Asianet Suvarna News Asianet Suvarna News

ಮಾಜಿ IAS ಗೋಪಿನಾಥನ್ ವಶಕ್ಕೆ ಪಡೆದ ಪೊಲೀಸರು

ಮಾಜಿ IAS ಅಧಿಕಾರಿ ಕನ್ನನ್ ಗೋಪಿನಾಥನ್ ವಶ| ಪೌರತ್ವ ವಿರೋಧಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಗೋಪಿನಾಥನ್| 370ನೇ ವಿಧಿ ರದ್ದುಗೊಳಿಸಿದಾಗ ಸೇವೆಯಿಂದ ರಾಜೀನಾಮೆ ಪಡೆದಿದ್ದ ಕನ್ನನ್ ಗೋಪಿನಾಥನ್

Former IAS officer Kannan Gopinathan detained sent back to Delhi
Author
Bangalore, First Published Jan 20, 2020, 12:03 PM IST

ಅಲಹಾಬಾದ್‌[ಜ.20]: ಕೇರಳದ ಮಾಜಿ IAS ಅಧಿಕಾರಿ ಕನ್ನನ್ ಗೋಪಿನಾಥನ್‌ರನ್ನು ಪ್ರಯಾಗ್‌ರಾಜ್ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಈ ಕುರಿತಾಗಿ ಪೊಲೀಸರು ಭಾನುವಾರ ಮಾಹಿತಿ ನೀಡಿದ್ದಾರೆ.

ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ನನಗೆ ಬೇಕು: ರಾಜೀನಾಮೆ ನೀಡಿದ ಮತ್ತೊಬ್ಬ IAS ಅಧಿಕಾರಿ!

ಶನಿವಾರದಂದು ಮಾಜಿ IAS ಅಧಿಕಾರಿ ಕನ್ನನ್ ಗೋಪಿನಾಥನ್, ಅಖಿಲ ಭಾರತೀಯ ಜನವಾದಿ ವೇದಿಕೆ ಆಯೋಜಿಸಿದ್ದ 'ನಾಗರಿಕತೆ ರಕ್ಷಿಸಿ, ಸಂವಿಧಾನ ಉಳಿಸಿ, ಗಣರಾಜ್ಯ ಕಾಪಾಡಿ' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲು ಪ್ರಯಾಗ್‌ರಾಜ್ ಗೆ ಆಗಮಿಸುತ್ತಿದ್ದರು. ಆದರೆ ವಿಮಾನ ನಿಲ್ದಾಣ ತಲುಪಿದ್ದ ಅವರನ್ನು ಪೊಲೀಸರು ತಡೆದಿದ್ದರು. ಈ ಕುರಿತು ಗೋಪಿನಾಥನ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ IAS ಅಧಿಕಾರಿ ಕನ್ನನ್ 'ವಿಮಾನದಿಂದ ಇಳಿದು ನಿರ್ಗಮನ ದ್ವಾರದೆಡೆ ತೆರಳುತ್ತಿದ್ದಂತೆಯೇ, ಸುಮಾರು 10 ಮಂದಿ ಪೊಲೀಸರು ನನ್ನ ಬಳಿ ಬಂದು ಗುರುತು ಪತ್ರ ಮೊದಲಾದ ದಾಖಲೆ ತೋರಿಸುವಂತೆ ಹೇಳಿದರು. ಈ ವೇಳೆ ನಾನು ಹೆಸರನ್ನು ಹೇಳಿದೆ. ಅಷ್ಟರಲ್ಲೇ ಅವರು ನನ್ನನ್ನು VIP ದ್ವಾರದೆಡೆ ಕರೆದೊಯ್ದರು. ಬಳಿಕ ನನ್ನನ್ನು ಅದ್ಯಾವುದೋ ಭದ್ರತಾ ಕೊಠಡಿಗೆ ಕರೆದೊಯ್ದರು' ಎಂದಿದ್ದಾರೆ.

ಗುರುತು ಬಚ್ಚಿಟ್ಟು 8 ದಿನ ಈ ಐಎಎಸ್ ಆಫೀಸರ್ ಮಾಡಿದ್ದೇನು?:

ಅಲ್ಲದೇ 'ಇಲ್ಲಿ ಅಲಹಾಬಾದ್ ನಿಂದ ಹೊರಟ ಬಳಿಕ ಭಾಗವಹಿಸುವ ಕಾರ್ಯಕ್ರಮಗಳ ಕುರಿತು ಪೊಲೀಸರು ವಿಚಾರಣೆ ನಡೆಸಿದರು. ಈ ವೇಳೆ ಶನಿವಾರ ರಾತ್ರಿ ದೆಹಲಿಯಿಂದ ಬೋಕಾರೋಗೆ ತೆರಳಬೇಕಿದೆ ಎಂದು ತಿಳಿಸಿದೆ. ಇದಾದ ಕೆಲವೇ ಕ್ಷಣಗಳಲ್ಲಿ ನನ್ನನ್ನು ವಿಮಾನದ ಮೂಲಕ ದೆಹಲಿಗೆ ಕಳುಹಿಸಿದರು' ಎಂದಿದ್ದಾರೆ. ಹೀಗಾಗಿ ಕನ್ನನ್ ಕಾರ್ಯಕ್ರಮದಲ್ಲಿ ಭಾಗವಹಿಸದೇ ಮರಳಿದ್ದಾರೆ.

ಆರ್ಟಿಕಲ್ 370 ರದ್ದುಗೊಳಿಸಿದ್ದ ವೇಳೆ ಕನ್ನನ್ ಗೋಪಿನಾಥನ್ ತಮ್ಮ ಸೇವೆಗೆ ರಾಜೀನಾಮೆ ನೀಡಿ ಭಾರೀ ಸದ್ದು ಮಾಡಿದ್ದರು. ಅಂದು ಅವರು ಸರ್ಕಾರ 370ನೇ ವಿಧಿ ರದ್ದುಗೊಳಿಸಿ ಕಾಶ್ಮೀರಿಗರ ಮೂಲ ಹಕ್ಕುಗಳನ್ನು ಕಸಿದುಕೊಂಡಿದೆ' ಎಂದು ಕಿಡಿ ಕಾರಿದ್ದರು.

Follow Us:
Download App:
  • android
  • ios