Asianet Suvarna News Asianet Suvarna News

ನಿಷ್ಠಾವಂತರಿಗೆ ಬಿಜೆಪಿಯಲ್ಲಿ ಸ್ಥಾನ ಇಲ್ಲ : ಸ್ವಪಕ್ಷೀಯರಿಂದಲೇ ತೀವ್ರ ಆಕ್ರೋಶ

ಬಿಜೆಪಿ ಮುಖಂಡರ ವಿರುದ್ಧ  ಇದೀಗ ತೀವ್ರ ಆಕ್ರೋಶ ಆಕ್ರೋಶ ವ್ಯಕ್ತವಾಗಿದೆ. ಧಿಕ್ಕಾರ ಕೂಗಿ ಅಸಮಾಧಾನ ಹೊರಹಾಕಿದ್ದಾರೆ. 

BJP Leaders Rebel Over Anekal ADA President Selection
Author
Bengaluru, First Published Dec 20, 2019, 11:57 AM IST

ಆನೇಕಲ್ [ಡಿ.20]: ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷರ ಆಯ್ಕೆಯ ವಿಚಾರವಾಗಿ ತೀವ್ರ ಆಕ್ರೋಶ ಭುಗಿಲೆದ್ದಿದೆ. 

ಯೋಜನಾ ಪ್ರಾಧಿಕಾರಕ್ಕೆ ಜಯಣ್ಣ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಆದರೆ ಜಯಣ್ಣ ಆಯ್ಕೆಗೆ ಸ್ವತಃ ಪಕ್ಷದವರಿಂದಲೇ ಅಸಮಾಧಾನ ವ್ಯಕ್ತವಾಗಿದೆ. 

ಎರಡನೇ ಬಾರಿಗೆ ಜಯಣ್ಣ ಅಧ್ಯಕ್ಷರಾಗಿದ್ದಕ್ಕೆ, ನೂತನ ಅಧ್ಯಕ್ಷರಿಗೆ ಮುತ್ತಿಗೆ ಹಾಕಿದ್ದು, ಧಿಕ್ಕಾರ ಕೂಗಿದ್ದಾರೆ. ಅಲ್ಲದೇ ನಿಷ್ಠಾವಂತರಿಗೆ ಬಿಜೆಪಿಯಲ್ಲಿ ಸ್ಥಾನಮಾನಗಳಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಧಿಕಾರಕ್ಕಾಗಿ ಬಿಜೆಪಿಯಲ್ಲಿ ತೊಡಕಾಗಿದ್ದು, ಕೆಲವರು ಬಟ್ಟೆ ಹರಿದುಕೊಂಡು ಅಸಮಾಧಾನ ಹೊರಹಾಕಿದ್ದು, ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾರಣ ನಿರ್ಮಾಣವಾಗಿದೆ. 

Follow Us:
Download App:
  • android
  • ios