Asianet Suvarna News Asianet Suvarna News

ಯಾರಿಗೂ ನಾವು ತಲೆಬಾಗಲ್ಲ: ಚೀನಾಕ್ಕೆ ಭಾರತ ಖಡಕ್ ಎಚ್ಚರಿಕೆ

ಗಡಿಯಲ್ಲಿ ತಂಟೆ ಮಾಡುತ್ತಿರುವ ಕುತಂತ್ರಿ ಚೀನಾಗೆ ಭಾರತ ಮತ್ತೊಮ್ಮೆ ಖಡಕ್ ಎಚ್ಚರಿಕೆ ರವಾನಿಸದೆ. ಭಾರ​ತವು ಗಡಿ​ಯಲ್ಲಿ ಕಾವಲು ಕಾಯು​ವು​ದನ್ನು ಜಗ​ತ್ತಿನ ಯಾವ ಶಕ್ತಿ​ಯಿಂದಲೂ ನಿಲ್ಲಿ​ಸಲು ಸಾಧ್ಯ​ವಿ​ಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಡುಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

No force can stop us from patrolling Ladakh borders Says Defence minister Rajnath Singh
Author
New Delhi, First Published Sep 18, 2020, 8:00 AM IST

ನವ​ದೆ​ಹ​ಲಿ(ಸೆ.18): ಗಡಿ​ಯಲ್ಲಿ ಭಾರ​ತವು ಪಹರೆ ನಡೆ​ಸು​ವು​ದನ್ನು ನಿಲ್ಲಿ​ಸಲು ಯಾವ ಶಕ್ತಿ​ಯಿಂದಲೂ ಸಾಧ್ಯ​ವಿಲ್ಲ . ಜತೆಗೆ ನಾವು ಯಾರಿಗೂ ತಲೆ​ಬಾ​ಗಲ್ಲ ಎಂದು ರಕ್ಷಣಾ ಸಚಿವ ರಾಜ​ನಾಥ ಸಿಂಗ್‌ ಗುಡು​ಗಿ​ದ್ದಾರೆ. ಈ ಮೂಲಕ ಗಡಿ​ಭಾ​ಗ​ದಲ್ಲಿ ಕಿರಿ​ಕಿರಿ ಮಾಡು​ತ್ತಿ​ರುವ ಚೀನಾಗೆ ಮತ್ತೊಮ್ಮೆ ಎದಿ​ರೇಟು ನೀಡಿ​ದ್ದಾ​ರೆ.

ಗುರು​ವಾರ ರಾಜ್ಯ​ಸ​ಭೆ​ಯಲ್ಲಿ ಚೀನಾ ಗಡಿ​ಯ​ಲ್ಲಿನ ಪರಿ​ಸ್ಥಿತಿ ಬಗ್ಗೆ ವಿವರ ನೀಡಿದ ಅವರು, ‘ಗ​ಡಿ​ಯಲ್ಲಿ ಭಾರ​ತದ ಸೇನೆ ಅಚ​ಲ​ವಾಗಿ ನಿಂತಿದೆ. ಇದು ಚೀನಾ ಸೇನೆ​ಗೆ ಸಂಕಟ ಉಂಟು ಮಾಡಿದೆ. ಅದ​ಕ್ಕೆಂದೇ ಗಡಿ​ಯಲ್ಲಿ ಅದು ಕಿರಿ​ಕಿರಿ ಆರಂಭಿ​ಸಿ​ದೆ’ ಎಂದು ಹೇಳಿ​ದ​ರು.

ಕಾಂಗ್ರೆ​ಸ್‌ನ ಎ.ಕೆ. ಆ್ಯಂಟನಿ, ಗುಲಾಂ ನಬಿ ಆಜಾದ್‌ ಹಾಗೂ ಇತರ ಕೆಲ​ವರು ಚರ್ಚೆ ವೇಳೆ ಮಧ್ಯ​ಪ್ರ​ವೇ​ಶಿಸಿ, ‘ಸಾಂಪ್ರ​ದಾ​ಯಿ​ಕ​ವಾಗಿ ಭಾರತ ಕಾವಲು ಕಾಯು​ತ್ತಿ​ರುವ ಗಡಿ ಕೇಂದ್ರ​ಗ​ಳಲ್ಲಿ ಚೀನಾ, ನಮ್ಮ ಸೇನೆಗೆ ಗಸ್ತು ತಿರು​ಗಲು ಬಿಡದೇ ಹಿಂದೆ ಸರಿ​ಸು​ತ್ತಿ​ದೆ. ಏಪ್ರಿ​ಲ್‌​ನಲ್ಲಿ ಯಾವ ಸ್ಥಿತಿ ಗಡಿ​ಯ​ಲ್ಲಿತ್ತೋ ಅದೇ ಸ್ಥಿತಿ ಈಗಲೂ ಮರು​ಕ​ಳಿ​ಸ​ಬೇಕು ಎಂಬ ಗೊತ್ತು​ವ​ಳಿ​ಯನ್ನು ಸದನ ಅಂಗೀ​ಕ​ರಿ​ಸ​ಬೇ​ಕು’ ಎಂದು ಆಗ್ರ​ಹಿ​ಸಿ​ದ​ರು.

ಇದಕ್ಕೆ ಉತ್ತ​ರಿ​ಸಿದ ರಾಜನಾ​ಥ್‌, ‘ಪೂರ್ವ ಲಡಾಖ್‌ ಗಡಿ​ಯ​ಲ್ಲಿನ ಪಹರೆ ಕೇಂದ್ರ​ಗ​ಳಿಂದ ಭಾರತ ಹಿಂದೆ ಸರಿ​ಯುವ ಪ್ರಶ್ನೆಯೇ ಇಲ್ಲ. ಇದ​ರಲ್ಲಿ ಯಾವುದೇ ಬದ​ಲಾ​ವಣೆ ಮಾಡು​ವು​ದಿ​ಲ್ಲ. ನಮ್ಮದು ಸಾಂಪ್ರ​ದಾ​ಯಿಕ ಹಾಗೂ ವ್ಯವ​ಸ್ಥಿ​ತ​ವಾದ ಗಸ್ತು ಪದ್ಧತಿ ಇದೆ. ಭಾರ​ತವು ಗಡಿ​ಯಲ್ಲಿ ಕಾವಲು ಕಾಯು​ವು​ದನ್ನು ಜಗ​ತ್ತಿನ ಯಾವ ಶಕ್ತಿ​ಯಿಂದಲೂ ನಿಲ್ಲಿ​ಸಲು ಸಾಧ್ಯ​ವಿ​ಲ್ಲ’ ಎಂದು ಖಡ​ಕ್ಕಾಗಿ ಹೇಳಿ​ದ​ರು.

‘ಚೀನಾ ಮಾತಾ​ಡೋದೇ ಬೇರೆ, ಮಾಡಿದ್ದೇ ಬೇರೆ. ಒಂದು ಕಡೆ ಸೇನಾ ಮಟ್ಟ​ದಲ್ಲಿ ಚೀನಾ ಜತೆ ಶಾಂತಿ ಸಭೆ ನಡೆ​ದಿತ್ತು. ಅದೇ ವೇಳೆ ಚೀನಾ ಆ.29 ಹಾಗೂ 30ರಂದು ಗಡಿ​ಯಲ್ಲಿ ಸಂಘ​ರ್ಷಕ್ಕೆ ಯತ್ನಿ​ಸಿ​ತು. ಯಥಾ​ಸ್ಥಿತಿ ಬದ​ಲಿ​ಸಲು ಯತ್ನಿ​ಸಿ​ತು. ಆದರೆ ಸಂಯಮ ಹಾಗೂ ಶೌರ್ಯ ತೋರಿದ ಭಾರ​ತದ ಸೇನೆ ಇದಕ್ಕೆ ಅವ​ಕಾಶ ನೀಡದೇ ನಮ್ಮ ಗಡಿ ರಕ್ಷಿ​ಸಿ​ತು’ ಎಂದೂ ರಕ್ಷಣಾ ಸಚಿ​ವರು ವಿವ​ರಿ​ಸಿ​ದ​ರು.

ಗಡಿಯಲ್ಲಿ ಕಿರಿಕ್ ಮಾಡುತ್ತಿರುವ ಚೀನಾದಿಂದ ಮತ್ತೊಂದು 'ದುಷ್ಟ' ಕೃತ್ಯ!

‘ಆದರೆ, ಪರಿ​ಸ್ಥಿತಿ ಬೇರೆ​ಯಾ​ಗಿ​ದ್ದರೂ ಭಾರತ ಶಾಂತಿ ಸಂಧಾ​ನಕ್ಕೆ ಬದ್ಧ​ವಾ​ಗಿದೆ. ಯುದ್ಧ ಆರಂಭಿ​ಸು​ವುದು ನಮ್ಮ ಕೈಯ​ಲ್ಲಿದೆ. ಆದರೆ ಮುಗಿ​ಸು​ವುದು ನಮ್ಮ ಕೈಲಿಲ್ಲ. ಶಾಂತಿ​ಯನ್ನು ಕದ​ಡುವ ಯತ್ನ ನಡೆ​ದಿದೆ ಎಂಬುದು ನನಗೆ ಅಚ್ಚರಿ ಮೂಡಿ​ಸಿದೆ. ನಾನು ನಮ್ಮ ದೇಶದ 130 ಕೋಟಿ ಜನ​ರಿಗೆ ಆಶ್ವಾ​ಸನೆ ನೀಡ​ಬ​ಯ​ಸು​ತ್ತೇನೆ. ನಾವು ಯಾರಿಗೂ ತಲೆ​ಬಾ​ಗಲ್ಲ. ಅಲ್ಲದೆ, ಯಾರೂ ನಮ್ಮ ಮುಂದೆ ತಲೆ ಬಾಗು​ವಂತೆ ಆಗ​ಬಾ​ರದು ಎಂಬುದೂ ನಮ್ಮ ಉದ್ದೇ​ಶ’ ಎಂದು ಖಡಕ್‌ ಸ್ವರ​ದಲ್ಲಿ ಹೇಳಿ​ದ​ರು.

ಆದ​ರೆ ​‘ಈ ವಿಚಾ​ರ​ದಲ್ಲಿ ಹೆಚ್ಚಿನ ಮಾಹಿತಿ ಹಂಚಿ​ಕೊ​ಳ್ಳ​ಲಾ​ಗದು. ಏಕೆಂದರೆ ಇದು ಸೇನೆಗೆ ಸಂಬಂಧಿ​ಸಿದ ಸೂಕ್ಷ್ಮ ವಿಚಾ​ರ. ಸದ​ನಕ್ಕೆ ಇದು ಅರ್ಥ​ವಾ​ಗು​ತ್ತದೆ ಎಂದು​ಕೊಂಡಿ​ದ್ದೇ​ನೆ’ ಎಂದು ಅವ​ರು ಸ್ಪಷ್ಟ​ಪ​ಡಿ​ಸಿ​ದ​ರು.

ಆಗ ರಾಜ್ಯ​ಸಭೆ ಸಭಾ​ಪತಿ ವೆಂಕಯ್ಯ ನಾಯ್ಡು ಅವ​ರು, ‘ನೀವು ಸದ​ನ​ದ​ಲ್ಲಿನ ನಾಯ​ಕರ ಜತೆ ಪ್ರತ್ಯೇಕ ಸಭೆ ನಡೆಸಿ ಅವರ ಅನು​ಮಾನ ಪರಿ​ಹ​ರಿ​ಸ​ಬ​ಹು​ದು’ ಎಂಬ ಸಲಹೆ ನೀಡಿ​ದ​ರು.

Follow Us:
Download App:
  • android
  • ios