ಪ್ರಸಿದ್ಧ ಶಿರಸಿ ಮಾರಿಕಾಂಬ ಜಾತ್ರೆಯಲ್ಲೊಂದು ಅವಘಡ ಸಂಭವಿಸಿದೆ. ಪವಾಡಸದೃಶ್ವಾಗಿ ವ್ಯಕ್ತಿ ಬದುಕುಳಿದಿದ್ದಾನೆ.
ಶಿರಸಿ (ಮಾ.09) : ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ಹಾಕಲಾಗಿದ್ದ ಬಾವಿಯಲ್ಲಿ ಸಾಹಸ ಪ್ರದರ್ಶನದಲ್ಲಿ ಅವಘಡವೊಂದು ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಳೆದ ಶನಿವಾರ ರಾತ್ರಿ ನಗರದ ಕೋಣನಬಿಡಕಿಯಲ್ಲಿ ಹಾಕಲಾಗಿದ್ದ ಬಾವಿಯಲ್ಲಿ ಕಾರ್ ಬೈಕ್ ರೇಸ್ ಶೋದಲ್ಲಿ ಕಾರೊಂದರ ಎಂಜಿನ್ ಸಮಸ್ಯೆಯಿಂದ ಇನ್ನೊಂದು ಕಾರಿಗೆ ತಗುಲಿ ನಿಂತು ಪಕ್ಕದ ಕಾರಿಗೆ ಬಡಿದು ಅಲ್ಲೇ ಮಗುಚಿ ಬಿದ್ದಿದೆ.
ಶಿರಸಿ ಜಾತ್ರೆಗೆ ಹೋಗೋಣ ಬಾ...ಜನಸಾಗರ ಅಂದ್ರೆ ಇದೆ ತಾನೆ!
ಕಾರು ಚಾಲಕನ ಮೇಲೆ ಬಿದ್ದರೂ ಆತ ಹಾಗೂ ಅವನ ಪಕ್ಕದಲ್ಲಿ ಕುಳಿತ ಇನ್ನೊಬ್ಬರಿಗೆ ಯಾವುದೇ ತೊಂದರೆ ಆಗಿಲ್ಲ. ಈ ಘಟನೆಯಲ್ಲಿ ಇನ್ನೊಂದು ಕಾರಿನ ಚಾಲಕನ ಚಾಕಚಕ್ಯತೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಬಳಿಕ ಬಾವಿಯಲ್ಲಿ ರೇಸ್ ಶೋ ಮುಂದುವರಿಸಲಾಗಿದೆ.
