ಸಿಎಂ ಆದ ಮೇಲೆ ಸಿದ್ದರಾಮಯ್ಯ ಬದಲಾಗಿದ್ದಾರಾ ಅವರೇ ಹೇಳಬೇಕು. ಹಳೆಯದನ್ನು ಅವರೇ ಹೇಳಬೇಕು. ಈಗ ನನ್ನನ್ನು ದೂರ ಮಾಡಿದ್ದಾರೆ. ‘ನನ್ನ ಮನೆಗೆ ಸಿಎಂ ಬರಬೇಕೆಂಬ ಆಸೆ ಇಲ್ಲ, ನನ್ನ ಮನೆಗೆ ಹತ್ತಾರು ಸಿಎಂಗಳು ಬಂದಿದ್ದಾರೆ’

ಬೆಂಗಳೂರು(ಏ.24): ರೆಬಲ್ ಸ್ಟಾರ್ ಅಂಬರೀಶ್ ಮತ್ತೆ ರೆಬಲ್ ಆಗಿದ್ದಾರೆ. ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸ್ವತಃ ಮನವೊಲಿಸಲು ಬಂದಾಗ ಬಗ್ಗದೆ ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಮಂಡ್ಯದ ಚುನಾವಣಾ ಉಸ್ತುವಾರಿ ವಹಿಸಿ, ಪಕ್ಷ ಗೆಲ್ಲಿಸಿಎಂದು ವೇಣುಗೋಪಾಲ್ ಮನವಿ ಮಾಡಿಕೊಂಡಾಗ ಸ್ಪಷ್ಟವಾಗಿ ನೋಎಂದಿದ್ದಾರೆ. ಆರೋಗ್ಯ ಸಹಕರಿಸ್ತಿಲ್ಲ, ಓಡಾಡೋಕೆ ಆಗೊಲ್ಲ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಗಣಿಗ ರವಿಕುಮಾರ್​ ಸ್ಪರ್ಧೆಗೆ ಅಂಬರೀಶ್ ಅಸಮಾಧಾನವ್ಯಕ್ತಪಡಿಸಿ ಮಾಜಿ ಸಂಸದೆರಮ್ಯಾ ಪರ ಬ್ಯಾಟಿಂಗ್ಮಾಡಿದರು. ಗಣಿಗ ರವಿ ಬದಲು ರಮ್ಯಾಗೆ ಟಿಕೆಟ್ ನೀಡಬಹುದಿತ್ತು. ರಮ್ಯಗೆ ಟಿಕೆಟ್ ಕೊಟ್ಟಿದ್ದಿದ್ರೆಸಂತೋಷ ಆಗುತ್ತಿತ್ತುಎಂದ ಅಂಬಿ ಗಣಿಗ ರವಿನಾಯಕ ಏನ್ರೀ..? ಎಂದು ಪ್ರಶ್ನಿಸಿದರು.

ಸಿದ್ದು ಬಗ್ಗೆ ತೀವ್ರ ಅಸಮಾಧಾನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರೆಬಲ್'ಸ್ಟಾರ್ ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಬಯಸಿದ್ದೇ ನಾನು’‘ಕನಕದಾಸನನ್ನು ಕನಕರಾಜ ಮಾಡಿ ಎಂದು ಹೇಳಿದ್ದೇ ಇದೇ ಅಂಬರೀಶ್​. ಕನಕರಾಜ ಎಂದಿದ್ದಕ್ಕೆನನ್ನನ್ನು ಟೀಕಿಸಿದವರು ಈಗ ಸಿಎಂ ಜತೆಗಿದ್ದಾರೆ. ಸಿಎಂ ಆದ ಮೇಲೆ ಸಿದ್ದರಾಮಯ್ಯ ಬದಲಾಗಿದ್ದಾರಾ ಅವರೇ ಹೇಳಬೇಕು.

ಹಳೆಯದನ್ನು ಅವರೇ ಹೇಳಬೇಕು. ಈಗ ನನ್ನನ್ನು ದೂರ ಮಾಡಿದ್ದಾರೆ. ‘ನನ್ನ ಮನೆಗೆ ಸಿಎಂ ಬರಬೇಕೆಂಬ ಆಸೆ ಇಲ್ಲ, ನನ್ನ ಮನೆಗೆ ಹತ್ತಾರು ಸಿಎಂಗಳು ಬಂದಿದ್ದಾರೆಅವರಿಗಿಂತಗ್ರೇಟ್ಎಂಬ ಭಾವನೆ ಇಲ್ಲ, ‘ನಾನು ಸೀರಿಯಸ್ ರಾಜಕಾರಣಿ ಅಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.