Asianet Suvarna News Asianet Suvarna News

ಕಲಾಪ ದೃಶ್ಯ ಚಿತ್ರೀಕರಣ ಮಾಡಿದ ರಾಜ್ಯಸಭಾ ಸಂಸದರಿಗೆ ನಾಯ್ಡು ಎಚ್ಚರಿಕೆ!

ರಾಜ್ಯಸಭೆಯ ಕಲಾಪವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು| ಕಲಾಪ ದೃಶ್ಯ ಚಿತ್ರೀಕರಣ ಮಾಡಿದ ರಾಜ್ಯಸಭಾ ಸಂಸದರಿಗೆ ನಾಯ್ಡು ಎಚ್ಚರಿಕೆ!

Breach Of Privilege Rajya Sabha Members Warned Against Phone Recording pod
Author
Bangalore, First Published Feb 4, 2021, 9:12 AM IST

ನವದೆಹಲಿ(ಫ.04): ರಾಜ್ಯಸಭೆಯ ಕಲಾಪವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು. ಅದು ಸಂಸದೀಯ ನಿಯಮಾವಳಿಗಳ ಉಲ್ಲಂಘನೆಯಾಗಲಿದೆ ಎಂದು ರಾಜ್ಯಸಭಾ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಬುಧವಾರ ಸಂಸದರಿಗೆ ಎಚ್ಚರಿಸಿದರು.

ಮಂಗಳವಾರ ಕೃಷಿ ಕಾಯ್ದೆ ಕುರಿತ ಚರ್ಚೆಯನ್ನು ವಿಪಕ್ಷಗಳ ಕೆಲವು ಸಂಸದರು ಮೊಬೈಲ್‌ನಲ್ಲಿ ಸೆರೆಹಿಡಿದು ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಕೆಲವು ವಾಹಿನಿಗಳೂ ಅದನ್ನು ಪ್ರಸಾರ ಮಾಡಿದ್ದವು. ಈ ಬಗ್ಗೆ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿರುವ ನಾಯ್ಡು ಅವರು, ‘ರಾಜ್ಯಸಭೆಯಲ್ಲಿ ಮೊಬೈಲ್‌ ಫೋನ್‌ಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆದರೆ ಕೆಲವು ಸಂಸದರು ಕಲಾಪವನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡುತ್ತಿರುವುದು ಕಂಡುಬಂದಿದೆ.

ಸಂಸದರಿಂದ ಅಂಥ ವರ್ತನೆಯನ್ನು ನಿರೀಕ್ಷಿಸಲ್ಲ. ಅದು ಸಂಸದೀಯ ನಿಯಮಾವಳಿಗಳ ಉಲ್ಲಂಘನೆಯಾಗಲಿದೆ’ ಎಂದು ಎಚ್ಚರಿಸಿದರು.

Follow Us:
Download App:
  • android
  • ios