ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಟೀಕೆ ಮಾಡಿದ ಪ್ರಕರಣ ಛತ್ತೀಸಗಢದ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌ ಅವರ ತಂದೆ ನಂದಕುಮಾರ್‌ ಬಾಘೇಲ್‌ ಬಂಧನ

ರಾಯ್‌ಪುರ್‌ (ಸೆ.08): ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಟೀಕೆ ಮಾಡಿದ ಪ್ರಕರಣದಲ್ಲಿ ಛತ್ತೀಸಗಢದ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌ ಅವರ ತಂದೆ ನಂದಕುಮಾರ್‌ ಬಾಘೇಲ್‌ ಅವರನ್ನು ರಾಯ್‌ಪುರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಳಿಕ ಅವರನ್ನು ಕೋರ್ಟ್‌ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಂದಕುಮಾರ್‌ ಬ್ರಾಹ್ಮಣರನ್ನು ಕುರಿತು ‘ಅವರು ಹೊರಗಿನಿಂದ ಬಂದವರು ಅವರು ಶುದ್ಧೀಕರಣಗೊಳ್ಳಬೇಕು’ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ‘ನಂದಕುಮಾರ್‌ ಅವರು ಸಮಾಜದಲ್ಲಿ ದ್ವೇಷ ಹರಡುತ್ತಿದ್ದಾರೆ’ ಎಂದು ಆರೋಪಿಸಿ ಛತ್ತೀಸ್‌ಗಢ ಬ್ರಾಹ್ಮಣ ಸಮಿತಿ ಡಿಡಿ ನಗರದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ರಾಯ್‌ಪುರ ಪೊಲೀಸರು ದೆಹಲಿಯಲ್ಲಿ ಅವರನ್ನು ಬಂಧಿಸಿದರು.

ಹೆಂಡತಿ ಭಾಷಣ ಕೇಳಲಾರದೆ ಪೊಲೀಸ್ ಚೌಕಿಗೆ ಬೆಂಕಿ ಇಟ್ಟು ಬೇಕಂತಲೇ ಅರೆಸ್ಟ್ ಆದ!

ತಂದೆಯ ಬಂಧನಕ್ಕೆ ಪ್ರತಿಕ್ರಿಯಿಸಿರುವ ಭೂಪೇಶ್‌ ಬಾಘೇಲ್‌ ‘ಮಗನಾಗಿ ಅವರ ಬಗ್ಗೆ ಗೌರವವಿದೆ ಆದರೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಸಮಾಜದಲ್ಲಿ ಅಶಾಂತಿ ಮೂಡಿಸುವವರನ್ನು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.