ದೇಶದ ಮೊಟ್ಟ ಮೊದಲ ಏರ್ ಆ್ಯಂಬುಲೆನ್ಸ್ಗೆ ಯಡಿಯೂರಪ್ಪ ಚಾಲನೆ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ದೇಶದ ಮೊಟ್ಟ ಮೊದಲ ಸಂಯೋಜಿತ ಏರ್ ಆ್ಯಂಬುಲೆನ್ಸ್ ಗೆ ಮಂಗಳವಾರ ಅಧಿಕೃತವಾಗಿ ಚಾಲನೆ ನೀಡಿದರು. ಬೆಂಗಳೂರಿನ ಜಕ್ಕೂರಿನ ಏರೋಡ್ರೋಮ್ ನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಭಾರತದ ಮೊದಲ ಸಂಯೋಜಿತ ಏರ್ ಆ್ಯಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಿದರು.
ದಕ್ಷಿಣ ಭಾರತದ ಮೊದಲ 'ಇಂಟಗ್ರೇಟೆಡ್ ಏರ್ ಆಂಬುಲೆನ್ಸ್' ಅನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ಘಾಟಿಸಿದರು.
ಐಸಿಎಟಿಟಿ ಸಹಯೋಗದೊಂದಿಗೆ ದಕ್ಷಿಣ ಭಾರತದ ಮೊದಲ 'ಇಂಟಗ್ರೇಟೆಡ್ ಏರ್ ಆಂಬುಲೆನ್ಸ್' ಗೆ ಜಕ್ಕೂರಿನಲ್ಲಿ ಚಾಲನೆ
ಹಲವು ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆಗಳನ್ನು ಒಳಗೊಂಡಿರುವ ಈ ಏರ್ ಆ್ಯಂಬುಲೆನ್ಸ್
ಕೋವಿಡ್ ರೋಗಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆಯನ್ನೂ ಒಳಗೊಂಡಿದೆ.
ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಾ: ಸಿಎನ್ ಅಶ್ವತ್ಥ್ ನಾರಾಯಣ್, ಆರೋಗ್ಯ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ. ಹಾಗೂ ಮೆ: ಐಸಿಎಟಿಟಿ ಕ್ಯಾತಿ ಏರ್ ಆಂಬ್ಯುಲೆನ್ಸ್ ಸರ್ವಿಸ್ ನ ಸಿಇಒ ಡಾ: ಶಾಲಿನಿ ನಲ್ವಾಡ್ ಉಪಸ್ಥಿತರಿದ್ದರು.