MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Politics
  • 25 ಕೋಟಿ ಜನ 10 ವರ್ಷಗಳಲ್ಲಿ ಬಡತನ ರೇಖೆಯಿಂದ ಹೊರ ಬಂದಿದ್ದಾರೆ: ವಿದೇಶಾಂಗ ಸಚಿವ ಜೈಶಂಕರ್

25 ಕೋಟಿ ಜನ 10 ವರ್ಷಗಳಲ್ಲಿ ಬಡತನ ರೇಖೆಯಿಂದ ಹೊರ ಬಂದಿದ್ದಾರೆ: ವಿದೇಶಾಂಗ ಸಚಿವ ಜೈಶಂಕರ್

ಕೋವಿಡ್ ವೇಳೆ ವಿದೇಶಕ್ಕೆ ಲಸಿಕೆ ನೀಡಿದ್ದೇವೆ. ವಿಶ್ವದಲ್ಲಿ ಭಾರತದ ಘನತೆ ಜಿ 20 ಶೃಂಗಸಭೆ ಮೂಲಕ ಹೆಚ್ಚಿದೆ. ನಾವು 400 ಸ್ಥಾನ ತಲುಪ್ತೇವೆ ಅನ್ನೋದು ಕಾಂಗ್ರೆಸ್ ಚಿಂತೆಗೆ ಕಾರಣವಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರಾದ ಡಾ.ಎಸ್.ಜೈಶಂಕರ್ ಹೇಳಿದರು. 

2 Min read
Govindaraj S
Published : Apr 15 2024, 07:49 PM IST| Updated : Apr 15 2024, 08:28 PM IST
Share this Photo Gallery
  • FB
  • TW
  • Linkdin
  • Whatsapp
17

ಬೆಂಗಳೂರು (ಏ.15): ನಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆಯಾಗಿದೆ. ಮುಂದಿನ ಐದು ವರ್ಷ ಏನು ಮಾಡುತ್ತೇವೆ ಅನ್ನುವುದನ್ನು ಹೇಳಿದ್ದೇವೆ. ಕೇವಲ ಐದು ವರ್ಷ ಮಾತ್ರವಲ್ಲ, ಭವಿಷ್ಯದ ದೃಷ್ಟಿಯಿಂದಲೂ ನಿಮ್ಮ ‌ಸಹಕಾರ ಬೇಕು ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರಾದ ಡಾ.ಎಸ್.ಜೈಶಂಕರ್ ಹೇಳಿದರು. 

27

ನಗರದ 'ಹೊಟೇಲ್ ಶಾಂಗ್ರಿಲಾ'ದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿನ್ನೆ ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆ ಮಾಡಿದ್ದೇವೆ. ಮುಂದಿನ 25 ವರ್ಷಗಳ ಯೋಜನೆ ಇದೆ. ನಾವು ಈಗ 5 ನೇ ಸ್ಥಾನದಲ್ಲಿ ಇದ್ದೇವೆ. ದೇಶದ ಆರ್ಥಿಕ ಪ್ರಗತಿ ಏರುಗತಿಯಲ್ಲಿ ಇದೆ.  25 ಕೋಟಿ ಜನ ಹತ್ತು ವರ್ಷಗಳಲ್ಲಿ ಬಡತನ ರೇಖೆಯಿಂದ ಹೊರ ಬಂದಿದ್ದಾರೆ. ಇದು ದೇಶದ ಬೆಳವಣಿಗೆಯ ಸೂಚಕ ಎಂದರು.

37

ಪ್ರತಿದಿನ ದಿನ ಹೈವೆ, ರೈಲ್ವೆ ಟ್ರಾಕ್ ನಿರ್ಮಾಣ, 7-8 ಏರ್ಪೋರ್ಟ್ ಪ್ರತಿ ವರ್ಷ ನಿರ್ಮಾಣ ಆಗ್ತಿದೆ. ಕೋವಿಡ್ ವೇಳೆ ವಿದೇಶಕ್ಕೆ ಲಸಿಕೆ ನೀಡಿದ್ದೇವೆ. ವಿಶ್ವದಲ್ಲಿ ಭಾರತದ ಘನತೆ ಜಿ 20 ಶೃಂಗ ಸಭೆ ಮೂಲಕ ಹೆಚ್ಚಿದೆ. ನಾವು 400 ಸ್ಥಾನ ತಲುಪ್ತೇವೆ ಅನ್ನೋದು ಕಾಂಗ್ರೆಸ್ ಚಿಂತೆಗೆ ಕಾರಣವಾಗಿದೆ. 

47

ಮೋದಿ ಸರ್ಕಾರ 300 ದಾಟಿದ್ದು ನೋಡಿದೆ ದೇಶ. ಈಗ ಮೋದಿ ಸರ್ಕಾರ 400 ಮುಟ್ಟೋದನ್ನೂ ದೇಶ ನೋಡಲಿದೆ. ಸಬ್ ಅರ್ಬನ್ ರೈಲು ಬೆಂಗಳೂರಿಗೆ ನೀಡಲಾಗಿದೆ. ಹೆಚ್ಎಎಲ್‌ಗೆ ಇಂದು ಫುಲ್ ಆರ್ಡರ್ ಇದೆ ಎಂದರು. ಕಳೆದ ಐದು ವರ್ಷಗಳ ಹಿಂದೆ ಇದು ಡೆಂಜರಲಿ ಇದೆ ಎಂದು ಆರೋಪಿಸಿದ್ರು. 

57

ರಷ್ಯಾ ಉಕ್ರೆನ್ ಯುದ್ಧ ಇಂಡೊ ಪೆಸಿಪಿಕ್ ಕ್ರೈಸಿಸ್ ಎಲ್ಲವನ್ನೂ ಜಾಗತೀಕವಾಗಿ ಎದುರಾಗಿದ್ದ ಬಿಕ್ಕಟ್ಟಿಗೆ ಮೋದಿ ನಿಭಾಯಿಸಿದ್ದಾರೆ. ಇರಾನ್ ಇಸ್ರೇಲ್ ಯುದ್ಧದ ಬಗ್ಗೆ ಮಾತನಾಡಿದ ಅವರು, ಇದು ಸೂಕ್ಷ್ಮ ವಿಚಾರ, ನಾವು ಮಾತಾಡಿದ್ದೇವೆ ಎಂದು ಹೇಳಿದರು. 

67

ಎರಡು ದೇಶಗಳ ಜೊತೆ ಮಾತಾಡಿದ್ದೇವೆ. ರಾಜ್ಯಕ್ಕೆ ಬರ ಪರಿಹಾರ ತಡವಾದ ಬಗ್ಗೆ ಕೇವಲ ಕರ್ನಾಟಕ ಮಾತ್ರ ಅಲ್ಲ ಕೆಲವು ರಾಜ್ಯಗಳದ್ದು ಬಾಕಿ ಇದೆ. ಎನ್ ಡಿ ಆರ್ ಆಫ್ ಗೆ ಅದರದ್ದೆ ಆದ ನಿಯಮ ಇದೆ. ಈಗ ಬಿಡುಗಡೆ ಚುನಾವಣಾ ‌ಕಮಿಷನ್ ಪರ್ಮಿಶನ್ ಬೇಕು. ಅವರ ಅನುಮತಿ ಕೇಳಿದ್ದೇವೆ. Pok ಪಾಕ್ ಆಕ್ರಮಿತ ಕಾಶ್ಮೀರ ಭಾರತದ್ದು ಎಂದರು.

77

ಈ ಸಂದರ್ಭದಲ್ಲಿ ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ್ವಥನಾರಾಯಣ್, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕ ಅವಿನಾಶ್ ಮತ್ತು ರಾಜ್ಯ ಮುಖ್ಯ ವಕ್ತಾರರಾದ ಶ್ರೀ ಅಶ್ವತ್ಥನಾರಾಯಣ್ ಅವರು ಉಪಸ್ಥಿತರಿದ್ದರು.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಬೆಂಗಳೂರು
ಎಸ್ ಜೈಶಂಕರ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved