ಹೆದರಬೇಡ, ನಾವಿದ್ದೇವೆ: ಸೋಂಕಿತ ಪಿಜ್ಜಾ ಬಾಯ್‌ಗೆ ಗ್ರಾಹಕರಿಂದಲೇ ಧೈರ್ಯ| ಹೆಚ್ಚಿನವರು ಫೋನಿನಲ್ಲಿ ನನ್ನನ್ನು ಸಂಪರ್ಕಿಸಿದ್ದಾರೆ ಎಂದ ಡೆಲಿವರಿ ಬಾಯ್

ನವದೆಹಲಿ(ಏ.೨೩): ಕೊರೋನಾ ಸೋಂಕು ತಟ್ಟಿದ್ದ ರಾಜಧಾನಿಯ ಪಿಜ್ಜಾ ಡೆಲಿವರಿ ಬಾಯ್‌ಗೆ, ಗ್ರಾಹಕರೇ ಧೈರ್ಯ ತುಂಬಿದ್ದಾರೆ. ಆ ವ್ಯಕ್ತಿಯನ್ನು ಸಂಪರ್ಕಿಸಿದ 15ಕ್ಕೂ ಹೆಚ್ಚು ಮಂದಿ ಗ್ರಾಹಕರು ಧೃತಿಗೆಡಬೇಡ ಎಂದು ಧೈರ್ಯ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಲ್‌ನಲ್ಲಿದ್ದ ನಂಬರ್‌ ಮೂಲಕ ಗ್ರಾಹಕರು ಆತನಿಗೆ ಕರೆ ಮಾಡಿ, ಸಹಾಯ ಬೇಕಿದ್ದರೆ ಸಂಪರ್ಕಿಸುವಂತೆ ವಿಶ್ವಾಸ ತುಂಬಿದ್ದಾರೆ.

ಬಾಯಿ ಚಪಲ: ಪಿಜ್ಜಾ ತರಿಸಿದ 72 ಕುಟುಂಬಕ್ಕೆ ಕ್ವಾರಂಟೈನ್!

ಈ ಬಗ್ಗೆ ಪ್ರತಿಕ್ರಿಯಿಸಿರುವ ಸೋಂಕಿತ, ಹೆಚ್ಚಿನವರು ಫೋನಿನಲ್ಲಿ ನನ್ನನ್ನು ಸಂಪರ್ಕಿಸಿದ್ದಾರೆ. ಸಹಾಯ ಬೇಕಿದ್ದರೆ ಯಾವುದೇ ಮುಜುಗರವಿಲ್ಲದೇ ಕೇಳು ಎಂದು ಧೈರ್ಯ ತುಂಬಿದ್ದರು ಎಂದು ಹೇಳಿದ್ದಾನೆ.

ತನಗೆ ಕೊರೋನಾ ಸೋಂಕು ತಟ್ಟಿರುವುದು ತಿಳಿಯದೇ ಹಲವು ಕುಟುಂಬಳಿಗೆ ಈತ ಪಿಜ್ಜಾ ಡೆಲಿವರಿ ಮಾಡಿದ್ದ.