China New Law Influencers Must Show Degree for Content ಚೀನಾವು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗಾಗಿ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ವೈದ್ಯಕೀಯ, ಕಾನೂನು, ಹಣಕಾಸಿನಂತಹ ಸೂಕ್ಷ್m ವಿಷಯಗಳ ಬಗ್ಗೆ ಪೋಸ್ಟ್ ಮಾಡಲು ತಮ್ಮ ಅರ್ಹತೆಗಳನ್ನು ಸಾಬೀತುಪಡಿಸುವುದನ್ನು ಕಡ್ಡಾಯಗೊಳಿಸಿದೆ.
- Home
- News
- India News
- India Latest News Live: ಸೂಕ್ಷ್ಮ ವಿಚಾರಗಳ ಬಗ್ಗೆ ಸಿಕ್ಕ ಸಿಕ್ಕವರು ಸೋಶಿಯಲ್ ಮೀಡಿಯಾ ಕಂಟೆಂಟ್ ಮಾಡುವಂತಿಲ್ಲ, ಡ್ರಿಗ್ರಿ ಇರೋದು ಕಡ್ಡಾಯ!
India Latest News Live: ಸೂಕ್ಷ್ಮ ವಿಚಾರಗಳ ಬಗ್ಗೆ ಸಿಕ್ಕ ಸಿಕ್ಕವರು ಸೋಶಿಯಲ್ ಮೀಡಿಯಾ ಕಂಟೆಂಟ್ ಮಾಡುವಂತಿಲ್ಲ, ಡ್ರಿಗ್ರಿ ಇರೋದು ಕಡ್ಡಾಯ!

ನವದೆಹಲಿ: ಅರುಣಾಚಲ ಪ್ರದೇಶ ತನ್ನ ಭಾಗವೆಂದು ಸದಾ ಕ್ಯಾತೆ ತೆಗೆಯುವ ಚೀನಾ, ಇದೀಗ ಅರುಣಾಚಲದ ಗಡಿ ಪ್ರದೇಶದಲ್ಲಿ ತನ್ನ ಅತ್ಯಾಧುನಿಕ ಯುದ್ಧ ವಿಮಾನಗಳ ತಂಗುದಾಣವನ್ನು ನಿರ್ಮಿಸಿದೆ. ಭಾರತದ ರಾಡಾರ್ ಕಣ್ಗಾವಲು ತಪ್ಪಿಸುವ ರೀತಿಯಲ್ಲಿ ನಿರ್ಮಿಸಿರುವ ತಂಗುದಾಣದೊಳಗೆ 35ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಇರಿಸುವ ವ್ಯವಸ್ಥೆ ಮಾಡಲಾಗಿದೆ. ಭಾರತ ಮತ್ತು ಚೀನಾ ದೇಶಗಳನ್ನು ಪ್ರತ್ಯೇಕಿಸುವ ಮ್ಯಾಕ್ಮೋಹನ್ ಗಡಿರೇಖೆಯಿಂದ 40 ಕಿ.ಮೀ ದೂರದ ಲೂನ್ಜ್ ಪ್ರದೇಶದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ತನ್ನ ಅತ್ಯಾಧುನಿಕ ಯುದ್ಧ ವಿಮಾನ, ಡ್ರೋನ್ಗಳನ್ನು ನಿಯೋಜಿಸಲಿದೆ.
India Latest News Live 28 October 2025ಸೂಕ್ಷ್ಮ ವಿಚಾರಗಳ ಬಗ್ಗೆ ಸಿಕ್ಕ ಸಿಕ್ಕವರು ಸೋಶಿಯಲ್ ಮೀಡಿಯಾ ಕಂಟೆಂಟ್ ಮಾಡುವಂತಿಲ್ಲ, ಡ್ರಿಗ್ರಿ ಇರೋದು ಕಡ್ಡಾಯ!
India Latest News Live 28 October 2025ಅಮ್ಮ ತಂದ ಅದೃಷ್ಟ, ತಾಯಿಯ ಜನ್ಮದಿನದ ನಂಬರ್ನ ಲಾಟರಿ ಟಿಕೆಟ್ ಖರೀದಿಸಿ 240 ಕೋಟಿ ಗೆದ್ದ ಭಾರತೀಯ ವ್ಯಕ್ತಿ!
Indian Man Anil Kumar Bolla Wins ₹240 Crore UAE Lottery Jackpot ಅಬುದಾಭಿಯಲ್ಲಿ ನೆಲೆಸಿರುವ ಭಾರತೀಯ ಮೂಲದ ಅನಿಲ್ ಕುಮಾರ್ ಬೊಲ್ಲಾ, ತಮ್ಮ ತಾಯಿಯ ಜನ್ಮದಿನದ ನಂಬರ್ ಬಳಸಿ ಖರೀದಿಸಿದ ಲಾಟರಿಯಲ್ಲಿ 240 ಕೋಟಿ ರೂಪಾಯಿ ಗೆದ್ದಿದ್ದಾರೆ.
India Latest News Live 28 October 2025ಸೂಪರ್ಸ್ಟಾರ್ ರಜನಿಕಾಂತ್ ಪೋಯೆಸ್ ಗಾರ್ಡನ್ ನಿವಾಸಕ್ಕೆ ದಿಢೀರನೇ ನುಗ್ಗಿದ ತಮಿಳುನಾಡು ಪೊಲೀಸ್, ಆಗಿದ್ದೇನು?
Bomb Squad Raids Rajinikanth and Dhanush Residences ರಜನಿಕಾಂತ್ ಮತ್ತು ನಟ ಧನುಷ್ ಅವರ ಮನೆಗಳಿಗೆ ಬಾಂಬ್ ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬೆದರಿಕೆ ಬಂದಿತ್ತು. ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ, ಅದು ನಕಲಿ ಬೆದರಿಕೆ ಎಂದು ತಿಳಿದುಬಂದಿದೆ.
India Latest News Live 28 October 2025ದುಬಾರಿ ಬಿಸ್ಪೋಕ್ RR ಖರೀದಿಸಿದ ಅನಂತ್ ಅಂಬಾನಿ, ಇದು ಭಾರತದ ಐಕಾನಿಕ್ ಕಾರು ಯಾಕೆ?
ದುಬಾರಿ ಬಿಸ್ಪೋಕ್ RR ಖರೀದಿಸಿದ ಅನಂತ್ ಅಂಬಾನಿ, ಇದು ಭಾರತದ ಐಕಾನಿಕ್ ಕಾರು ಯಾಕೆ? ಇದರ ಬೆಲೆ ಹಾಗೂ ವಿಶೇಷತೆಗಳ ಕುರಿತು ಭಾರಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಈ ಕಾರು ಹಾಗೂ ಭಾರತದ ಇತಿಹಾಸಕ್ಕೂ ಇರುವ ಸಂಬಂಧ ಏನು?
India Latest News Live 28 October 2025ತೇಜಸ್ವಿಯ ಪ್ರಾಣಪತ್ರದೊಂದಿಗೆ ಮಹಾಘಟಬಂದನ್ ಪ್ರಣಾಳಿಕೆ ಪ್ರಕಟ, 'ವಕ್ಫ್ ಕಾಯ್ದೆಗೆ ತಡೆ, 3 ಸಾವಿರ ಪಿಂಚಣಿ' ಘೋಷಣೆ!
Mahagathbandhan Manifesto Released ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಮಹಾಘಟಬಂದನ್ ತನ್ನ 'ಪ್ರಾಣ ಪತ್ರ' ಎಂಬ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (OPS) ಮರುಸ್ಥಾಪನೆಯಂಥ ಪ್ರಮುಖ ಭರವಸೆಗಳನ್ನು ನೀಡಲಾಗಿದೆ.
India Latest News Live 28 October 2025ಇಂಡೋ-ಆಸೀಸ್ ಮೊದಲ ಟಿ20 ಪಂದ್ಯಕ್ಕೆ ಕ್ಷಣಗಣನೆ; ಟಾಸ್ ಗೆದ್ರೆ ಯಾವ ಆಯ್ಕೆ ಬೆಸ್ಟ್?
India Latest News Live 28 October 2025ಮದುವೆಯಾದ ಒಂದೇ ವರ್ಷಕ್ಕೆ ಗಂಡನಿಗೆ ವಿಚ್ಛೇದನ ನೀಡಿದ ಯುವ ಸೀರಿಯಲ್ ನಟಿ?
Marathi Actress Yogita Chavan Files for Divorce from Saorabh Chaughule 'ಜೀವ್ ಮಝಾ ಗುಂತಲಾ' ಖ್ಯಾತಿಯ ನಟಿ ಯೋಗಿತಾ ಚವಾಣ್ ಮತ್ತು ನಟ ಸೌರಭ್ ಚೌಘುಲೆ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಹಬ್ಬಿದೆ. ಮದುವೆಯಾಗಿ ಒಂದು ವರ್ಷವಾಗುವ ಮುನ್ನವೇ ಇಬ್ಬರೂ ಪ್ರತ್ಯೇಕವಾಗಿದ್ದಾರೆ.
India Latest News Live 28 October 2025ಪ್ರವಾಸಿಗರ ಹೊತ್ತು ಸಾಗಿದ ವಿಮಾನ ಪತನ, ದುರಂತದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ
ಪ್ರವಾಸಿಗರ ಹೊತ್ತು ಸಾಗಿದ ವಿಮಾನ ಪತನ, ದುರಂತದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ, ತಾಂತ್ರಿಕ ಸಮಸ್ಯೆ, ವಿಸಿಬಿಲಿಟಿ ಸೇರಿದಂತೆ ಯಾವುದೇ ಸಮಸ್ಯೆ ಇರಲಿಲ್ಲ, ಪತನಕ್ಕೆ ಕಾರಣವೇನು ಅನ್ನೋದು ಇದೀಗ ಅನುಮಾನಕ್ಕೆ ಕಾರಣವಾಗುತ್ತಿದೆ.
India Latest News Live 28 October 2025ಭಾರತೀಯರಿಗೆ ಚಾಟ್GPT ಗೋ ಉಚಿತ ಆಫರ್ ಘೋಷಿಸಿದ ಓಪನ್ಎಐ, ಯಾವುದೇ ಶುಲ್ಕವಿಲ್ಲ
ಭಾರತೀಯರಿಗೆ ಚಾಟ್GPT ಗೋ ಉಚಿತ ಆಫರ್ ಘೋಷಿಸಿದ ಓಪನ್ಎಐ, ಯಾವುದೇ ಶುಲ್ಕವಿಲ್ಲ, ಬಹುತೇಕರು ಇದೀಗ ಎಐ ಅವಲಂಬಿತರಾಗಿದ್ದಾರೆ. ಇದರ ನಡುವೆ ಓಪನ್ಎಐ, ಎಐ ಚಾಟ್ಬಾಟ್ ಸೇರಿದತೆ ಹಲವು ಎಐ ಸೊಲ್ಯೂಶನ್ ಉಚಿತವಾಗಿ ನೀಡುತ್ತಿದೆ. ಎಷ್ಟು ದಿನ ಈ ಸೇವೆ ಉಚಿತವಾಗಿ ಸಿಗಲಿದೆ?
India Latest News Live 28 October 2025ಭಾರತ vs ಆಸ್ಟ್ರೇಲಿಯಾ T20 ಸರಣಿ ಎಲ್ಲಿ ಫ್ರೀಯಾಗಿ ನೋಡಬಹುದು ಗೊತ್ತಾ?
ಭಾರತ-ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ T20 ಸರಣಿ ಬುಧವಾರ ಕ್ಯಾನ್ಬೆರಾದಲ್ಲಿ ಆರಂಭವಾಗಲಿದೆ. ಈ ಪಂದ್ಯ ಯಾವ ಸಮಯಕ್ಕೆ ಶುರುವಾಗುತ್ತೆ? ಎಲ್ಲಿ ಲೈವ್ ಸ್ಟ್ರೀಮಿಂಗ್ ಫ್ರೀಯಾಗಿ ನೋಡಬಹುದು ಅನ್ನೋ ವಿವರ ಇಲ್ಲಿದೆ.
India Latest News Live 28 October 2025ಟಾಟಾ ಟ್ರಸ್ಟ್ ಬೋರ್ಡ್ನಿಂದ ರತನ್ ಟಾಟಾ ಆಪ್ತಮಿತ್ರ ಮೆಹ್ಲಿ ಮಿಸ್ತ್ರಿಗೆ ಗೇಟ್ಪಾಸ್?
Ratan Tata Close Aide Mehli Mistry Likely Ousted from Tata Trusts Board ರತನ್ ಟಾಟಾ ಅವರ ಆಪ್ತಮಿತ್ರ ಮೆಹ್ಲಿ ಮಿಸ್ತ್ರಿ ಅವರನ್ನು ಟಾಟಾ ಟ್ರಸ್ಟ್ಗಳ ಮಂಡಳಿಯಿಂದ ಹೊರಹಾಕುವ ಸಾಧ್ಯತೆಯಿದೆ. ಮಿಸ್ತ್ರಿ ಅವರ ಮರು ನೇಮಕಕ್ಕೆ ಮೂವರು ಟ್ರಸ್ಟಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
India Latest News Live 28 October 2025ಏನಿದು ವೇತನ ಆಯೋಗ, ಎಷ್ಟಾಗಲಿದೆ ಕೇಂದ್ರ ಸರ್ಕಾರಿ ನೌಕರರ ಸ್ಯಾಲರಿ?
What is the 8th Pay Commission ಕೇಂದ್ರ ಸರ್ಕಾರವು 8ನೇ ವೇತನ ಆಯೋಗ ರಚನೆಗೆ ಅನುಮೋದನೆ ನೀಡಿದ್ದು, 18 ತಿಂಗಳೊಳಗೆ ವರದಿ ಸಲ್ಲಿಸಲು ಸೂಚಿಸಿದೆ. 2026ರ ಜನವರಿ 1 ರಿಂದ ಜಾರಿಗೆ ಬರಲಿರುವ ಈ ಹೊಸ ವೇತನ ಶ್ರೇಣಿಯು, ಫಿಟ್ಮೆಂಟ್ ಅಂಶದ ಮೇಲೆ ನಿರ್ಧಾರವಾಗುತ್ತದೆ.
India Latest News Live 28 October 2025ರಣಜಿ ಟೂರ್ನಿಯಲ್ಲಿ ಮತ್ತೆ ಘರ್ಜಿಸಿದ ಶಮಿ; 8 ವಿಕೆಟ್ ಕಬಳಿಸಿ ಬಂಗಾಳ ಗೆಲ್ಲಿಸಿದ ವೇಗಿ! ಬಿಸಿಸಿಐ ಆಯ್ಕೆ ಸಮಿತಿಗೆ ಮುಖಭಂಗ
India Latest News Live 28 October 2025Breaking - 8ನೇ ವೇತನ ಆಯೋಗಕ್ಕೆ ಒಪ್ಪಿದ ಕೇಂದ್ರ ಸರ್ಕಾರ, 50 ಲಕ್ಷ ಉದ್ಯೋಗಿ 69 ಲಕ್ಷ ಪಿಂಚಣಿದಾರರಿಗೆ ಭರ್ಜರಿ ಲಾಭ!
Central Govt Approves 8th Pay Commission ಕೇಂದ್ರ ಸರ್ಕಾರವು 8ನೇ ವೇತನ ಆಯೋಗಕ್ಕೆ ಅನುಮೋದನೆ ನೀಡಿದ್ದು, ಇದು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡಲಿದೆ.
India Latest News Live 28 October 2025ಈ ಒಬ್ಬ ಆಟಗಾರನ ಮೇಲೆ ಮೂರು ಫ್ರಾಂಚೈಸಿಗಳ ಕಣ್ಣು! ಯಾರಾ ಪಾಲಾಗ್ತಾರೆ ವಿಕೆಟ್ ಕೀಪರ್ ಬ್ಯಾಟರ್
ಐಪಿಎಲ್ 2026ರ ಮಿನಿ ಹರಾಜು ಸದ್ಯದಲ್ಲೇ ನಡೆಯಲಿದೆ. ಸನ್ರೈಸರ್ಸ್ ಹೈದರಾಬಾದ್, ಇಶಾನ್ ಕಿಶನ್ರನ್ನು ಬಿಟ್ಟುಕೊಟ್ಟು, ರಾಜಸ್ಥಾನ ರಾಯಲ್ಸ್ನಿಂದ ಸಂಜು ಸ್ಯಾಮ್ಸನ್ರನ್ನು ಟ್ರೇಡ್ ವಿಂಡೋ ಮೂಲಕ ತೆಗೆದುಕೊಳ್ಳುವ ಯೋಚನೆಯಲ್ಲಿದೆ ಎಂದು ವರದಿಯಾಗಿದೆ.
India Latest News Live 28 October 2025ಆಸ್ಟ್ರೇಲಿಯಾ ಎದುರಿನ ಸೆಮೀಸ್ಗೂ ಮುನ್ನ ಭಾರತಕ್ಕೆ ಗುಡ್ ನ್ಯೂಸ್; ತಂಡ ಕೂಡಿಕೊಂಡ ಬಿಗ್ ಹಿಟ್ಟರ್!
ನವಿ ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡವು ಇದೀಗ ಸೆಮಿಫೈನಲ್ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಸೆಮೀಸ್ಗೂ ಮುನ್ನ ಆರಂಭಿಕ ಬ್ಯಾಟರ್ ಪ್ರತಿಕಾ ರಾವಲ್ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಮತ್ತೋರ್ವ ಡೇಂಜರಸ್ ಆಟಗಾರ್ತಿ ತಂಡ ಕೂಡಿಕೊಂಡಿದ್ದಾರೆ.
India Latest News Live 28 October 2025ರಹಾನೆ ಬಳಿಕ ಅಜಿತ್ ಅಗರ್ಕರ್ ಮೇಲೆ ಮುಗಿಬಿದ್ದ ಕನ್ನಡಿಗ! ಆಯ್ಕೆ ಸಮಿತಿ ಮಾಡಿದ್ದು ನ್ಯಾಯನಾ?
ಭಾರತ ಟೆಸ್ಟ್ ತಂಡದಿಂದ ಕೈಬಿಟ್ಟಿರುವುದಕ್ಕೆ ಅಜಿಂಕ್ಯ ರಹಾನೆ ಬಿಸಿಸಿಐ ಆಯ್ಕೆ ಸಮಿತಿ ಮೇಲೆ ಅಸಮಾಧಾನ ಹೊರಹಾಕಿದ್ದರು. ಇದೀಗ ಕನ್ನಡಿಗ ಕರುಣ್ ನಾಯರ್ ಕೂಡಾ ಅಜಿತ್ ಅಗರ್ಕರ್ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.
India Latest News Live 28 October 2025ಆಸ್ಟ್ರೇಲಿಯಾ ಎದುರಿನ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಔಟ್!
ಏಕದಿನ ಸರಣಿ ಸೋಲಿನ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಸಜ್ಜಾಗಿದೆ. ಟಿ20 ವಿಶ್ವಕಪ್ಗೆ ತಂಡವನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಈ ಸರಣಿ ನಿರ್ಣಾಯಕವಾಗಿದ್ದು, ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆ ಅವರಂತಹ ಆಟಗಾರರ ಪಾತ್ರ ಮಹತ್ವದ್ದಾಗಿದೆ.
India Latest News Live 28 October 2025KSCA ನಿಷ್ಕ್ರಿಯ, ಶೀಘ್ರ ಚುನಾವಣೆ ಘೋಷಿಸಿ - ವೆಂಕಟೇಶ್ ಪ್ರಸಾದ್
ಕೆಎಸ್ಸಿಎ ಸಮಿತಿಯ ಅವಧಿ ಮುಗಿದರೂ ಚುನಾವಣೆ ಘೋಷಿಸದ ಬಗ್ಗೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮತ್ತು ಅವರ ತಂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ರಾಜ್ಯ ಕ್ರಿಕೆಟ್ ಸಂಸ್ಥೆ ನಿಷ್ಕ್ರಿಯವಾಗಿದ್ದು, ತಮ್ಮನ್ನು ಅನರ್ಹಗೊಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.