ಸಿಎಂ ಬಿಎಸ್ವೈ ನೇತೃತ್ವದ ಮೀಟಿಂಗ್ ಅಂತ್ಯ: ಸಭೆಯಲ್ಲಾದ ಚರ್ಚೆಗಗಳು ಇಂತಿವೆ....!
ಇಂದು (ಸೋಮವಾರ) ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬೆಂಗಳೂರಿನ ಎಂಟು ವಲಯಗಳ ಉಸ್ತುವಾರಿಗಳ ಸಭೆ ಅಂತ್ಯವಾಗಿದೆ. ಹಾಗಾದ್ರೆ ಸಭೆಯಲ್ಲಿ ಏನೆಲ್ಲಾ ಚರ್ಚೆಗಳು ನಡೆದವು ಎನ್ನುವ ಹೈಲೇಟ್ಸ್ ಇಲ್ಲಿದೆ ನೋಡಿ.
ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ ಮುಕ್ತಾಯವಾಗಿದ್ದು, ಈ ಸಭೆಯಲ್ಲಿ ನಡೆದ ಮಾತುಕತೆಗಳ ಬಗ್ಗೆ ಸುಧಾಕರ್ ಅವರು ಮಾಹಿತಿ ಕೊಟ್ಟಿದ್ದು, ಅವು ಈ ಮುಂದಿನಂತಿವೆ ನೋಡಿ.
ಲಾಕ್ ಡೌನ್ ವಿಸ್ತರಣೆ ಇಲ್ಲ. ಈ ಮೂಲಕ ಜುಲೈ 22ರಿಂದ ಬೆಂಗಳೂರು ಮಹಾನಗರ ಈ ಮೊದಲಿನಂತೆ ಇರಲಿದೆ.
ಬೂತ್ವಾರು ರಚನೆ ಮಾಡಲಾಗಿದ್ದ ಕಾರ್ಯಪಡೆಯ ಎಷ್ಟು ಸಫಲವಾಯ್ತು? ಎಷ್ಟು ಕಾರ್ಯಪ್ರವೃತರಾಗಿದ್ದಾರೆ ಎನ್ನುವ ಬಗ್ಗೆ ಚರ್ಚೆ ಆಯ್ತು
ಬೆಂಗಳೂರಿನಲ್ಲಿ ಬೂತ್ ಮಟ್ಟದಲ್ಲಿ ಕೊರೋನಾ ನಿಯಂತ್ರಣಕ್ಕೆ ಮಾಡಿರುವ ಸರ್ವೆ ಕಾರ್ಯ ಎಷ್ಟು ಆಗಿದೆ ಎನ್ನುವ ಬಗ್ಗೆ ಚರ್ಚೆ
ಎಂಟು ವಲಯಗಳಿಂದಲೂ ಸಿಎಂ ಮಾಹಿತಿ ಪಡೆದುಕೊಂಡಿದ್ದು, ಸಂಡೇ ಲಾಕ್ಡೌನ್ ಬಗ್ಗೆ ಮಂಗಳವಾರ ನಿರ್ಧರಿಸಲಾಗುತ್ತದೆ
ಸಂಡೇ ಲಾಕ್ ಡೌನ್ ಮತ್ತು ನೈಟ್ ಕರ್ಪ್ಯೂ ಬಗ್ಗೆ ನಾಳೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆಯಾಗಲಿದೆ