ನೀರು ಕುಡಿದ ತಕ್ಷಣ ಕೋಣ,ಎಮ್ಮೆ ಸಾವು| ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದ ಘಟನೆ| ದಲಿತ ಕುಟುಂಬದ ಸೇರಿದ ಕೋಣ, ಎಮ್ಮೆ|
ನಾಲತವಾಡ (ತಾ:ಮುದ್ದೇಬಿಹಾಳ):(ಫೆ.01): ನೀರು ಕುಡಿದ ಕ್ಷಣಾರ್ಧದಲ್ಲೇ ಬೆಲೆ ಬಾಳುವ ಕೋಣ ಮತ್ತು ಎಮ್ಮೆ ಎರಡೂ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಶುಕ್ರವಾರ ನಡೆದಿದ್ದು, ಅವರಲ್ಲಿ ಭೀತಿ ಹುಟ್ಟಿಸಿದೆ.
Add Asianetnews Kannada as a Preferred Source

ಸ್ಥಳೀಯ ದಲಿತ ಕುಟುಂಬದ ರೇಣುಕಾ ತಳವಾರ ಎಂಬ ಮಹಿಳೆಗೆ ಇವೆರಡೂ ಜಾನುವಾರುಗಳು ಸೇರಿವೆ. ಎಮ್ಮೆ ಗರ್ಭ ಧರಿಸಿತ್ತು. ಕೋಣ ಮತ್ತು ಎಮ್ಮೆ ಏಕಕಾಲಕ್ಕೆ ಮೃತಪಟ್ಟಿದ್ದರಿಂದ ಜೀವನಕ್ಕೆ ಆಧಾರ ಸ್ತಂಭ ಕಳಚಿದಂತಾಗಿ ಕುಟುಂಬ ಸಂಕಷ್ಟದಲ್ಲಿ ಸಿಲುಕಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕ್ಷಣಾರ್ಧದಲ್ಲೇ ಬೆಲೆ ಬಾಳುವ ಜಾನುವಾರುಗಳ ಸಾವು ಸಹಜವಲ್ಲ, ಬೆಳವಣಿಗೆ ಸಹಿಸದ ಕೆಲವು ದುಷ್ಕರ್ಮಿಗಳು ನೀರು ತರಲು ಕೆರೆಗೆ ಹೋದ ವೇಳೆ ಸಮಯ ಸಾಧಿಸಿ ನೀರಲ್ಲಿ ವಿಷ ಬೆರೆಸಿರಬೇಕು ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.
