ನೋವಿನ ಪ್ರತಿಫಲ ಕಾಣಲಿರುವ ದೀದಿ: ಶಾ ವ್ಯಂಗ್ಯ| ನಿಮ್ಮ ಕಾಲಿ​ಗಾದ ಗಾಯ ಬೇಗ ಗುಣ​ಮು​ಖ​ವಾ​ಗ​ಲಿ| ಬಿಜೆಪಿ ಕಾರ‍್ಯಕರ್ತರ ಸಾವಿನ ನೋವು ನಿಮಗೆ ಗೊತ್ತಾ?| ಈ ಚುನಾ​ವಣೆ ಫಲಿ​ತಾಂಶ​ದಲ್ಲಿ ನೋವಿನ ಪ್ರತಿ​ಫ​ಲ​ ಕಾಣ​ಲಿ​ದ್ದೀ​ರಿ

ರಾಣಿ​ಬಂಧ್‌ (ಮಾ.16): ‘ಇತ್ತೀ​ಚೆ​ಗಷ್ಟೇ ಕಾಲಿಗೆ ಗಾಯ ಮಾಡಿ​ಕೊಂಡಿ​ರುವ ಪಶ್ಚಿಮ ಬಂಗಾಳ ಮುಖ್ಯ​ಮಂತ್ರಿ ಮಮತಾ ಬ್ಯಾನರ್ಜಿ ಅವರು ಶೀಘ್ರ ಗುಣ​ಮು​ಖ​ರಾ​ಗಲಿ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಆಶಿ​ಸಿ​ದ್ದಾರೆ. ಆದ​ರೆ ತಮ್ಮದೇ ನೇತೃ​ತ್ವದ ಟಿಎಂಸಿ ಸರ್ಕಾ​ರ​ದ ದುರಾ​ಡ​ಳಿ​ತ​ದಲ್ಲಿ ಸಾವು-ನೋವು ಕಂಡ ಬಿಜೆಪಿ ಕಾರ್ಯ​ಕ​ರ್ತರ ಕುಟುಂಬದ ನೋವಿನ ಬಗ್ಗೆ ತಮಗೆ ಅರಿ​ವಿ​ದೆಯೇ’ ಎಂದು ಮಮತಾಗೆ ಶಾ ಪ್ರಶ್ನಿ​ಸಿ​ದ್ದಾರೆ.

ಸೋಮ​ವಾರ ಬಂಕುರಾ ಜಿಲ್ಲೆಯ ರಾಣಿ​ಬಂಧ್‌ನಲ್ಲಿ ನಡೆದ ಬಿಜೆಪಿ ರಾರ‍ಯಲಿ​ಯ​ನ್ನು​ದ್ದೇ​ಶಿಸಿ ಮಾತ​ನಾ​ಡಿದ ಶಾ, ‘ದೀದಿ​(​ಬ್ಯಾನ​ರ್ಜಿ) ನಿಮ್ಮ ಕಾಲಿಗೆ ಗಾಯ​ವಾ​ದಾಗ ಅದರ ನೋವು ನಿಮಗೆ ಗೊತ್ತಾ​ಯಿತು. ನೀವು ಬೇಗ ಗುಣ​ಮು​ಖ​ರಾ​ಗಲಿ ಎಂದು ಆಸೆ​ಪ​ಡು​ತ್ತೇನೆ. ಆದರೆ ಟಿಎಂಸಿ ಗೂಂಡಾ​ಗ​ಳಿಂದ ಹತ್ಯೆ​ಗೀ​ಡಾದ 130 ಬಿಜೆಪಿ ಕಾರ್ಯ​ಕ​ರ್ತರ ಅಮ್ಮಂದಿರ ನೋವಿನ ಬಗ್ಗೆ ನೀವು ಎಂದಾ​ದರೂ ಯೋಚಿ​ಸಿ​ದ್ದೀ​ರಾ? ಖಂಡಿತಾ ಇಲ್ಲ. ಈ ಚುನಾ​ವ​ಣೆ​ಯಲ್ಲಿ ಆ ನೋವಿನ ಪ್ರತಿ​ಫ​ಲ​ವ​ನ್ನು ನೀವು ಕಾಣ​ಲಿ​ದ್ದೀ​ರಿ’ ಎಂದು ಗುಡು​ಗಿ​ದರು.

‘ಬಂಗಾ​ಳ​ದಲ್ಲಿ ಬಿಜೆಪಿ ಸರ್ಕಾರ ರಚ​ನೆ​ಯಾ​ದರೆ ರಾಜ್ಯ ಸರ್ಕಾರಿ ನೌಕ​ರ​ರಿಗೆ 7ನೇ ವೇತನ ಆಯೋ​ಗ ಜಾರಿ ಮಾಡ​ಲಾ​ಗು​ತ್ತ​ದೆ’ ಎಂದು ಭರ​ವಸೆ ನೀಡಿ​ದರು.