ಮುಂಬೈ ಟು ಬೆಂಗಳೂರು ಚೇಸ್ ಮಾಡಿ ನಕಲಿ IPS ಅಧಿಕಾರಿ ಅರೆಸ್ಟ್!
ನಕಲಿ ಐಪಿಎಸ್ ಅಧಿಕಾರಿ ಸೆರೆಗೆ ಮುಂಬೈ- ಬೆಂಗಳೂರು ಚೇಸ್!| ನಕಲಿ ಐಪಿಎಸ್ ಅಧಿಕಾರಿ ಕರ್ನಾಟಕದಲ್ಲಿ ಸೆರೆ
ಮುಂಬೈ(ಆ.11): ತಾನೊಬ್ಬ ಐಪಿಎಸ್ ಅಧಿಕಾರಿ ಎಂದು ಸುಳ್ಳು ಹೇಳಿ ಮುಂಬೈನ ಉಡುಪು ಉದ್ಯಮಿಯೊಬ್ಬರಿಂದ 16 ಲಕ್ಷ ರು. ಹಣ ಸುಲಿಗೆ ಮಾಡಿದ್ದ ರಾಜಸ್ಥಾನದ ಅಜ್ಮೇರ್ ಮೂಲದ ವ್ಯಕ್ತಿಯೊಬ್ಬನನ್ನು 1600 ಕಿ.ಮೀ. ದೂರ ಸಿನಿಮೀಯ ಕಾರ್ ಚೇಸ್ ಬಳಿಕ ಮುಂಬೈ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ರಾಜಸ್ಥಾನದ ಅಜ್ಮೇರ್ ಜಿಲ್ಲೆ ಬ್ಯಾವಾರ್ ಗ್ರಾಮದ ಶಿವಶಂಕರ ಶರ್ಮಾ ಎಂಬಾತನೇ ಬಂಧಿತ. ಸುಲಿಗೆಯನ್ನೇ ಪ್ರಮುಖ ವೃತ್ತಿಯಾಗಿಸಿಕೊಂಡಿದ್ದ ಈತ ಮುಂಬೈನ ಉಡುಪು ಉದ್ಯಮಿ ಮೊಹಮ್ಮದ್ ಎಹ್ತೇಶಾಂ ಅಸ್ಲಂ ನವೀವಾಲಾ ಎಂಬುವರಿಂದ 16 ಲಕ್ಷ ರು. ಸುಲಿಗೆ ಮಾಡಿದ್ದ.
ಮುಂಬೈನ ಮರೈನ್ ಡ್ರೈವ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶರ್ಮಾಗೆ ಬಲೆ ಬೀಸಿದರು. ಆತನ ಮೊಬೈಲ್ ಲೊಕೇಶನ್ ಆಧರಿಸಿ ಗುಜರಾತ್ಗೆ ಹೋದರು. ಆದರೆ ಕ್ಷಣ ಕ್ಷಣಕ್ಕೂ ಶರ್ಮಾ ತನ್ನ ಸ್ಥಳ ಬದಲಿಸುತ್ತ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿದ್ದ. ಕೊನೆಗೆ ಪೊಲೀಸರು ಲೊಕೇಶನ್ ಆಧರಿಸಿ ಶರ್ಮಾ ಕಾರು ಚೇಸ್ ಮಾಡಿಕೊಂಡು 1200 ಕಿ.ಮೀ. ದೂರದ ಬೆಂಗಳೂರುವರೆಗೂ ಬಂದರು. ಆಗ ಕಳೆದ ಮಂಗಳವಾರ ಬೆಂಗಳೂರಲ್ಲಿ ಆತ ಸಿಕ್ಕಿಬಿದ್ದಿದ್ದಾನೆ.
ಆಗಿದ್ದೇನು?:
ನವೀವಾಲಾ ಅವರು ಗಾರ್ಮೆಂಟ್ ರಫ್ತು ಉದ್ಯಮಿಯಾಗಿದ್ದು, ಇವರ ಮೇಲೆ ಈ ಹಿಂದೆ ಕಂದಾಯ ವಂಚನೆಯ ಕೆಲವು ಪ್ರಕರಣಗಳಿದ್ದವು. ಇದನ್ನು ತನ್ನ ಆಪ್ತರ ಮೂಲಕ ಶರ್ಮಾ ತಿಳಿದುಕೊಂಡಿದ್ದ. ಇದನ್ನೇ ‘ಬಂಡವಾಳ’ ಆಗಿಸಿಕೊಂಡ ಶರ್ಮಾ, ನವೀವಾಲಾ ಅವರಿಗೆ ಫೋನ್ ಮಾಡಿ, ‘ನಾನು ಐಪಿಎಸ್ ಅಧಿಕಾರಿ. ನಿಮ್ಮ ಮೇಲೆ ಸುಂಕ ಹಾಗೂ ಕಂದಾಯ ವಂಚನೆ ದೂರು ಬಂದಿದೆ. ಈ ಬಗ್ಗೆ ‘ಡೀಲ್’ ಮಾಡಿಕೊಳ್ಳಲು ಮುಂಬೈನ ಸ್ಟಾರ್ ಹೋಟೆಲ್ಗೆ ಬನ್ನಿ’ ಎಂದ.
ನವೀವಾಲಾ ಆ ಸ್ಟಾರ್ ಹೋಟೆಲ್ಗೆ ಬಂದಾಗ ಮಾತುಕತೆ ವೇಳೆ ಜಗಳ ನಡಯಿತು. ಆಗ ಶರ್ಮಾ ಹಾಗೂ ಆತನ ಸಹಚರರು ನವೀವಾಲಾ ಮೇಲೆ ಹಲ್ಲೆ ನಡೆಸಿದರು. ಬಂದೂಕಿನಿಂದ ಬೆದರಿಸಿ ಗುಜರಾತ್ಗೆ ಕರೆದೊಯ್ದರು. ಅಲ್ಲಿ 16 ಲಕ್ಷ ರು. ಸುಲಿಗೆ ಹಣ ಪಡೆದು ನವೀವಾಲಾನನ್ನು ಬಿಟ್ಟು ಕಳಿಸಿದರು. ಬಳಿಕ ಆಘಾತಗೊಂಡ ನವೀವಾಲಾ ಮುಂಬೈ ಹಾಗೂ ಗುಜರಾತ್ ಪೊಲೀಸರಿಗೆ ದೂರು ನೀಡಿದರು.
1200 ಕಿ.ಮೀ. ಸಿನಿಮೀಯ ಚೇಸ್:
ಮುಂಬೈನ ಮರೈನ್ ಡ್ರೈವ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶರ್ಮಾಗೆ ಬಲೆ ಬೀಸಿದರು. ಆತನ ಮೊಬೈಲ್ ಲೊಕೇಶನ್ ಆಧರಿಸಿ ಗುಜರಾತ್ಗೆ ಹೋದರು. ಆದರೆ ಕ್ಷಣ ಕ್ಷಣಕ್ಕೂ ಶರ್ಮಾ ತನ್ನ ಸ್ಥಳ ಬದಲಿಸುತ್ತ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿದ್ದ.
ಕೊನೆಗೆ ಪೊಲೀಸರು ಲೊಕೇಶನ್ ಆಧರಿಸಿ ಶರ್ಮಾ ಕಾರು ಚೇಸ್ ಮಾಡಿಕೊಂಡು 1200 ಕಿ.ಮೀ. ದೂರದ ಬೆಂಗಳೂರುವರೆಗೂ ಬಂದರು. ಆಗ ಕಳೆದ ಮಂಗಳವಾರ ಬೆಂಗಳೂರಲ್ಲಿ ಆತ ಸಿಕ್ಕಿಬಿದ್ದಿದ್ದಾನೆ.
ಹವ್ಯಾಸಿ ಕ್ರಿಮಿನಲ್:
ಶರ್ಮಾ ಹವ್ಯಾಸಿ ಕ್ರಿಮಿನಲ್. ಕಳೆದ ವರ್ಷ ತಾನು ಐಪಿಎಸ್ ಅಧಿಕಾರಿ ಎಂದು ಹೇಳಿ ಹೋಟೆಲ್ ಉದ್ಯಮಿಗೆ ಲಕ್ಷಾಂತರ ರು. ವಂಚಿಸಿದ್ದಕ್ಕಾಗಿ ಮಧ್ಯಪ್ರದೇಶದಲ್ಲಿ ಬಂಧಿತನಾನಾಗಿದ್ದ. ಗುಜರಾತ್ನ ಮಹಿಳಾ ಪೊಲೀಸ್ ಅಧಿಕಾರಿಯನ್ನು ಮದುವೆ ಮಾಡಿಕೊಳ್ಳುವುದಾಗಿ ವಂಚಿಸಿ ಆಕೆಯ ಖಾತೆಯಿಂದ ಹಣ ಲಟಾಯಿಸಿ ಪರಾರಿಯಾಗಿದ್ದ.
ನವೀವಾಲಾ ನೀಡಿದ ದೂರಿನ ಮೇರೆಗೆ ಮುಂಬೈ ಪೊಲೀಸರು ತನಿಖೆ ಆರಂಭಿಸಿ, ಈಗ ಶರ್ಮಾನನ್ನು ಬಂಧಿಸಿದ್ದಾರೆ.
ನವೀವಾಲಾ ವಿರುದ್ಧ ತೆರಿಗೆ ವಂಚನೆ ಪ್ರಕರಣಗಳು ಇದ್ದವು. ಇದನ್ನು ತಿಳಿದ ಆರೋಪಿ, ತಾನೊಬ್ಬ ಐಪಿಎಸ್ ಅಧಿಕಾರಿ ಎಂದು ಹೇಳಿ ಮುಂಬೈನ್ ಸ್ಟಾರ್ ಹೋಟೆಲ್ಗೆ ಡೀಲ್ಗೆ ಕರೆದಿದ್ದ. ನವೀವಾಲಾ ಹೋದಾಗ ಜಗಳ ಆಯಿತು. ಬಂದೂಕು ಬಳಸಿ ಬೆದರಿಸಿ ಶರ್ಮಾ, ಸಹಚರರು, 16 ಲಕ್ಷ ರು. ಪಡೆದು ಬಿಟ್ಟು ಕಳುಹಿಸಿದ್ದರು. ನವೀವಾಲಾ ಪೊಲೀಸರಿಗೆ ದೂರು ನೀಡಿದ್ದರು.