ಪ್ರಧಾನಿ ಮೋದಿಗಾಗಿ ಗುಡಿ ನಿರ್ಮಿಸಿದ ತಮಿಳುನಾಡು ರೈತ!
ಪ್ರಧಾನಿ ಮೋದಿಗಾಗಿ ಗುಡಿ ನಿರ್ಮಿಸಿದ ತಮಿಳುನಾಡು ರೈತ| ಮೋದಿ ಪ್ರತಿಮೆಗೆ ಪ್ರತಿ ನಿತ್ಯ ಪೂಜೆ
ತಿರುಚಿರಾಪಳ್ಳಿ[ಡಿ.26]: ತಮಿಳುನಾಡಿನ ತಿರುಚಿರಾಪಳ್ಳಿಯ ರೈತನೊಬ್ಬ ತನ್ನ ಹೊಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಗುಡಿಯೊಂದನ್ನು ನಿರ್ಮಿಸಿದ್ದಾನೆ.
ಎರಾಕುಡಿ ಗ್ರಾಮದ 50 ವರ್ಷದ ಪಿ. ಶಂಕರ್ ಎನ್ನುವವರು ತಮ್ಮ ಹೊಲದಲ್ಲಿ ನಿರ್ಮಿಸಿದ ಮೋದಿ ದೇವಾಲಯವನ್ನು ಕಳೆದ ವಾರ ಉದ್ಘಾಟಿಸಿದ್ದಾರೆ. ಈ ಗುಡಿ 8 ಚದರ ಅಡಿ ವಿಸ್ತೀರ್ಣ ಇದ್ದು, ಗುಡಿಯಲ್ಲಿರುವ ಮೋದಿ ಪ್ರತಿಮೆಗೆ ಅವರು ಪ್ರತಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಪಿ. ಶಂಕರ್, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಂತಹ ಕಲ್ಯಾಣ ಯೋಜನೆಯಿಂದ ಪ್ರಭಾವಿತಗೊಂಡು ಗುಡಿಯನ್ನು ನಿರ್ಮಿಸಿದ್ದೇನೆ. ಈ ಗುಡಿ ನಿರ್ಮಾಣಕ್ಕೆ ಸುಮಾರು 1.2 ಲಕ್ಷ ರು. ವೆಚ್ಚವಾಗಿದೆ ಎಂದು ಹೇಳಿದ್ದಾರೆ.