Asianet Suvarna News Asianet Suvarna News

ಆಂಧ್ರ, ಒಡಿಶಾಕ್ಕೆ ಅಪ್ಪಳಿಸಿದ ಗುಲಾಬ್‌: ಕಟ್ಟೆ​ಚ್ಚ​ರ!

* ಪ್ರತೀ ಗಂಟೆಗೆ 100 ಕಿ. ಮೀ ವೇಗದಲ್ಲಿ ಅಪ್ಪಳಿಸಿದ ಮಾರುತ

* ಎರಡೂ ರಾಜ್ಯಗಳಲ್ಲಿ ರಕ್ಷಣಾ ಕಾರಾರ‍ಯಚರಣೆಗೆ ಭಾರೀ ಸಿದ್ಧತೆ

* ಆಂಧ್ರ, ಒಡಿಶಾಕ್ಕೆ ಅಪ್ಪಳಿಸಿದ ಗುಲಾಬ್‌: ಕಟ್ಟೆ​ಚ್ಚ​ರ

Cyclone Gulab weakens into deep depression over north Andhra Pradesh pod
Author
Bangalore, First Published Sep 27, 2021, 8:33 AM IST

ನವದೆಹಲಿ/ಭುವನೇಶ್ವರ(ಸೆ.27): ಆಂಧ್ರಪ್ರದೇಶ(Andhra Pradesh) ಉತ್ತರ ಭಾಗ ಹಾಗೂ ಒಡಿಶಾದ ವಿವಿಧ ಭಾಗಗಳಲ್ಲಿ ಭಾನುವಾರ ಸಂಜೆ ಗುಲಾಬ್‌ ಚಂಡಮಾರುತ(Gulab Cyclone) ಅಪ್ಪಳಿಸಿದೆ. ಇದಕ್ಕೆ ಮುಂಚಿತವಾಗಿಯೇ ಉಭಯ ರಾಜ್ಯಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸಂಜೆ 6 ಗಂಟೆಗೆ ಅಪ್ಪ​ಳಿ​ಸುವಿಕೆ ಆರಂಭ​ವಾ​ಗಿದ್ದು, ನಂತ​ರ​ದ 3 ಗಂಟೆಗಳಲ್ಲಿ ಆಂಧ್ರಪ್ರದೇಶದ ಕಾಳಿಂಗಪಟ್ಟಣಂ ಮತ್ತು ಒಡಿಶಾದ ಗೋಪಾಲ್‌ಪುರ ಮಧ್ಯೆ ಚಂಡ​ಮಾ​ರುತ(Cyclone) ಹಾದುಹೋಗಿದೆ. ಈ ವೇಳೆ ಚಂಡಮಾರುತದ ವೇಗ ಪ್ರತೀ ಗಂಟೆಗೆ 100 ಕಿ.ಮೀ.ನಷ್ಟಿತ್ತು.

ಇದರ ಪರಿಣಾಮ ಒಡಿಶಾದ ದಕ್ಷಿಣ ಮತ್ತು ಕರಾವಳಿ ತೀರದ 11 ಜಿಲ್ಲೆಗಳಲ್ಲಿ ಹಾಗೂ ಆಂಧ್ರ​ಪ್ರ​ದೇ​ಶ​ದಲ್ಲಿ ಭಾರೀ ಪ್ರಮಾಣದ ಮಳೆಯಾಗಿದೆ. ಸಂಭಾವ್ಯ ಅನಾ​ಹುತ ತಡೆಗೆ ಜನರ ರಕ್ಷಣೆಗಾಗಿ ಒಡಿಶಾ ವಿಪತ್ತು ನಿರ್ವಹಣಾ ಪಡೆಯ 42 ತಂಡಗಳು, ಎನ್‌ಡಿಆರ್‌ಎಫ್‌ನ 24 ತುಕಡಿಗಳು, 102 ಅಗ್ನಿಶಾಮಕ ಸಿಬ್ಬಂದಿಯನ್ನು ಅತಿಹೆಚ್ಚು ಹಾನಿಗೊಳಗಾಗಲಿರುವ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.

ಒಡಿ​ಶಾ​ದಲ್ಲಿ ಅಪಾ​ಯ​ದ​ಲ್ಲಿದ್ದ 4 ಸಾವಿರ ಮಂದಿ​ಯನ್ನು ಸುರ​ಕ್ಷಿತ ಸ್ಥಳ​ಗ​ಳಿಗೆ ಸ್ಥಳಾಂತ​ರಿ​ಸ​ಲಾ​ಗಿ​ದೆ. ಆಂಧ್ರ​ದಲ್ಲಿ 86 ಸಾವಿರ ಕುಟುಂಬ​ಗಳ ಸ್ಥಳಾಂತ​ರಕ್ಕೆ ಸಿದ್ಧತೆ ಪೂರ್ಣ​ಗೊಂಡಿ​ದೆ.

6 ಮೀನು​ಗಾ​ರರು ಬಲಿ?:

ಗುಲಾಬ್‌ ಚಂಡಮಾರುತ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸುವ ಕೆಲವೇ ಕ್ಷಣಗಳ ಮುಂಚಿತವಾಗಿ ಶ್ರೀಕಾಕುಳಂ ಜಿಲ್ಲೆಯ 6 ಮಂದಿ ಮೀನುಗಾರರು ಬಂಗಾಳಕೊಲ್ಲಿಯಲ್ಲಿ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರೆಲ್ಲರೂ ಗುಲಾಬ್‌ಗೆ ಸಿಲುಕಿರಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಶೂನ್ಯ ಸಾವಿನ ಗುರಿ: ಒಡಿಶಾ ಸಿಎಂ

ಗುಲಾಬ್‌ ಅಪ್ಪಳಿಸುವ ಮುನ್ನ ಮಾತನಾಡಿದ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ‘ನಾವು ಸಾವು-ನೋವಿನ ಗುರಿ ಹೊಂದಿದ್ದೇವೆ. ಗುಲಾಬ್‌ ಪ್ರಭಾವಕ್ಕೆ ಸಿಲುಕಿರುವ 7 ಜಿಲ್ಲೆಗಳಲ್ಲಿ ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯಾವುದೇ ಸಣ್ಣ-ಪುಟ್ಟಅನಾಹುತವಾಗದಂತೆ ತಡೆಯುವುದು ನಮ್ಮ ಗುರಿ. ಈ ಹಿನ್ನೆಲೆಯಲ್ಲಿ ಜನರು ತಮ್ಮ ಮನೆಗಳಲ್ಲೇ ಸುರಕ್ಷಿತವಾಗಿ ಇರ​ಬೇ​ಕು’ ಎಂದು ತಿಳಿಸಿದ್ದಾರೆ.

ಸಕಲ ಸಹಾ​ಯ: ಮೋದಿ ಘೋಷ​ಣೆ

ಗುಲಾಬ್‌ ಚಂಡಮಾರುತಕ್ಕೆ ಸಿಲುಕಿದ ಆಂಧ್ರಪ್ರದೇಶ ಮತ್ತು ಒಡಿಶಾ ಮುಖ್ಯಮಂತ್ರಿಗಳಾದ ಜಗನ್‌ ಮೋಹನ್‌ ರೆಡ್ಡಿ ಮತ್ತು ನವೀನ್‌ ಪಟ್ನಾಯಕ್‌ ಅವರ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದರು. ಈ ವೇಳೆ ಚಂಡಮಾರುತ ಎದುರಿಸಲು ಕೈಗೊಂಡ ಕ್ರಮಗಳ ಬಗ್ಗೆ ಎರಡೂ ರಾಜ್ಯಗಳಿಂದಲೂ ಮಾಹಿತಿ ಪಡೆದರು. ಅಲ್ಲದೆ ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುತ್ತದೆ. ಚಂಡಮಾರುತದ ಹೊರತಾಗಿಯೂ, ಎಲ್ಲರೂ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದ​ರು.

Follow Us:
Download App:
  • android
  • ios