ಸಿಎಸ್ ವಿಜಯಭಾಸ್ಕರ್ ಹುಟ್ಟುಹಬ್ಬ, ನಿವೃತ್ತಿ: ಸನ್ಮಾನಿಸಿದ ಸಿಎಂ ಬಿಎಸ್ವೈ
ಬೆಂಗಳೂರು(ಡಿ.28): ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರ ಜನ್ಮದಿನದ ಅಂಗವಾಗಿ ಹಾಗೂ ಇದೇ ಡಿಸೆಂಬರ್ 31 ರಂದು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು(ಸೋಮವಾರ) ಮುಖ್ಯಕಾರ್ಯದರ್ಶಿಗಳನ್ನು ಆತ್ಮೀಯವಾಗಿ ಸನ್ಮಾನಿಸಿದ್ದಾರೆ.
ಸರ್ಕಾರದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ವಿಜಯಭಾಸ್ಕರ್ ಅವರು ಇದೇ ಡಿಸೆಂಬರ್ ರಂದು 31 ನಿವೃತ್ತಿ ಹೊಂದಲಿದ್ದಾರೆ.
![article_image2](https://static-ai.asianetnews.com/images/01etm7fwh2zr09k2xmd2kbskvj/eqtu6jwuuaeywha-jpg_300x163xt.jpg)
ವಿಜಯಭಾಸ್ಕರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ವಿಜಯಭಾಸ್ಕರ್ ಅವರಿಗೆ ಸನ್ಮಾನಿಸಿದ ಸಂಪುಟದ ಸಚಿವರು
ವಿಜಯಭಾಸ್ಕರ್ಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ನೆನೆಪಿನ ಕಾಣಿಕೆ ನೀಡಿ ಸನ್ಮಾನಿಸಿದ ಸಿಎಂ ಯಡಿಯೂರಪ್ಪ
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಅಶ್ವತ್ಥ್ನಾರಾಯಣ, ಸಚಿವರಾದ ಜಗದೀಶ್ ಶೆಟ್ಟರ್, ಆನಂದ್ ಸಿಂಗ್, ಬಿ.ಸಿ.ಪಾಟೀಲ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.