Asianet Suvarna News Asianet Suvarna News

ಕೊರೋನಾದಿಂದ ಅನಾಥರಾದ ಮಕ್ಕಳ ಪುನರ್ವಸತಿಗೆ ಕೇಂದ್ರದ ನಿಯಮ!

* ಕೊರೋನಾದಿಂದ ಅನಾಥರಾದ ಮಕ್ಕಳ ಪುನರ್ವಸತಿಗೆ ಕೇಂದ್ರದ ನಿಯಮ

* ನೇರವಾಗಿ ಯಾರೂ ದತ್ತು ಪಡೆಯಕೂಡದು

* ಮಕ್ಕಳನ್ನು ಮರುವಸತಿ ಕೇಂದ್ರಕ್ಕೆ ದಾಖಲಿಸಬೇಕು

* ದತ್ತು ಪಡೆಯಲು ಇಚ್ಛಿಸಿದಲ್ಲಿ ಸರ್ಕಾರವನ್ನು ಸಂಪರ್ಕಿಸಬೇಕು

Govt lays out procedure to rehabilitate children who lost parents to Covid pod
Author
Bangalore, First Published May 18, 2021, 10:04 AM IST

ನವದೆಹಲಿ(ಮೇ.18): ಕೊರೋನಾದಿಂದ ತಮ್ಮ ತಂದೆ ತಾಯಂದಿರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಪುನರ್ವಸತಿಗೆ ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವಾಲಯ ನಿಯಮಗಳನ್ನು ರೂಪಿಸಿದೆ. ಇತ್ತೀಚೆಗೆ ಕೊರೋನಾದಿಂದ ತಂದೆ-ತಾಯಿಯರನ್ನು ಕಳೆದುಕೊಂಡು ಅನಾಥರಾಗಇರುವ ಮಕ್ಕಳನ್ನು ದತ್ತು ತೆಗೆದುಕೊಳ್ಳಿ ಎಂಬ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆದರೆ ಈ ರೀತಿ ನೇರವಾಗಿ ದತ್ತು ನೀಡಿಕೆ/ಪಡೆಯುವಿಕೆಯು ನಿಯಮಗಳಿಗೆ ವಿರುದ್ಧವಾದುದು. ಹೀಗಾಗಿ ಇಂಥದ್ದಕ್ಕೆ ಪ್ರೋತ್ಸಾಹ ನೀಡದೇ ಮಕ್ಕಳನ್ನು ಕಾನೂನುಬದ್ಧವಾಗಿ ಪುನರ್ವಸತಿ ಕೇಂದ್ರಕ್ಕೆ ಸೇರಿಸಬೇಕು ಎಂದು ಸಚಿವಾಲಯ ಸೂಚಿಸಿದೆ.

- ಮಕ್ಕಳು ಅನಾಥರಾಗಿದ್ದು ಗೊತ್ತಾದ ಕೂಡಲೇ ಚೈಲ್ಡ್‌ಲೈನ್‌ ಸಹಾಯವಾಣಿ 1098ಗೆ ಕರೆ ಮಾಡಬೇಕು.

- ಚೈಲ್ಡ್‌ಲೈನ್‌ ಸಹಾಯವಾಣಿಯವರು 24 ತಾಸಿನೊಳಗೆ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಬೇಕು.

- ಅಥವಾ ಸಂಬಂಧಿಸಿದವರೇ, ಮಕ್ಕಳು ತಬ್ಬಲಿಯಾದ 24 ತಾಸಿನೊಳಗೆ ಮಕ್ಕಳ ಕಲ್ಯಾಣ ಸಮಿತಿ ಮುಂದೆ ನೇರವಾಗಿ ಹಾಜರುಪಡಿಸಬಹುದು.

"

- ಸಮಿತಿಯು ಮಕ್ಕಳನ್ನು ಸಾಂಸ್ಥಿಕ ಅಥವಾ ಅಸಾಂಸ್ಥಿಕ ಶಿಶುಪಾಲನಾ ಕೇಂದ್ರಕ್ಕೆ ಕಳಿಸಬೇಕು ಅಥವಾ ಸಂಬಂಧಿಸಿದ ಶಿಶುಪಾಲಕರಿಗೆ ಕಳಿಸಬಹುದು.

- ಶಿಶುಪಾಲನಾ ಕೇಂದ್ರಕ್ಕೆ ದಾಖಲು ಬಳಿಕ ಮಕ್ಕಳ ಯೋಗಕ್ಷೇಮವನ್ನು ಮಕ್ಕಳ ಕಲ್ಯಾಣ ಸಮಿತಿಯು ಕಾಲಕಾಲಕ್ಕೆ ವಿಚಾರಿಸುತ್ತಿರಬೇಕು.

- ಖುದ್ದು ಯೋಗಕ್ಷೇಮ ವಿಚಾರಣೆ ಸಾಧ್ಯವಾಗದಿದ್ದರೆ ವಿಡಿಯೋ ಸಂವಾದದ ಮೂಲಕ ಯೋಗಕ್ಷೇಮ ವಿಚಾರಿಸ ಬೇಕು

- ಕಾನೂನು ಪ್ರಕಾರ ದತ್ತು ಪಡೆಯಲು ಯಾರಾದರೂ ಇಚ್ಛಿಸಿದ್ದಲ್ಲಿ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದ ವೆಬ್‌ಸೈಟ್‌ (cara.nic.in) ಸಂಪರ್ಕಿಸಬಹುದು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios