MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Udupi
  • ಉಡುಪಿಯಲ್ಲಿ ಕೊರಗಜ್ಜನ ಪವಾಡ: ಸತ್ಯವಾಯ್ತು ದೈವದ ಕಾರ್ಣಿಕ ನುಡಿ, ಕಳ್ಳ ಸಿಕ್ಕಿಬಿದ್ದ!

ಉಡುಪಿಯಲ್ಲಿ ಕೊರಗಜ್ಜನ ಪವಾಡ: ಸತ್ಯವಾಯ್ತು ದೈವದ ಕಾರ್ಣಿಕ ನುಡಿ, ಕಳ್ಳ ಸಿಕ್ಕಿಬಿದ್ದ!

ಉಡುಪಿ ಜಿಲ್ಲೆಯ ಮುದ್ರಾಡಿಯ ಆದಿಶಕ್ತಿ ದೇಗುಲದಲ್ಲಿ ಕಳ್ಳತನವಾಗಿತ್ತು. ಕೊರಗಜ್ಜನ ದೈವವಾಣಿಯಂತೆ ಕಳ್ಳ ಮತ್ತೆ ಬಂದು ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.

1 Min read
Gowthami K
Published : Jun 08 2025, 04:23 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Asianet News

ತುಳುನಾಡಿನ ಕಾರಣಿಕ ದೈವವೆಂದೇ ಜನಜನಿತವಾಗಿರುವ ಕೊರಗಜ್ಜನ ಪವಾಡಗಳು ಕೇಳಿ ಬರುತ್ತಲೇ ಇರುತ್ತದೆ. ಈಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಮುದ್ರಾಡಿಯ ಆದಿಶಕ್ತಿ ದೇಗುಲದಲ್ಲಿ ದೈವದ ಮತ್ತೊಂದು ಅದ್ಭುತ ಪವಾಡ ನಡೆದಿದೆ. ಹುಂಡಿ ಕದ್ದ ಕಳ್ಳನೇ ಮತ್ತೊಮ್ಮೆ ಬಂದು  ಸಿಕ್ಕಿ ಬಿದ್ದಿದ್ದಾನೆ. ಮುದ್ರಾಡಿಯಲ್ಲಿ ಆದಿಶಕ್ತಿ ದೇಗುಲದ ಕಲ್ಲುರ್ಟಿ , ಕೊರಗಜ್ಜ ಸನ್ನಿದಾನವಿದೆ

25
Image Credit : Asianet News

ಮೇ 25ರಂದು, ಮುದ್ರಾಡಿ ದೇಗುಲದ ಕಲ್ಲುರ್ಟಿ ಮತ್ತು ಕೊರಗಜ್ಜ ದೈವಗಳ ಸನ್ನಿಧಾನದಲ್ಲಿದ್ದ ಹುಂಡಿಯನ್ನು ಕಳ್ಳನು ಕದಿಯುತ್ತಾನೆ. ಈ ಘಟನೆ ಭಕ್ತರಲ್ಲಿ ಬೇಸರ ಉಂಟುಮಾಡಿದರೂ, ದೈವದ ವಿಶ್ವಾಸದಿಂದ ಧರ್ಮದರ್ಶಿ ಸುಕುಮಾರ್ ಮೋಹನ್ ಅವರು ದೈವದ ಮೊರೆ ಹೋದರು.

Related Articles

Related image1
ರಕ್ಷಿತಾ, ಕತ್ರಿನಾ ಬಳಿಕ ತುಳುನಾಡಿನ ಕಾರ್ಣಿಕ ತಾಣ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ನಟ ಶಿವರಾಜ್ ಕುಮಾರ್ ಭೇಟಿ
Related image2
ಹೆಣ್ಣಿನಿಂದಲೇ ಸಂಕಷ್ಟ: 3 ವರ್ಷ ಸೂಕ್ಷ್ಮವಾಗಿ ಇರುವಂತೆ ವಿನಯ್‌ ಕುಲಕರ್ಣಿಗೆ ಕೊರಗಜ್ಜ ದೈವದ ಸೂಚನೆ..!
35
Image Credit : Asianet News

“ಹತ್ತು ದಿನಗಳಲ್ಲಿ ಕಳ್ಳ ಪತ್ತೆಯಾಗುತ್ತಾನೆ, ಮತ್ತೆ ಬಂದು ಸಿಕ್ಕಿಬೀಳುತ್ತಾನೆ” ಎಂದು ಕೊರಗಜ್ಜ ದೈವದ ಆಶ್ವಾಸನೆ ನೀಡಿತು. ಇದು ಭಕ್ತರಲ್ಲಿ ಹೊಸದೊಂದು ವಿಶ್ವಾಸವನ್ನು ಹುಟ್ಟಿಸಿತು. ಆ ದೈವವಾಣಿ ನಿಜವಾಯಿತು! ಕೇವಲ ಮೂರೇ ದಿನಗಳಲ್ಲಿ, ಕಳ್ಳ ಮತ್ತೊಮ್ಮೆ ತಾನೇ ಬಂದಿದ್ದಾನೆ! ಇದೇ ದೇಗುಲಕ್ಕೆ ಎರಡನೇ ಬಾರಿಗೆ ಕದಿಯಲು ಯತ್ನಿಸುತ್ತಿದ್ದ ವೇಳೆ ಭಕ್ತರಿಗೂ ಅನುಮಾನ ಬಂದು, ಆತನನ್ನು ಹಿಡಿಯಲು ಮುಂದಾಗಿದ್ದಾರೆ

45
Image Credit : Asianet News

ಆದರೂ ತಪ್ಪಿಸಿಕೊಂಡು ಓಡಿದ ಆತನನ್ನು ಕೊನೆಗೂ ಆಗುಂಬೆ ಚೆಕ್ ಪೋಸ್ಟ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನಾಗಿರುವ ವ್ಯಕ್ತಿ ದಾವಣಗೆರೆ ಮೂಲದ ಸಲ್ಮಾನ್ ಎಂದು ಗುರುತಿಸಲಾಗಿದೆ. ಈ ಘಟನೆ ದೈವದ ಶಕ್ತಿ, ಭಕ್ತರ ನಂಬಿಕೆ ಮತ್ತು ಸತ್ಯದ ಜಯವನ್ನೇ ಪ್ರತಿಬಿಂಬಿಸಿದೆ. ಕೊರಗಜ್ಜ ದೈವ ನೀಡಿದ ಆಶ್ವಾಸನೆ ನಿಜವಾಗಿರುವುದನ್ನು ನೋಡಿ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.

55
Image Credit : Asianet News

ಕೊನೆಗೂ ಸತ್ಯಕ್ಕೆ ಜಯವಾಗಿದೆ. ದೈವದ ಮಾತು, ನುಡಿ, ಕಳೆ ವ್ಯರ್ಥವಾಗುವುದಿಲ್ಲ ಎಂಬುದನ್ನು ಈ ಪವಾಡ ಇನ್ನೊಮ್ಮೆ ಸಾಬೀತು ಮಾಡಿದೆ. 

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಉಡುಪಿ
ದೇವಸ್ಥಾನ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved