ಉಗ್ರರ ವಿರುದ್ಧ ಭಾರತೀಯ ಸೇನೆಯ ಜಂಟಿ ಕಾರ್ಯಾಚರಣೆ| ಶರಣಾಗುವಂತೆ ಉಗ್ರನ ಮನವೊಲಿಸಿದ ಭಾರತೀಯ ಸೇನೆಯ ಯೋಧ| ನಿನಗೇನೂ ಆಗಲ್ಲ ಕಂದ

ಬದ್ಗಾಮ್(ಅ.17): ಭಾರತೀಯ ಸೇನೆಯೊಂದು ವಿಡಿಯೋ ಬಹಿರಂಗಪಡಿಸಿದ್ದು, ಇದರಲ್ಲಿ ಜಮ್ಮು ಕಾಶ್ಮೀರದ ಬದ್ಗಾಮ್‌ನಲ್ಲಿ ಉಗ್ರರ ವಿರುದ್ಧ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರನೊಬ್ಬ ಭಾರತೀಯ ಸೇನೆ ಎದುರು ಶರಣಾಗುವ ರೋಚಕ ದೃಶ್ಯಗಳಿವೆ. 

Add Asianetnews Kannada as a Preferred SourcegooglePreferred

ಶರಣಾದ ಉಗ್ರನನ್ನು ಜಹಾಂಗೀರ್ ಭಟ್ ಎಂದು ಗುರುತಿಸಲಾಗಿದೆ. 20 ವರ್ಷ ವಯಸ್ಸಿನ ಈತ ಕೆಲ ದಿನಗಳ ಹಿಂದಷ್ಟೇ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದು, ಸೇನೆ ಆತನಿಂದ AK-47 ಗನ್ ವಶಪಡಿಸಿಕೊಂಡಿದೆ. 

ಇನ್ನು ಸೇನೆ ಶುಕ್ರವಾರದಂದು ಶೇರ್ ಮಾಡಿಕೊಂಡಿರುವ ಈ ವಿಡಿಯೋದಲ್ಲಿ ಭಾರತೀಯ ಸೇನೆಯ ಯೋಧನೊಬ್ಬ ಆ ಉಗ್ರನನ್ನು ಸಮಾಧಾನಪಡಿಸಿ ಶರಣಾಗತಿಯಾಗಲು ಹೇಗೆ ಮನವೊಲಿಸುತ್ತಾನೆಂದು ನೋಡಬಹುದಾಗಿದೆ. ಇನ್ನು ಯೋಧ ಉಗ್ರನನ್ನು ಮನವೊಲಿಸುವ ವೇಳೆ ಬಹಳ ಶಾಂತನಾಗಿ ನೀನು ಸುರಕ್ಷಿತವಾಗಿದ್ದೀ, ಮುಂದೆ ಬಾ ಎನ್ನುವ ಮಾತುಗಳನ್ನೂ ಈ ವಿಡಿಯೋದಲ್ಲಿ ಆಲಿಸಬಹುದಾಗಿದೆ.

Scroll to load tweet…

ಭಗವಂತನ ಹೆಸರಲ್ಲಿ, ನಿಮ್ಮ ಕುಟುಂಬಕ್ಕಾಗಿಯಾದರೂ ಶರಣಾಗು ಎಂದು ಸೈನಿಕನೊಬ್ಬ ಆರಂಭದಲ್ಲಿ ಉಗ್ರನ ಮನವಿಒಲಿಸಲು ಯತ್ನಿಸುತ್ತಾನೆ. ಇನ್ನು ಆ ಉಗ್ರ ಜಹಾಂಗೀರ್ ಭಟ್ ಎಂದು ತಿಳಿಯುತ್ತಿದ್ದಂತೆಯೇ ಯೋಧರು ಪರಸ್ಪರ ಯಾರೂ ಫೈರಿಂಗ್ ಮಾಡಬೇಡಿ ಎನ್ನುವುದನ್ನೂ ಕೇಳಿಸಿಕೊಳ್ಳಬಹುದಾಗಿದೆ.

ಇನ್ನು ಆ ಕಾಶ್ಮೀರಿ ಯುವಕನನ್ನು ಶರಣಾಗಲು ಮನವೊಲಿಸಿದ ಸೈನಿಕ ಅಂತಿಮವಾಗಿ ನಿನಗೇನೂ ಆಗುವುದಿಲ್ಲ ಕಂದ ಎಂದ ಮಾತುಗಳು ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಆ ಯುವಕ ಶರಣಾಗುತ್ತಿದ್ದಂತೆಯೇ ಸೈನಿಕನೊಬ್ಬ ಆತನಿಗೆ ನೀರು ನೀಡಿ ಉಪಚರಿಸಿದ್ದಾನೆ.