್ಲಿ ಅಭಿ​ವೃದ್ಧಿ​ಗಿಂತ ಮಂಜು​ನಾಥ್‌ ಮತ್ತು ಬಾಲ​ಕೃಷ್ಣ ನಡು​ವಣ ಕಲ​ಹವೇ ಕೇಂದ್ರ ಬಿಂದು ಆಗಿ​ರು​ತ್ತದೆ. ಇತ್ತೀ​ಚೆಗೆ ನಡೆದ ಸ್ಥಳೀಯ ಚುನಾ​ವ​ಣೆ​ಗ​ಳಲ್ಲಿ ಜೆಡಿ​ಎಸ್‌ (JDS) ಸ್ವಲ್ಪ ಮಟ್ಟಿನ ಹಿನ್ನಡೆ ಅನು​ಭ​ವಿ​ಸಿ​ರುವ ಕಾರ​ಣ ಪುರ​ಸಭೆ ಚುನಾ​ವಣೆ ಮಂಜು​ನಾಥ್‌ ಪಾಲಿಗೆ ಸವಾಲಾಗಿ​ದೆ.

ಸಮ​ಬ​ಲದ ವಾತಾ​ವ​ರ​ಣ:  ಗ್ರಾಮ ಪಂಚಾ​ಯಿ​ತಿಯಿಂದ ಪುರ​ಸ​ಭೆ​ಯಾಗಿ ಬಡ್ತಿ ಪಡೆದ ನಂತರ ಜರು​ಗಿದ ಪ್ರಥಮ ಚುನಾ​ವ​ಣೆ​ಯಲ್ಲಿ ಜೆಡಿ​ಎಸ್‌ (JDS) -12 ಮತ್ತು ಕಾಂಗ್ರೆಸ್‌ (Congress) 11 ಸ್ಥಾನ​ಗ​ಳಲ್ಲಿ ಗೆಲುವು ಸಾಧಿ​ಸಿತ್ತು. ಆಗ ಜೆಡಿ​ಎಸ್‌ (JDS) ನಲ್ಲಿ ಶಾಸ​ಕ​ರಾ​ಗಿದ್ದ ಬಾಲ​ಕೃಷ್ಣ ಪಕ್ಷಕ್ಕೆ ಪುರಸಭೆ ಅಧಿಕಾರ ಕೊಡಿಸಿ ತಮ್ಮ ಹಿಡಿತ ಸಾಧಿಸಿದ್ದರು. ಮೊದಲ 5 ವರ್ಷ​ಗಳ ಅವ​ಧಿ​ಯಲ್ಲಿ ಜೆಡಿ​ಎಸ್‌ (JDS) ಪಾರು​ಪತ್ಯ ಮೆರೆದು ಅಧಿ​ಕಾರ ಅನು​ಭ​ವಿ​ಸಿತ್ತು.

ಬಾಲ​ಕೃಷ್ಣ ಜೆಡಿ​ಎಸ್‌ ತೊರೆದು ಕಾಂಗ್ರೆಸ್‌ ಸೇರ್ಪ​ಡೆ​ಗೊಂಡಾಗ ಬಹು​ತೇಕ ಸದ​ಸ್ಯರು ಪಕ್ಷ ನಿಷ್ಟೇ ಮೆರೆದು ಜೆಡಿ​ಎಸ್‌ ನಲ್ಲಿಯೇ ಉಳಿ​ದು​ಕೊಂಡರು. ಎ.ಮಂಜು​ನಾಥ್‌ ಜತೆ ಜೆಡಿ​ಎಸ್‌ ಗೆ ಬಂದ ಕೆಲ ಕಾಂಗ್ರೆಸ್‌ ಸದ​ಸ್ಯರ ಸೇರ್ಪ​ಡೆ​ಯೊಂದಿಗೆ ಜೆಡಿ​ಎಸ್‌ ಬಲ 12 ರಿಂದ 17ಕ್ಕೆ ಏರಿ​ಕೆ​ಯಾ​ಗಿತ್ತು. ಆದ​ರೀಗ ಬಿಡದಿ ಪುರ​ಸ​ಭೆ ಚುನಾ​ವ​ಣೆ​ಯಲ್ಲಿ ಕಾಂಗ್ರೆಸ್‌ - ಜೆಡಿ​ಎಸ್‌ ಪೈಪೋ​ಟಿಯಲ್ಲಿ ಸಮ​ಬ​ಲದ ಹೋರಾ​ಟದ ವಾತಾ​ವ​ರಣ ಕಂಡು ಬರು​ತ್ತಿದೆ. ಈಗ ಬದ​ಲಾದ ರಾಜ​ಕೀ​ಯ​ದಲ್ಲಿ ಬಿಡದಿ (Bidadi) ಭಾಗದ ಮುಖಂಡರು ಮತ್ತೆ ತಮ್ಮ ನಾಯ​ಕ​ರನ್ನು ಹಿಂಬಾ​ಲಿಸುತ್ತಿದ್ದಾರೆ.

ಕಳೆದ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಮಂಜು​ನಾಥ್‌ ಗೆಲು​ವಿಗೆ ಹೆಗಲು ನೀಡಿದ್ದ ಅನೇಕ ನಾಯ​ಕರು ಜೆಡಿಎಸ್‌ ತೊರೆದು ಬಾಲ​ಕೃಷ್ಣ ಜತೆ ಗುರು​ತಿ​ಸಿ​ಕೊ​ಳ್ಳು​ತ್ತಿ​ದ್ದಾರೆ. ಇದು ಚುನಾ​ವಣೆ ಮೇಲೂ ಪರಿ​ಣಾಮ ಬೀರ​ಲಿದೆ. ಹಾಲಿ ಮತ್ತು ಮಾಜಿ ಶಾಸ​ಕರು ಪಕ್ಷದ ಅಭ್ಯರ್ಥಿಗೆ ಠಕ್ಕರ್‌ ನೀಡಲು ಜಾತಿ ಲೆಕ್ಕಾಚಾರದ ಮೇಲೆ ಹಾಗೂ ಪಕ್ಷದ ಕಾರ್ಯಕರ್ತರನ್ನು ಸೆಳೆದುಕೊಳ್ಳುವುದರೊಂದಿಗೆ ಜಾಣ್ಮೆಯೊಂದಿಗೆ ತಮ್ಮದೇ ರೀತಿಯಲ್ಲಿ ಪೈಪೋಟಿಗೆ ಇಳಿ​ದು ಮೇಲುಗೈ ಸಾಧಿ​ಸಲು ಹವ​ಣಿ​ಸು​ತ್ತಿ​ದ್ದಾ​ರೆ.

ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಬಹುದೆಂಬ ರಾಜಕೀಯ ಲೆಕ್ಕಾಚಾರ

ಪುರಸಭೆಗೆ ತಮ್ಮವರನ್ನು ಆಯ್ಕೆಗೊಳಿಸಿ ಮುಂದಿನ ವಿಧಾನಸಭೆ ಚುನಾವಣೆಗೆ (Assembly Electiion) ವೇದಿಕೆ ರೂಪಿಸಿಕೊಳ್ಳಲು ಬಿಡದಿ ಪುರಸಭೆ ಸೇರಿದ ಮಾಗಡಿ ವಿಧಾನಸಭೆ ಕ್ಷೇತ್ರದ ಶಾಸಕ ಎ.ಮಂಜು​ನಾಥ್‌ ಮತ್ತು ಮಾಜಿ ಶಾಸಕ ಬಾಲ​ಕೃಷ್ಣ ಚುನಾವಣೆ ರಣತಂತ್ರ ರೂಪಿಸಿದ್ದಾರೆ. ಪುರಸಭೆ ಆಡಳಿತ ತಮ್ಮ ಕೈಯಲ್ಲಿದ್ದರೆ ತಮ್ಮ ಪ್ರಭಾವ ಬಳಸಿ ಸ್ಥಳೀಯವಾಗಿ ಒಂದಿಷ್ಟುಕೆಲಸ ಮಾಡಿಸಬಹುದು. ಅಲ್ಲದೆ, ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಬಹುದೆಂಬ ರಾಜಕೀಯ ಲೆಕ್ಕಾಚಾರದಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಪುರಸಭೆ ಚುನಾವಣೆಯಲ್ಲಿ ಸಕ್ರಿ​ಯ​ರಾಗಿ ತಮ್ಮ ಪಕ್ಷ ಹಾಗೂ ತಮ್ಮ ಬೆಂಬಲಿತರ ಆಯ್ಕೆಗೆ ಮುಂದಾಗಿದ್ದಾರೆ.

Follow Us:
Download App:
  • android
  • ios