Asianet Suvarna News Asianet Suvarna News

ಗದರ್ 2 ಸಿನಿಮಾ ನೋಡಿ ಹಿಂದೂಸ್ತಾನ್ ಜಿಂದಾಬಾಂದ್ ಘೋಷಣೆ ಕೂಗಿದ ಯುವಕನ ಹತ್ಯೆ

ಗದರ್ 2 ಸಿನಿಮಾ ನೋಡಿ ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ 30 ವರ್ಷದ ಸ್ನೇಹಿತನನ್ನು ಆತನ ಗೆಳೆಯರೇ ಬರ್ಬರವಾಗಿ ಹತ್ಯೆ ಮಾಡಿದ ಭೀಕರ ಘಟನೆ ಛತ್ತೀಸ್‌ಗಢದ ಬಿಲಾಯ್ ಜಿಲ್ಲೆಯಲ್ಲಿ ನಡೆದಿದೆ.

A young man was killed in Chhattisgarh for shouting Hindustan Zindaband after watching the movie Ghadar 2 akb
Author
First Published Sep 17, 2023, 8:23 PM IST | Last Updated Sep 17, 2023, 8:23 PM IST

ರಾಯ್‌ಪುರ: ಗದರ್ 2 ಸಿನಿಮಾ ನೋಡಿ ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ 30 ವರ್ಷದ ಸ್ನೇಹಿತನನ್ನು ಆತನ ಗೆಳೆಯರೇ ಬರ್ಬರವಾಗಿ ಹತ್ಯೆ ಮಾಡಿದ ಭೀಕರ ಘಟನೆ ಛತ್ತೀಸ್‌ಗಢದ ಬಿಲಾಯ್ ಜಿಲ್ಲೆಯಲ್ಲಿ ನಡೆದಿದೆ. 30 ವರ್ಷದ ಮಲ್ಕಿತ್ ಸಿಂಗ್ ಅಲಿಯಾಸ್ ವೀರು (Malkit Singh alias Veeru) ಹತ್ಯೆಯಾದ ಯುವಕ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. 

ಬಂಧಿತರನ್ನು ತಸವೂರ್‌, ಫೈಜಲ್, ಶುಭಂ ಲಹರೆ, ತರುಣ್ ನಿಶದ್ ಎಂದು ಗುರುತಿಸಲಾಗಿದೆ. ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ಮತ್ತೋರ್ವ ಆರೋಪಿ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಪ್ಟೆಂಬರ್ 15 ರಂದು ಗದರ್ ಸಿನಿಮಾ ನೋಡಿ ಬಂದ ನಂತರ ಈ ಘಟನೆ ನಡೆದಿದೆ. ಯುವಕನ್ನು ಸ್ನೇಹಿತರೇ ಮಾರಣಾಂತಿಕವಾಗಿ ಥಳಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದಾನೆ. ಮೃತ ಮಲ್ಕಿತ್ ಸಿಂಗ್ ಅವರ ತಂದೆ ಖುರ್ಸಿಪರ್‌ ಗುರುದ್ವಾರದ ಮುಖ್ಯಸ್ಥರಾಗಿದ್ದರು. 

ಸಂತ್ರಸ್ತೆಯ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಮತ್ತು ಸಿಖ್ ಸಮುದಾಯದ ಸದಸ್ಯರು ಘಟನೆ ಖಂಡಿಸಿ ರಾಷ್ಟ್ರೀಯ ಹೆದ್ದಾರಿ (National Highway) ತಡೆದು ಪ್ರತಿಭಟನೆ ನಡೆಸಿದ್ದಾರೆ. ಘಟನೆ ತಿಳಿದ ಕೂಡಲೇ ಖುರ್ಸಿಪರ್ ಪೊಲೀಸ್ ಠಾಣೆಗೆ ತಲುಪಿದ ಸಂಬಂಧಿಕರು ಹಾಗೂ ಸಿಖ್ ಸಮುದಾಯದ ಜನ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಮೃತ ಮಲ್ಕಿತ್ ಪತ್ನಿಗೆ ಉದ್ಯೋಗ ನೀಡಬೇಕು ಹಾಗೂ ಕುಟುಂಬದವರಿಗೆ  50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

ಮೊಬೈಲ್ ಫೋನ್‌ನಲ್ಲಿ ಗದರ್ 2 (Gadar 2) ಸಿನಿಮಾ ವೀಕ್ಷಿಸಿದ ನಂತರ ಮಲ್ಕಿತ್ ಸಿಂಗ್ ಹಿಂದೂಸ್ತಾನ್ ಜಿಂದಾಬಾದ್ (Hindustan Zindabad) ಎಂದು ಘೋಷಣೆ ಕೂಗಿದ್ದಾನೆ. ಈ ವೇಳೆ ಆತನ ಸ್ನೇಹಿತರು ಮಲ್ಕಿತ್ ಸಿಂಗ್, ತಮ್ಮನ್ನು ಅಣಕಿಸಲು ಈ ರೀತಿ ಘೋಷಣೆ ಕೂಗಿದ್ದಾನೆ ಎಂದು ಭಾವಿಸಿ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.  ಥಳಿತದಿಂದ ಗಂಭೀರ ಗಾಯಗೊಂಡಿದ್ದ ಆತನನ್ನುಮೊದಲಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿನ ವೈದ್ಯರು ರಾಯ್‌ಪುರದ ರಾಮಕೃಷ್ಣ ಕೇರ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ. ಆದರೂ ಮಲ್ಕಿತ್‌ನನ್ನು ಬದುಕಿಸಿಕೊಳ್ಳಲಾಗಲಿಲ್ಲ,  ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಮತ್ತೋರ್ವನಿಗಾಗಿ ಬಲೆ ಬೀಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ರುಚಿ ನೋಡೋ ನೆಪದಲ್ಲಿ ಅರೆಬೆಂದ ಆಹಾರ ತಿನ್ನುವ ಮುನ್ನ ಜೋಪಾನ: ದೇಹದ ಸ್ವಾಧೀನವನ್ನೇ ಕಳೆದುಕೊಂಡ ಮಹಿಳೆ

Latest Videos
Follow Us:
Download App:
  • android
  • ios