ಏಸು ಶಿಲುಬೆಗೇರಿದ ನಾಡಲ್ಲಿ ಕೊರೋನಾ, ಐತಿಹಾಸಿಕ ಚರ್ಚ್ ಬಾಗಿಲು ಮುಚ್ಚಿದ ಮುಸಲ್ಮಾನ ಕುಟುಂಬ!
ಏಸು ಕ್ರಿಸ್ತನನ್ನು ಶಿಲುಬೆಗೇರಿಸಿದ ನಾಡು ಜೆರುಸಲೇಂನಲ್ಲೂ ಕೊರೋನಾ ಹಾವಳಿ ಆರಂಭವಾಗಿದ್ದು, ಶತಮಾನಗಳ ಬಳಿಕ ಪಾದ್ರಿಗಳು ಜೆರುಸಲೇಂನ ಐತಿಹಾಸಿಕ ಚರ್ಚ್ ಬಾಗಿಲು ಮುಚ್ಚಿದ್ದಾರೆ. 1349ರ ಬಳಿಕ ಇದೇ ಮೊದಲ ಬಾರಿ ಚರ್ಚ್ ಬಾಗಿಲು ಮುಚ್ಚಲಾಗಿದ್ದು, ಪ್ಲೇಗ್ ಮಹಾಮಾರಿ ಎಂಟ್ರಿ ಕೊಟ್ಟಿದ್ದ ಸಂದರ್ಭದಲ್ಲಿ ಈ ಚರ್ಚ್ ಬಂದ್ ಮಾಡಲಾಗಿತ್ತು. ಬಳಿಕ ಇತಿಹಾಸದಲ್ಲೇ ಎರಡನೇ ಬಾರಿ ಜೆರುಸಲೇಂನ ಚರ್ಚ್ಗೆ ಬೀಗ ಬಿದ್ದಿದೆ. ಆದರೆ ಈ ಚರ್ಚ್ಗೆ ಬೀಗ ಹಾಕಿದ್ದು ಮಾತ್ರ ಮುಸಲ್ಮಾನ ಕುಟುಂಬ. ಏನಿದರ ಹಿಂದಿನ ರಹಸ್ಯ? ಇಲ್ಲಿದೆ ವಿವರ
ಜೆರುಸಲೇಂನ ಐತಿಹಾಸಿಕ ಚರ್ಚ್ನ ಬೀಗದ ಕೀ ಇದೀಗ ಮುಸ್ಲಿಮರ ಬಳಿ ಇದೆ. ಕಳೆದ 7ನೇ ಶತಮಾನದಿಂದಲೂ ಮುಸ್ಲಿಮರೇ ಈ ಚರ್ಚ್ನ ಭದ್ರತೆಯ ಹೊಣೆ ಹೊತ್ತಿದ್ದಾರೆ.
ಒಟ್ಟೋಮಾನ್ ತುರುಷ್ಕರ ಕಾಲದಲ್ಲಿ ಆದ ವ್ಯವಸ್ಥೆ ಇದು. ಅಂದಿನಿಂದ ಇಂದಿನವರೆಗೂ ಮುಸ್ಲಿಂ ಕುಟುಂಬವೇ ಚರ್ಚ್ನ ಭದ್ರತೆಯ ಹೊಣೆ ಹೊತ್ತಿದೆ. ಸುನ್ನಿ ಮುಸ್ಲಿಂ ಕುಟುಂಬ ಶತಮಾನಗಳಿಂದಲೂ ಚರ್ಚ್ನ ಭದ್ರತೆ ಕಾರ್ಯ ನೋಡಿಕೊಳ್ಳುತ್ತಿದೆ.
1187ರಿಂದಲೂ ಮುಸ್ಲಿಮರ ಕುಟುಂಬಕ್ಕೆ ಚರ್ಚ್ನ ರಕ್ಷಣೆಯ ಹೊಣೆ ನೀಡಲಾಗಿದ್ದು, ಅವರು ತಲೆತಲಾಂತರಗಳಿಂದ ಈ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿಕೊಂಡು ಬರ್ತಿದ್ಧಾರೆ.
ಶತಮಾನಗಳಿಂದಲೂ ಕ್ರೈಸ್ತರ ಪುಣ್ಯಕ್ಷೇತ್ರವನ್ನು ಮುಸ್ಲಿಮರು ಕಾಯುತ್ತಿದ್ಧಾರೆ. ಆದ್ರೆ, ಅವರು ಚರ್ಚ್ ಒಳಗೆ ಮಾತ್ರ ಹೋಗುವುದಿಲ್ಲ.
ಬಹಳ ಹಿಂದೆ ಓಮರ್ ಬಿನ್ ಅಲ್ಖತಾಬ್ ಎಂಬ ಮುಸ್ಲಿಂ ವ್ಯಕ್ತಿ ಜೇರುಸಲೇಂ ಪಾದ್ರಿಗಳು ಚರ್ಚ್ ಒಳಗೆ ಬರುವಂತೆ ಆಹ್ವಾನಿಸಿದ್ದರಂತೆ. ಆದರೆ, ಆತ ಅವರ ಆಹ್ವಾನವನ್ನು ನಿರಾಕರಿಸಿದ. ಏಕೆಂದರೆ, ನನ್ನ ನಂತರವೂ ಮುಸ್ಲಿಮರು ಚರ್ಚ್ ಒಳಗೆ ಪ್ರವೇಶಿಸುವಂತಾದರೆ ಅವರು ಆ ಚರ್ಚನ್ನು ಮಸೀದಿಯನ್ನಾಗಿ ಪರಿವರ್ತಿಸುತ್ತಾರೆ. ಅದು ನನಗೆ ಇಷ್ಟವಿಲ್ಲ ಎಂದಿದ್ದನಂತೆ. ಹೀಗಾಗಿ, ಮುಸ್ಲಿಂ ಗೇಟ್ ಕೀಪಿಂಗ್ ಮಾಡುತ್ತಿರುವವರು ತಮ್ಮ ಓಡಾಟವನ್ನು ಗೇಟ್ ಬಳಿಗೆ ಸೀಮಿತ ಮಾಡಿಕೊಂಡಿದ್ದಾರೆ.
ಇಷ್ಟೇ ಅಲ್ಲ ಜೆರುಸಲೇಂ, ಬೆತ್ಲಹೇಂ, ಜೆರಿಕೋ, ನಜರೆತ್ ಸೇರಿದಂತೆ 8ಕ್ಕೂ ಹೆಚ್ಚು ಐತಿಹಾಸಿಕ ಚರ್ಚ್ಗಳಲ್ಲಿ ಮುಸ್ಲಿಂ ಕುಟುಂಬಗಳೇ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರೋದು ಮುಸ್ಲಿಮರೇ..!
ಇಂದಿಗೂ ಕೂಡಾ ಮುಸ್ಲಿಂ ಹಾಗೂ ಕ್ರೈಸ್ತನ ನಡುವಣ ಕಲಹ ನಡೆದುಕೊಂಡೇ ಬಂದಿದೆ. ಒಟ್ಟೋಮಾನ್ ತುರುಷ್ಕರ ಕಾಲದಲ್ಲಂತೂ ಈ ಕಲಹ ತಾರಕಕ್ಕೇರಿತ್ತು. ಆದ್ರೆ, ಏಸು ಕ್ರಿಸ್ತನ ಮಹಾ ಬಲಿದಾನವಾದ ಭೂಮಿಯಲ್ಲಿ ಸೌಹಾರ್ದತೆ, ಸಹಬಾಳ್ವೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಸಣ್ಣದೊಂದು ಹೊಂದಾಣಿಕೆ ಮಾಡಿಕೊಳ್ಳಲಾಯ್ತು.
ಚರ್ಚ್ನ ಪಾದ್ರಿಗಳು ಹೊರಗೆ ಹೋದ ನಂತರ, ಚರ್ಚ್ನ ಮುಖ್ಯ ದ್ವಾರಕ್ಕೆ ಬೀಗ ಹಾಕಿ ಅದನ್ನು ತಮ್ಮ ಬಳಿ ಇಟ್ಟುಕೊಳ್ಳುವ ಜವಾಬ್ದಾರಿ ಮಾತ್ರ ಮುಸ್ಲಿಮರದ್ದು
ಆದರೀಗ ಪಾದ್ರಿಗಳು ಜೆರುಸಲೇಂನ ಐತಿಹಾಸಿಕ ಚರ್ಚ್ ಬಾಗಿಲು ಮುಚ್ಚಿದ್ದಾರೆ.
ಐತಿಹಾಸಿಕ ಚರ್ಚ್ ಹೊರ ಭಾಗದಲ್ಲಿ ಕೊರೋನಾ ನಿಯಂತ್ರಿಸಲು ನಡೆಯುತ್ತಿರುವ ಸ್ವಚ್ಛತಾ ಕಾರ್ಯ.