* ಯು.ಪಿಯಲ್ಲಿ ತಲೆಗೆ ನೀರಿನ ಬದಲು, ಎಂಜಲು ಉಗಿದ* ಕೇಶ ವಿನ್ಯಾಸಕಾರ: ವಿವಾದ
ನವದೆಹಲಿ(ಜ. 07): ಕೇಶ ವಿನ್ಯಾಸಕಾರನೋರ್ವ ಮಹಿಳೆಯ ತಲೆಗೆ ನೀರು ಸಿಂಪಡಿಸುವ ಬದಲು ಎಂಜಲು(ಉಗಿದಿರುವ) ಘಟನೆ ಉತ್ತರ ಪ್ರದೇಶದ ಮುಜಾಫ್ಫರನಗರದಲ್ಲಿ ನಡೆದಿದೆ. ಈ ಘಟನೆ ವಿವಾದದ ಸ್ವರೂಪ ಪಡೆದಿದ್ದು, ಕೇಶ ವಿನ್ಯಾಸಕಾರನ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ.
ದೇಶಾದ್ಯಂತ 115 ನಗರಗಳಲ್ಲಿ 850 ಸಲೂನ್ಗಳನ್ನು ನಡೆಸುತ್ತಿರುವ ಕೇಶ ವಿನ್ಯಾಸಕಾರ ಜಾವೇದ್ ಹಬೀಬ್, ಇತ್ತೀಚೆಗೆ ಮುಜಾಫ್ಫರನಗರದಲ್ಲಿ ಕೇಶವಿನ್ಯಾಸದ ಕುರಿತು ಕಾರ್ಯಗಾರ ನಡೆಸಿದ್ದ. ಈ ವೇಳೆ ಪೂಜಾ ಗುಪ್ತಾ ಎಂಬ ಮಹಿಳೆಗೆ ಕೇಶವಿನ್ಯಾಸ ಮಾಡುವಾಗ ನೀರು ಇಲ್ಲದಿದ್ದರೆ, ಎಂಜಲನ್ನು ಉಪಯೋಗಿಸಿ ಎಂದು ಹೇಳಿ ಉಗಿದಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
Scroll to load tweet…
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ಹಬೀಬ್ ಕೃತ್ಯವನ್ನು ಖಂಡಿಸಿದೆ. ಈ ಕೃತ್ಯವು ವಿಪತ್ತು ನಿರ್ವಹಣಾ ಕಾಯ್ದೆಯ ಉಲ್ಲಂಘನೆಯಾಗಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉತ್ತರ ಪ್ರದೇಶ ಪೊಲೀಸರಿಗೆ ಆಗ್ರಹಿಸಿದೆ.
