‘ನನಗೆ ಪ್ರಮುಖ ಖಾತೆ ಹಾಗೂ ಡಿಸಿಎಂ ಪೋಸ್ಟ್ ಆಫರ್ ಇತ್ತು’
ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಮೇಲೆ ಹಾಗೂ ಅಥಣಿ ಕ್ಷೇತ್ರದ ವಿಚಾರದಲ್ಲಿ ಅನ್ಯಾಯವಾಗಿದೆ. ಕ್ಷೇತ್ರದ ಜನರಿಗೆ ಮುಖ ಹೇಗೆ ತೋರಿಸಲಿ ಎಂಬ ಭಯವಿತ್ತು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕ್ [ಸೆ.08]: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಕೆಲಸಗಳು ಆಗಿವೆ. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಮೇಲೆ ಹಾಗೂ ಅಥಣಿ ಕ್ಷೇತ್ರದ ವಿಚಾರದಲ್ಲಿ ಅನ್ಯಾಯವಾಗಿದೆ. ಕ್ಷೇತ್ರದ ಜನರಿಗೆ ಮುಖ ಹೇಗೆ ತೋರಿಸಲಿ ಎಂಬ ಭಯವಿತ್ತು. ಒಂದು ಸಣ್ಣ ಕೆಲಸವೂ ಆಗುತ್ತಿರಲಿಲ್ಲ. ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಖರ್ಗೆ ಅವರಿಗೆ ಈ ವಿಚಾರವನ್ನು ಅನೇಕ ಭಾರಿ ಹೇಳಿದ್ದೇವೆ.
ಆದರೂ ಸರ್ಕಾರದಿಂದ ನಮಗೆ ಅನ್ಯಾಯವಾಯಿತು. ನಂತರ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂಧನ ಖಾತೆ ಜತೆಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಕ್ಲಿಕ್ಕಿಸಿ
ಆದರೆ, ನಾನು ಅಧಿಕಾರ, ಡುಡ್ಡಿನ ಆಮಿಷಕ್ಕೆ ಒಳಗಾಗಿಲ್ಲ. ಪಕ್ಷದಲ್ಲಿ ಆಗುತ್ತಿರುವ ಅನ್ಯಾಯ ಖಂಡಿಸಿ ಹೊರಬಂದಿದ್ದೇನೆ ಅಷ್ಟೆ ಎಂದು ಇದೇ ವೇಳೆ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು. ಏತನ್ಮಧ್ಯೆ, ಮುಂದೆ ಯಾವ ಪಕ್ಷ ಸೇರ್ಪಡೆಯಾಗಬೇಕು ಎಂಬ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದಿರುವ ರಮೇಶ್ ಜಾರಕಿಹೊಳಿ, ಅನರ್ಹತೆ ಪ್ರಕರಣ ತಿರ್ಮಾನದ ನಂತರ ಮುಂದಿನ ನಡೆ ನಿರ್ಧರಿಸುತ್ತೇನೆ ಎಂದರು.